ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ವೃಷಭ : ಆರೋಗ್ಯದ ವಿಷಯದಲ್ಲಿ ನೆಮ್ಮದಿಯಾಗಿದ್ದೀರಿ. ವ್ಯವಹಾರ, ವಹಿವಾಟುಗಳು ನಿಮ್ಮನ್ನು ಟೂರ್ ಹೋಗುವಂತೆ ಮಾಡಿದರೆ ಆಶ್ಚರ್ಯ ಇಲ್ಲ.
ಮಿಥುನ : ಭೂವ್ಯವಹಾರದಲ್ಲಿ ನಿರೀಕ್ಷಿತ ಜಯ ಸಿಗಬಹುದು. ಹಣ ಕೈ ಬಿಟ್ಟರೂ, ಗೆಲವು ನಿಮ್ಮದಾದುದರಿಂದ ಯೋಚನೆ ಬೇಡ.
ಕಟಕ : ಪ್ರಯಾಣ ಸಂಭವ ಇರುವುದರಿಂದ ರೆಡಿಯಾಗಿರಿ. ಮಕ್ಕಳು ಮತ್ತು ಮನೆಯವರ ಒತ್ತಡದಿಂದ ನೆಮ್ಮದಿ ಕಳೆದುಕೊಳ್ಳುತ್ತೀರಿ. ವಿಪರೀತ ಖರ್ಚು ಅಂತ ಮುಖ ಸಿಂಡರಿಸಬೇಡಿ.
ಸಿಂಹ : ಉದ್ಯೋಗದಲ್ಲಿ ಅಪರೂಪದ ಬಡ್ತಿ ಸಿಕ್ಕರೂ ಅಚ್ಚರಿ ಬೇಕಿಲ್ಲ. ಬಹುದಿನಗಳ ದುಡಿತಕ್ಕೆ ಸಿಕ್ಕ ಪ್ರತಿಫಲವನ್ನು ಸಂತೋಷದಿಂದ ಅನುಭವಿಸುವ ಕಾಲ ನಿಮ್ಮದು.
ಕನ್ಯಾ : ಹೊಸ ಪ್ಲಾನ್ಗಳನ್ನು ಈಗ ಕಾರ್ಯರೂಪಕ್ಕೆ ತರಬಹುದು. ಆದರೆ, ನಿಮ್ಮ ಸ್ನೇಹಿತರು ಮತ್ತು ಬಂಧುಗಳೊಂದಿಗೆ ಹೆಚ್ಚಿನ ನಿಷ್ಠುರಗಳನ್ನು ತಪ್ಪಿಸುವುದು ಒಳಿತು.
ತುಲಾ : ವ್ಯಾಪಾರದ ಕುರಿತು ಈಗಲೇ ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಡ. ಶಿಕ್ಷಣದಲ್ಲಿ ಸಾಕಷ್ಟು ಪ್ರಗತಿ ಸಾಧಿಸಲು ಇದು ಒಳ್ಳೆಯ ಸಮಯ.
ವೃಶ್ಚಿಕ : ಇವತ್ತು ತುಂಬಾ ದಿನಗಳ ಕನಸು ನನಸಾಗುವ ನಿರೀಕ್ಷೆ ಇದೆ. ದೇವರಿಗೆ ಹೊತ್ತಿರುವ ಹರಕಗೆಳನ್ನೆಲ್ಲಾ ಪೂರೈಸುವತ್ತ ಗಮನ ಕೊಡಿ. ಧನಲಾಭವಿದೆ.
ಧನಸ್ಸು :ಕೋಪ ಸಿಟ್ಟುಗಳಿಗೆಲ್ಲಾ ಇವತ್ತು ತಿಲಾಂಜಲಿ ಇಟ್ಟು ದೇವರ ಕೆಲಸದಲ್ಲಿ ನಿರಾಳವಾಗಿ ಪಾಲ್ಗೊಳ್ಳಿ. ಲಕ್ಷ್ಮಿಯನ್ನು ಪೂಜಿಸಿದರೆ ಶುಭವಾಗುವುದು.
ಮಕರ : ಆಫೀಸಿಲ್ಲಿ ಶುಭ ಸುದ್ದಿ ನಿರೀಕ್ಷಿಸುತ್ತೀರಿ. ಸಂಬಳದಲ್ಲಿ ಏರಿಕೆ ಸದ್ಯದ ಎಲ್ಲ ಕಷ್ಟಗಳನ್ನೂ ಮುಂದೂಡುತ್ತದೆ. ಇವತ್ತು ಬರೀ ಲೆಕ್ಕಾಚಾರದ ದಿನವಾಗಿರುತ್ತದೆ.
ಕುಂಭ : ಸುಳ್ಳು ನಿರೀಕ್ಷೆಗಳನ್ನಿಟ್ಟುಕೊಂಡು ಬೇಸರ ತಂದುಕೊಳ್ಳಬೇಡಿ. ಉದ್ಯೋಗದಲ್ಲಿ ಸದ್ಯಕ್ಕೆ ಬಡ್ತಿ ಇಲ್ಲ. ಆದರೆ ಕೆಲಸಗಳು ರಾಶಿಯಾಗಿರುವುದು ತಪ್ಪುವುದಿಲ್ಲ.
ಮೀನ : ಮನೆ ತುಂಬಾ , ಕೈ ತುಂಬಾ ಕೆಲಸಗಳಿರುವಾಗ ಮೈ ತುಂಬಾ ಇರುವ ಸ್ನೇಹಿತರು ಸಹಕರಿಸುವುದು ಅಷ್ಟರಲ್ಲೇ ಇದೆ ಅಲ್ವೇ ? ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ.