ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೀತಪತ್ರಿಕೆಗಳ ನಿಯಂತ್ರಣಕ್ಕೆ ರಾಜ್ಯ ಪ್ರೆಸ್‌ ಕೌನ್ಸಿಲ್‌- ಬಿಕೆಸಿ

By Staff
|
Google Oneindia Kannada News

ಕುಂದಾಪುರ : ರಾಜ್ಯದಲ್ಲಿ ಹೆಚ್ಚುತ್ತಿರುವ ಪೀತ ಪತ್ರಿಕೆಗಳನ್ನು ನಿಯಂತ್ರಿಸಲು ಭಾರತೀಯ ಪ್ರೆಸ್‌ ಕೌನ್ಸಿಲ್‌ ಮಾದರಿಯಲ್ಲಿ ರಾಜ್ಯ ಪ್ರೆಸ್‌ ಕೌನ್ಸಿಲ್‌ ಸ್ಥಾಪಿಸಲು ಸರ್ಕಾರ ಉದ್ದೇಶಿಸಿದೆ ಎಂದು ಮಾಹಿತಿ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್‌ ಹೇಳಿದ್ದಾರೆ.

ರಾಜ್ಯ ಪ್ರೆಸ್‌ ಕೌನ್ಸಿಲ್‌ ಸ್ಥಾಪನೆ ಸಂಬಂಧ ಸರ್ಕಾರ ಸದ್ಯದಲ್ಲೇ ಅಧಿಸೂಚನೆಯನ್ನು ಹೊರಡಿಸುವುದೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಸಚಿವರು ಹೇಳಿದರು. ಜಾಹಿರಾತುಗಳನ್ನು ನೀಡುವಾಗ ಸಣ್ಣ ಪತ್ರಿಕೆಗಳಿಗೆ ಆದ್ಯತೆ ನೀಡುವಂತೆ ಪಿ. ರಾಮಯ್ಯ ಸಮಿತಿ ನೀಡಿರುವ ವರದಿಯ ಪ್ರಕಾರ, ಈಗಾಗಲೇ ಎಲ್ಲಾ ಇಲಾಖೆಗಳಿಗೆ ಆದೇಶಗಳನ್ನು ಕಳುಹಿಸಲಾಗಿದೆ ಎಂದರು.

ಇದಕ್ಕೂ ಮುನ್ನ ಕೊ.ಮ. ಕಾರಂತ್‌ ಪ್ರತಿಷ್ಠಾನದ ಪ್ರಶಸ್ತಿಯನ್ನು ವಿಜ್ಞಾನಿ ಡಾ. ಕುಂದಾಪುರ ಕರ್ನಾಕರ್‌ ಅವರಿಗೆ ಚಂದ್ರಶೇಖರ್‌ ವಿತರಿಸಿದರು. ಅವರು ಹೊರ ತರುತ್ತಿರುವ ಸಾಪ್ತಾಹಿಕ ಕುಂದಪ್ರಭ ಒಂಭತ್ತು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಅವರನ್ನು ಗೌರವಿಸಲಾಗುತ್ತಿದೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X