ಮಂಗಳೂರು ವಿವಿ: ರಾಘವೇಂದ್ರರಿಗೆ ಅಮೆರಿಕ ಸೊಸೈಟಿ ಪುರಸ್ಕಾರ
ಮಂಗಳೂರು : ಮಂಗಳೂರು ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಎನ್. ರಾಘವೇಂದ್ರ , ಅಮೆರಿಕಾದ ಆರ್ಕಿಯೋಲಜಿಕಲ್ ಸೊಸಾೖಟಿಯ ಅನುದಾನಕ್ಕೆ ಪಾತ್ರರಾಗಿದ್ದಾರೆ.
ಮಂಗಳ ಗಂಗೋತ್ರಿಯ ಜೀವಶಾಸ್ತ್ರ ವಿಭಾಗದಲ್ಲಿ ಎಂ.ಎಸ್ಸಿ ಮಾಡುತ್ತಿರುವ ರಾಘವೇಂದ್ರ ಅವರು ಜೇಡದ ಬಗ್ಗೆ ಮಾಡಿರುವ ಸಂಶೋಧನಾ ಅಧ್ಯಯನವನ್ನು ಪುರಸ್ಕರಿಸಿ ಈ ಅನುದಾನವನ್ನು ನೀಡಲಾಗಿದೆ. ವಿದ್ಯಾರ್ಥಿಗಳಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆಯುವ ಸಂದರ್ಭದಲ್ಲಿಯೇ ಅಧ್ಯಯನವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಅನುದಾನ ನೀಡಲಾಗುವುದು.
ಆನ್ವಯಿಕ ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ರಾಜಶೇಖರ್ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ರಾಘವೇಂದ್ರ ಅವರು ಅಧ್ಯಯನ ನಡೆಸಿದ್ದರು. ಗೇರು ಹಣ್ಣಿನ ಮರದ ಮೇಲಿರುವ ಜೇಡಗಳು ಆ ಮರದ ಮೇಲಿರುವ ಸೊಳ್ಳೆಗಳನ್ನು ನಿಯಂತ್ರಿಸುತ್ತವೆ. ಆದ್ದರಿಂದ ಈ ಜೇಡಗಳು ಗೇರು ಮರಕ್ಕೆ ಹಾನಿ ಮಾಡುವ ಸೊಳ್ಳೆ ನಾಶಕವಾಗಿ ಕೆಲಸ ಮಾಡುತ್ತವೆ ಎಂಬುದನ್ನು ರಾಘವೇಂದ್ರ ಅವರು ತಮ್ಮ ಅಧ್ಯಯನದಿಂದ ಕಂಡುಕೊಂಡಿದ್ದರು. ಅನುದಾನ 10 ಸಾವಿರ ರೂಪಾಯಿಯನ್ನೊಳಗೊಂಡಿರುತ್ತದೆ.
(ಇನ್ಫೋ ವಾರ್ತೆ)