ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಗ್ಬಂಧನ ತೆರವಿಗೆ ಅಷ್ಟೇನೂ ಮಹತ್ವ ಕೊಡಬೇಕಿಲ್ಲ -ಯಶವಂತ ಸಿನ್ಹಾ

By Staff
|
Google Oneindia Kannada News

ನವದೆಹಲಿ : ಭಾರತದ ಮೇಲೆ ಮೇಲಿನ ದಿಗ್ಬಂಧನಗಳನ್ನು ಅಮೆರಿಕ ತೆರವುಗೊಳಿಸಿರುವ ಕುರಿತು ಕೇಂದ್ರ ವಿತ್ತ ಸಚಿವ ಯಶವಂತ ಸಿನ್ಹ ಸಂತೋಷ ವ್ಯಕ್ತಪಡಿಸಿದ್ದಾರೆ. ಆದರೆ, ಈ ವಿಷಯಕ್ಕೆ ಅಷ್ಟೇನೂ ಪ್ರಾಮುಖ್ಯತೆ ಕೊಡಬೇಕಾಗಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಆರ್ಥಿಕತೆಗೆ ಸಂಬಂಧಿಸಿದಂತೆ ದಿಗ್ಬಂಧನಗಳನ್ನು ತೆರವುಗೊಳಿಸಿರುವ ಕ್ರಮ ಒಂದು ಚಿಕ್ಕ ವಿಷಯ. ಕೆಲವು ಮಿಲಿಟರಿ ಸಪ್ಲೈಸ್‌ ಹೊರತುಪಡಿಸಿದಂತೆ ಈವರೆಗೂ ಭಾರತದ ಎಕಾನಮಿ ಚೆನ್ನಾಗಿಯೇ ಇತ್ತು . ಈ ಕಾರಣದಿಂದಾಗಿ ಅಮೆರಿಕದ ಈ ಕ್ರಮ ಭೂಮಿ ಅದುರುವಂತಹ ಬೆಳವಣಿಗೆ ಎಂದೇನೂ ತಮಗೆ ಅನ್ನಿಸುವುದಿಲ್ಲ ಎಂದು ಸಿನ್ಹಾ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್‌ ಸ್ವಾಗತ : ಭಾರತದ ಮೇಲೆ 1998 ರಲ್ಲಿ ಹೇರಿದ್ದ ದಿಗ್ಬಂಧನಗಳನ್ನು ಅಮೆರಿಕ ತೆರವುಗೊಳಿಸಿರುವ ಕ್ರಮವನ್ನು ಕಾಂಗ್ರೆಸ್‌ ಪಕ್ಷ ಸ್ವಾಗತಿಸಿದೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X