ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಣಕಾಸು ಸ್ಥಿತಿ ಆಧರಿಸಿ ಮೀಸಲಾತಿ ಇಲ್ಲ- ಪ್ರಧಾನಿ ವಾಜಪೇಯಿ
ನವದೆಹಲಿ : ಮೀಸಲಾತಿಯನ್ನು ಕಲ್ಪಿಸುವಲ್ಲಿ ಆರ್ಥಿಕ ಪರಿಸ್ಥಿತಿಯನ್ನು ಮಾನದಂಡವನ್ನಾಗಿ ಪರಿಗಣಿಸುವ ವಿಷಯವನ್ನು ಬುಧವಾರ ಲೋಕಸಭೆಯಲ್ಲಿ ತಳ್ಳಿಹಾಕಿರುವ ಪ್ರಧಾನಿ ವಾಜಪೇಯಿ, ದುರ್ಬಲ ವರ್ಗಗಳನ್ನು ಸುಧಾರಿಸುವ ಸಮಾಜ ಆಧಾರಿತ ಮೀಸಲಾತಿ ಪದ್ಧತಿಯನ್ನು ಕೇಂದ್ರ ಸರ್ಕಾರ ಮುಂದುವರಿಸುವುದಾಗಿ ಪ್ರಕಟಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ಸಿನ ಸುಂದರ್ಲಾಲ್ ತ್ರಿವೇದಿ ಅವರು, ಮೀಸಲಾತಿ ನೀಡುವಲ್ಲಿ ವ್ಯಕ್ತಿಗತ ಆರ್ಥಿಕ ಮಾನದಂಡವನ್ನು ಪರಿಗಣಿಸುವ ವಿಷಯ ಸರ್ಕಾರದ ಪ್ರಸ್ತಾವನೆಯಲ್ಲಿದೆಯೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ ವಾಜಪೇಯಿ ಮಾತನಾಡುತ್ತಿದ್ದರು.
ಆರ್ಥಿಕ ಮಾನದಂಡದ ಮೇಲೆ ಮೀಸಲಾತಿ ಕಲ್ಪಿಸಲಾಗುವುದಿಲ್ಲ . ಸಾಮಾಜಿಕ ಅಸಮಾನತೆಯನ್ನು ಕೊನೆಗಾಣಿಸಿ, ಹಿಂದುಳಿದ ವರ್ಗಗಳ ಮಂದಿ ಸುಧಾರಿಸುವಂತಾಗಲು ಪ್ರಸ್ತುತ ಇರುವ ಮೀಸಲಾತಿಯೇ ಅಗತ್ಯ ಎಂದು ವಾಜಪೇಯಿ ಹೇಳಿದರು.
(ಪಿಟಿಐ)
Comments
Story first published: Wednesday, August 29, 2001, 0:00 [IST]