ಅಮೆರಿಕನ್ನರು ಹಿಡಿಯುವ ಮೊದಲು ನನ್ನನ್ನುಕೊಂದು ಬಿಡಿ: ಲಾಡೆನ್
ರಿಯಾದ್ : ‘ಅಮೆರಿಕನ್ನರು ಹಿಡಿಯುವ ಮೊದಲು ನೀವೇ ನನ್ನನ್ನು ಕೊಂದು ಬಿಡಿ’ ಎಂದು ಅಂತಾರಾಷ್ಟ್ರೀಯ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ತನ್ನ ಅನುಚರರಿಗೆ ಸೂಚಿಸಿದ್ದಾನೆ ಎಂದು ‘ಅಲ್ ವತನ್’ ಪತ್ರಿಕೆ ಬುಧವಾರ ವರದಿ ಮಾಡಿದೆ. ಸೆಪ್ಟೆಂಬರ್ 11ರಂದು ಅಮೆರಿಕ ಮೇಲೆ ನಡೆದ ವಿಧ್ವಂಸಕ ಕೃತ್ಯಕ್ಕೆ ಕಾರಣ ಎನ್ನಲಾಗಿರುವ ಲಾಡೆನ್ನನ್ನು ಜೀವಂತ ಇಲ್ಲವೇ ಶವವಾಗಿ ಹಿಡಿಯಲು ಪಣತೊಟ್ಟಿರುವ ವಿಶೇಷ ಸೇನಾ ಪಡೆ ಮುನ್ನುಗ್ಗುತ್ತಿರುವ ಸಂದರ್ಭದಲ್ಲಿ ಲಾಡೆನ್ ನೀಡಿರುವನೆನ್ನಲಾದ ಈ ಹೇಳಿಕೆ ಸೋಜಿಗವನ್ನುಂಟು ಮಾಡಿದೆ.
ಬಿನ್ ಲಾಡೆನ್ ತನ್ನ ನಿಷ್ಠರಾದ ಹಲವರಿಗೆ ಈ ಸೂಚನೆ ನೀಡಿದ್ದಾನೆ. ತಾನು ತನ್ನ ಜೀವಿತದ ಕೊನೆಯ ವಾರಗಳು ಇಲ್ಲವೇ ದಿನಗಳನ್ನು ಎಣಿಸುತ್ತಿರುವುದಾಗಿಯೂ ಅವನು ಹೇಳಿಕೊಂಡಿದ್ದಾನೆ ಎಂದು ಪ್ಯಾರಿಸ್ನಲ್ಲಿರುವ ಅಮೆರಿಕ ಮತ್ತು ಯೂರೋಪ್ನ ರಾಜತಾಂತ್ರಿಕ ಉನ್ನತ ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.
ಅಮೆರಿಕನ್ನರು ಅಥವಾ ಉತ್ತರ ಮೈತ್ರಿಕೂಟದ ಸದಸ್ಯರು ತನ್ನತ್ತ ಬರುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಿದ್ಧನಿಲ್ಲದ ಲಾಡೆನ್, ತಾನು ಅವರ ಬಂಧಿಯಾದರೆ, ಆದಕ್ಕಿಂತಲೂ ಘೋರ ಸೋಲು ಮತ್ತೊಂದಿಲ್ಲ. ಆದಕಾರಣ ನನ್ನನ್ನು ಕೊಂದು ಬಿಡಿ ಎಂದು ಅನುಚರರಿಗೆ ಹೇಳಿದ್ದಾನೆ ಎಂದು ವರದಿ ತಿಳಿಸಿದೆ.
ಅಮೆರಿಕ ಹಾಗೂ ಉತ್ತಮ ಮೈತ್ರಿಪಡೆ ಆಫ್ಘಾನಿಸ್ತಾನದ ಮೇಲೆ ನಡೆಸಿದ ಸತತ ವಾಯು ಭೂದಾಳಿಯ ಬಳಿಕವೂ ಇನ್ನೂ ತನ್ನನ್ನು ನಂಬಿ, ತನ್ನೊಟ್ಟಿಗಿರುವ ಚಾರರಿಗೆ ಕೃತಜ್ಞತೆ ಸಲ್ಲಿಸಿರುವ ಲಾಡೆನ್, ಇನ್ನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬುದನ್ನು ಅರಿತಿದ್ದಾನೆ. ಈ ಹಿನ್ನೆಲೆಯಲ್ಲಿ ಅಮೆರಿಕನ್ನರು ತನ್ನನ್ನು ಬಂಧಿಸುವ ಸ್ಥಿತಿ ಒದಗಿದರೆ, ಹಿಂದೆ ಮುಂದೆ ನೋಡದೆ, ಕೊಂದು ಬಿಡಿ ಎಂದು ಅವನು ಸೂಚನೆ ನೀಡಿದ್ದಾನೆ ಎಂದು ಅರೆಬಿಕ್ ಡೈಲಿ ಸಹ ತಿಳಿಸಿದೆ.
ಲಾಡೆನ್ ಬಳಿ ಇರುವ ನಿಷ್ಠರು ಆತನ ಆದೇಶ ಪಾಲಿಸುವವರಾಗಿದ್ದು, ಅವರು ಹಾಗೆ ಮಾಡೇ ತೀರುತ್ತಾರೆ ಎಂದೂ ಪತ್ರಿಕೆ ಹೇಳಿದೆ. ಇದೇ ಮಾತನ್ನು ಲಾಡೆನ್ ತನ್ನ ಒಬ್ಬ ಪುತ್ರನಿಗೂ ತಿಳಿಸಿದ್ದು, ಅಮೆರಿಕನ್ನರಾಗಲೀ ಅಥವಾ ಆಪ್ಘನ್ ವಿರೋಧಿಗಳಾರೇ ಆದರೂ ತನ್ನನ್ನು ಬಂಧಿಸುವ ಸಂದರ್ಭದಲ್ಲಿ ಕೊಲ್ಲುವಂತೆ ಪ್ರಾರ್ಥಿಸಿಕೊಂಡಿದ್ದಾನೆ.
ಕೊನೆ ಸಂದೇಶ : ಅಲ್ ವತಾನ್ ಪತ್ರಿಕೆಯ ಪ್ರಕಾರ ಬಿನ್ ಲಾಡೆನ್ ಈಗಾಗಲೇ ವಿಡಿಯೋ ಟೇಪ್ನಲ್ಲಿ ತನ್ನ ರಾಜಕೀಯ ಇಚ್ಛಾಶಕ್ತಿ (ನಿಲುವು) ಅಥವಾ ಆತನ ಕೊನೆಯ ಸಂದೇಶವನ್ನು ರೆಕಾರ್ಡ್ ಮಾಡಿಟ್ಟಿದ್ದಾನೆ. ಈ ಟೇಪ್ ಅನ್ನು ತನ್ನ ಸಾವಿನ ನಂತರ ಪ್ರಸಾರ ಮಾಡುವಂತೆ ಸೂಚಿಸಿದ್ದಾನೆ. ಈ ಟೇಪ್ನಲ್ಲಿ ಅಮೆರಿಕದ ಮೇಲೆ ಮತ್ತಷ್ಟು ದಾಳಿ ನಡೆಸುವಂತೆ ಸಹ ಆತ ಒತ್ತಾಯಿಸಿದ್ದಾನೆ ಎನ್ನಲಾಗಿದೆ.
ಈ ಹೇಳಿಕೆ ಅಥವಾ ಮಾಹಿತಿಗೆ ವ್ಯಕ್ತಿಗತ ದೃಢೀಕರಣ ದೊರೆತಿಲ್ಲವಾದರೂ, ಇತ್ತೀಚಿನ ದಿನಗಳಲ್ಲಿ ಅಮೆರಿಕದ ಆಡಳಿತ - ತಾಲಿಬಾನ್ನಿಂದ ದೂರಸರಿದಿರುವ ಅಧಿಕಾರಿಗಳ ವಿಚಾರಣೆಯಿಂದ ಸಂಗ್ರಹಿಸಿರುವ ಅಂಶಗಳು ಈ ಮಾಹಿತಿಯನ್ನು ಪುಷ್ಟೀಕರಿಸುವಂತಿವೆ.
(ಎ.ಎಫ್.ಪಿ)
ಮುಖಪುಟ / ‘ಆಪರೇಷನ್ ಎಂಡ್ಯೂರಿಂಗ್ ಫ್ರೀಡಂ’
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications