ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ವೃಷಭ : ಕಾರ್ಯ ಜಯ. ಅಂದ ಮೇಲೆ ಮುಗಿಯಿತು ಬಿಡಿ. ಇವತ್ತಿನ ದಿನವೆಲ್ಲಾ ಬಿರಿkುಯಾಗಿದ್ದರೂ ಆ ಆಯಾಸ ಗೊತ್ತಾಗುವುದಿಲ್ಲ. ಮನೆ ಮಂದಿಯಾಂದಿಗೂ ಚೆನ್ನಾಗಿ ಹರಟೆ ಹೊಡೆಯುತ್ತೀರಿ.
ಮಿಥುನ : ಪ್ರವಚನ, ಭಾಷಣಗಳಿಂದ ಮತ್ತಷ್ಟು ತಲೆ ಕೆಡಿಸಿಕೊಳ್ಳುವುದಕ್ಕಿಂತ ಮೌನವಾಗಿರುವುದು ಒಳ್ಳೆದು. ನಿಮ್ಮ ಗೊಂದಲಗಳನ್ನು ಇನ್ನೊಬ್ಬರಿಗೆ ಹರಡಿಸಿದರೆ ಇರುವ ಕೆಲವೇ ಸ್ನೇಹಿತರೂ ದೂರವಾಗಬಹುದು.
ಕಟಕ : ಇವತ್ತು ನಿಮ್ಮ ದೂರದ ಬಂಧುಗಳು ನಿಮ್ಮ ಮನೆಗೆ ಬರಬಹುದು. ಅಥವಾ ಅವರು ಏನಾದರೂ ಶುಭ ಸುದ್ದಿ ಕಳುಹಿಸಬಹುದು. ಎಂದೋ ಪ್ಲಾನ್ ಹಾಕಿಕೊಂಡು ಕೈ ಬಿಟ್ಟಿರುವ ಯೋಜನೆ ಮತ್ತೆ ನಿಮಗೆ ನೆನಪಾಗುತ್ತದೆ.
ಸಿಂಹ : ತುಂಬಾ ದಿನಗಳಿಂದ ಮರೆತು ಹೋಗಿರುವ ಸ್ನೇಹಿತರ ನೆನಪು ಕಾಡುತ್ತವೆ. ಆದರೆ ನಿಮ್ಮ ಕ್ಷುಲ್ಲಕತನದಿಂದ ಅವರು ರೋಸಿ ಹೋಗಿಬಿಟ್ಟಿದ್ದಾರೆ. ನೆನಪುಗಳು ಸಹಕರಿಸಲೊಲ್ಲವು. ಯಾಕೆ ಸಿನೆಮಾ ಪ್ರೋಗ್ರಾಂ ಹಾಕಿಕೊಂಡು ಸ್ವಲ್ಪ ರಿಲ್ಯಾಕ್ಸ್ ಆಗಬಾರದು.
ಕನ್ಯಾ : ಹುಲ್ಲು ಕಡ್ಡಿಯಿಂದಾಗುವ ಕೆಲಸಕ್ಕೆ ಬೆಟ್ಟ ಕಿತ್ತಿಡುವ ಪ್ರಯತ್ನ ಯಾಕೆ ? ಎಲ್ಲ ಇವತ್ತು ನಿಮ್ಮ ಮೂಡ್ನ್ನು ಅವಲಂಬಿಸಿರುತ್ತದೆ.
ತುಲಾ : ದೂರದ ಪ್ರಯಾಣ ಸದ್ಯದಲ್ಲಿಯೇ ನಿಮ್ಮ ಹಣ ಖಾಲಿ ಮಾಡಲಿದೆ. ಹಿರಿಯರು ಹೇಳುವ ವಿಚಾರಗಳ ಕುರಿತು ಅಸಡ್ಡೆ ಬೇಡ. ನೀವು ಮನಸ್ಸು ಮಾಡಿದರೆ ಶುಭ ಕಾರ್ಯಕ್ಕೂ ಇದು ಅನುಕೂಲ ಕಾಲ.
ವೃಶ್ಚಿಕ : ಬೆಟ್ಟದಷ್ಟು ನೋವು ಎದೆಯಲ್ಲಿ ಇಟ್ಟುಕೊಂಡಿರುವುದನ್ನು ಮರೆತು ಮನೆ ಮಂದಿಯಾಂದಿಗೆ ಖುಷಿಯಿಂದ ನಲಿಯುತ್ತೀರಿ. ಉಳಿದಂತೆ ಮನೆಯಲ್ಲಿನ ಮಾತುಕತೆಗಳು ಸಹಜ ತಾನೇ ? ಅದಕ್ಕೆಲ್ಲಾ ಕಿರಿಕಿರಿ ಮಾಡಿಕೊಂಡರೆ ಆಗುತ್ತದಾ ?
ಧನಸ್ಸು : ತಂತಿ ಮೇಲೆ ನಡೆಯುತ್ತಿರುವಷ್ಟು ಜಾಗ್ರತೆಯಿಂದಿರಬೇಕು. ವಿಶ್ವಾಸ, ನಂಬಿಕೆ ಎಲ್ಲ ಸ್ವಲ್ಪ ಸಮಯ ತುಸು ದೂರವಿರಲಿ. ಈ ಸಮಯವನ್ನು ನಿಭಾಯಿಸಿಕೊಂಡು ಬಿಟ್ಟರೆ ಆಮೇಲೆ ಗೆಲ್ಲುತ್ತೀರಿ.
ಮಕರ : ವಾದ ವಿವಾದಗಳು ಪ್ರಯೋಡಜನವಿಲ್ಲ. ಸ್ನೇಹಿತರನ್ನು ಕನ್ವಿನಸ್ ಮಾಡುವ ಹುಚ್ಚು ಸಾಹಸ ಬೇಡ. ನಿಮ್ಮ ಯೋಚನೆಗಳು ಇತರರಿಗೆ ತೊಂದರೆ ಕೊಡಬಹುದು ಅನ್ನುವುದು ನಿಮಗೆ ಸರಿಯಾಗಿ ಮನವರಿಕೆ ಆದ ಮೇಲೆ ಕೂಡ ಯಾಕೆ ಈ ನೋವು ?
ಕುಂಭ : ಪ್ರಶಸ್ತಿ ಸನ್ಮಾನಗಳ ಸುದ್ದಿ ಇವತ್ತು ನಿಮ್ಮನ್ನು ತಲುಪಬಹುದು. ಎಂದೋ ಕೊಟ್ಟಿರುವ ಸಾಲ ಇವತ್ತು ನಿಮ್ಮ ಕೈ ಸೇರುತ್ತದೆ. ಒಂದರ್ಥದಲ್ಲಿ ಧನಲಾಭವೇ.
ಮೀನ : ಆಫೀಸಿನಲ್ಲಿ ಕೈ ತುಂಬಾ ಕೆಲಸಗಳಿರುವುದರಿಂದ ಬೇರೆ ಯೋಚನೆಗಳಿರುವುದಿಲ್ಲ. ಅಲ್ಲದೆ ಸ್ಪರ್ಧೆ, ಪೈಪೋಟಿಗಳಿಗೆ ನಿಮಗೆ ವೇದಿಕೆಗಳು ಸಿಗುವುದು ತುಂಬಾ ಕಷ್ಟ. ಆದ್ದರಿಂದ ನೀವು ನಿಮ್ಮ ಅಧ್ಯಯನದತ್ತ ಹೆಚ್ಚು ಗಮನ ಕೊಡುವುದಕ್ಕಾಗುತ್ತದೆ.