ಬೆಂಗಳೂರಿನಲ್ಲಿ ಶುಭ್ರಾಕಾಶವನ್ನು ಕಾಣುವಿರಿ
ಸಿಗರೇಟು ಕೈ ಸುಟ್ಟದ್ದೆಷ್ಟು ? ಸಕ್ಕರೆಯ ಸಿಹಿ ಕಡಿಮೆಯಾಯಿತಾ ? ಈ ವರ್ಷವಾದರೂ ಕಾರು ಕೊಳ್ಳಲು ಸಾಧ್ಯವಾ ? ಷೇರುಗಳ ಕತೆಯೇನು ? ಇಂಥಾ ಎಲ್ಲಾ ಪ್ರಶ್ನೆ, ಗೊಂದಲಗಳು ಬಜೆಟ್ಟಿಗೆ ಮುಖ ಮಾಡಿಕೊಂಡ ನಮ್ಮಂಥವರಿಗೆ. ಯಾವುದರ ಸೊಲ್ಲಿಗೂ ಕಿವಿ ಕೊಡದೆ ಮುಂದುವರೆಯುವುದು ಹವಾಮಾನದ ಜಮಾನ.
ಹವೆ ಸಾಗುವುದು ತನಗಿಷ್ಟ ಬಂದಂತೆ. ಅದರ ಕರುಣ- ಹುಚ್ಚು ಗಳ ಕೆರಳುವಿಕೆಗೆ ಯಾರೂ ಕಾರಣರಾಗಲು ಸಾಧ್ಯವಿಲ್ಲ . ನಮ್ಮ ಮಾಜಿ ಮಂತ್ರಿ ಜಾನ್ನಂತವರು ಏನನ್ನಾದರೂ ಅಪವಾದ ನುಡಿಯುವುದಾದಲ್ಲಿ ... ಆ ಮಾತು ಬೇಡ ಬಿಡಿ. ಅವರೀಗ ಜಾಣರಾಗಿದ್ದಾರೆ. ಜಾಣರು ಮಾತನಾಡುವುದಿಲ್ಲ (ಗಟ್ಟಿಯಾಗಿ).
ತನ್ನಿಚ್ಚೆಯಂತೆಯೇ ನಡೆದಿರುವ ಒಣಹವೆ ರಾಜ್ಯದಲ್ಲಿ ಮುಂದುವರಿದಿತ್ತು . ಉತ್ತರ ಕರ್ನಾಟಕದ ಒಳನಾಡು ಹಾಗೂ ಕರಾವಳಿ ಕರ್ನಾಟಕದ ಕೆಲ ಭಾಗಗಳಲ್ಲಿ ದಿನದ ಕನಿಷ್ಠ ತಾಪಮಾನ ಸ್ವಲ್ಪ ಬಾಡಿತ್ತು . ಉಳಿದಂತೆ ಬಿಸಿಲ ಬೇಗೆ ರಾಜ್ಯದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿತ್ತು . ದಿನದ ಕನಿಷ್ಠ ಉಷ್ಣಾಂಶ 14 ಡಿಗ್ರಿ ಸೆಲ್ಷಿಯಸ್ ಬೆಳಗಾವಿ ವಿಮಾನ ನಿಲ್ದಾಣ ಹಾಗೂ ಶಿವಮೊಗ್ಗದಲ್ಲಿ ದಾಖಲಾಗಿತ್ತು .
ಹವಾಮಾನ ಇಲಾಖೆಯ ವರದಿಯಂತೆ ಸದ್ಯಕ್ಕೆ ಹವಾಮಾನದಲ್ಲಿ ವೈಪರೀತ್ಯಗಳು ಕಂಡು ಬರುವ ಸಾಧ್ಯತೆಗಳಿಲ್ಲ . ಒಣಹವೆಯೇ ಮುಂದುವರಿಯುತ್ತದೆ. ಬೆಂಗಳೂರಿನಲ್ಲಿ ಶುಭ್ರಾಕಾಶವನ್ನು ಕಾಣಬಹುದು. ಗುರುವಾರದ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಷಿಯಸ್ ಆಸುಪಾಸಿನಲ್ಲಿರುತ್ತದೆ. ನಾಳೆ ಭೇಟಿಯಾಗುವ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications