ಓ ಕಲಕತ್ತ ! ಇನ್ನು ಮುಂದೆ ನೀನು ಕೋಲ್ಕಟ
ನವದೆಹಲಿ : ಸ್ಥಳನಾಮಗಳನ್ನು ಬದಲಾಯಿಸುವ ಟ್ರೆಂಡ್ ಇದೀಗ ಜೋರು ಚಾಲ್ತಿಯಲ್ಲಿದೆ. ಇದೊಂದು ಜಾಗತಿಕ ಕಾಯಿಲೆ ಎಂದು ಕರೆದರೂ ಅಡ್ಡಿಯಿಲ್ಲ. ಭಾರತದಲ್ಲಿ ಈ ಟ್ರೆಂಡ್ ವಿಚಾರಾತ್ಮಕವಾಗಿರುವುದು ಬಿಟ್ಟು ಭಾವನಾತ್ಮಕವಾಗಿ ಬೆಳೆಯುತ್ತಿರುವುದು ಇನ್ನೊಂದು ಸೋಜಿಗ. ಇವತ್ತಿನ ಸುದ್ದಿ ಹೇಳುವುದಕ್ಕೆ ಮುಂಚೆ ನಿಮಗೊಂದು ವಿಚಾರ ಹೇಳಬೇಕೆನಿಸುತ್ತಿದೆ. ಕರ್ನಾಟಕದಲ್ಲಿ ಎಷ್ಟೋ ಊರು, ರಸ್ತೆಗಳ ಹೆಸರು ನಿರಂತರ ಬದಲಾಗುತ್ತಲೇ ಇವೆ. ಇವತ್ತು ರಾಜೀವಗಾಂಧೀ ರಸ್ತೆ ಇದ್ದದ್ದು ನಾಳೆ ಇಂದಿರಾಗಾಂದೀ ರಸ್ತೆ ಆಗಿಬಿಟ್ಟಿರುತ್ತದೆ. ಇಲ್ಲಿ ಯಾರೂ ಶಾಶ್ವತ ಅಲ್ಲ ಎನ್ನುವ ಸೂಚನೆ ಇದಾಗಿರಬಹುದೇ ? ನಗೆಯು ಬರುತಿದೆ.
ಅದೇನೇ ಇರಲಿ. ವಿಧಾನ ವೀಧಿ ಅಂಥ ಒಳ್ಳೆ, ಅರ್ಥಪೂರ್ಣ, ಗುಣವಾಚಕ ನಾಮಧೇಯವನ್ನು ಅಳಿಸಿ ಅಂಬೇಡ್ಕರ್ ರಸ್ತೆ ಎಂದು ಬದಲಾಯಿಸಿದಾಗ ಪೇಚು ಪಟ್ಟುಕೊಂಡವರಲ್ಲಿ ನೀವೂ ಒಬ್ಬರಾಗಿರಬಹುದು. ಯಾರನ್ನೋ ಓಲೈಸುವ ನಿಮಿತ್ತ ನಮ್ಮ ಮೈಮನಗಳ ಸುಳಿಯಲ್ಲಿ ಅವಿಭಾಜ್ಯ ಅಂಗವೇ ಆಗಿ ನೆಲೆಸಿರುವ ಪ್ರೀತಿಯ ಹೆಸರುಗಳನ್ನು ಬದಲಾಯಿಕೊಳ್ಳುತ್ತಾ ಹೋಗುವುದು ಮುಜಗರ ತರಿಸುತ್ತದೆ. ನಮ್ಮ ಹೆಸರೇ ಬದಲಾದ ಹಾಗೆ ಭಾಸವಾಗುತ್ತದೆ.
ಈ ಹೊತ್ತು ಬದಲಾಗುತ್ತಿರುವ ಊರು, ಕೇರಿ, ರಾಜ್ಯ, ರಾಷ್ಟ್ರಗಳ ಹೆಸರಿನ ಸಾಲಿಗೆ ಈಗ ಕಲಕತ್ತ ಸೇರ್ಪಡೆಯಾಗುತ್ತಿದೆ. ರಾಜ್ಯದ ಹೆಸರನ್ನು ಕಲಕತ್ತದಿಂದ ಕೋಲ್ಕಟ ಎಂದು ಬದಲಾಯಿಸಬೇಕೆಂಬ ಆ ರಾಜ್ಯದ ಮನವಿಗೆ ಕೇಂದ್ರ ಸರಕಾರ ಶನಿವಾರ ಹಸಿರು ನಿಶಾನೆ ತೋರಿಸಿದೆ. ಕೂಲಂಕಷವಾಗಿ ಪರಿಶೀಲಿಸಿದ ನಂತರ ಹೆಸರನ್ನು ಬದಲಾಯಿಸಬೇಕೆಂಬ ರಾಜ್ಯದ ಮನವಿಯನ್ನು ಕೇಂದ್ರ ಒಪ್ಪಿಕೊಂಡಿತು ಎಂದು ಅಧಿಕೃತ ಪ್ರಕಟಣೆ ಹೆಳುತ್ತಿದೆ.
ಬಾಂಬೆ ಮತ್ತು ಮದರಾಸು ಮಹಾನಗರಗಳ ಹೆಸರು ಕ್ರಮವಾಗಿ ಮುಂಬೈ ಮತ್ತು ಚೆನ್ನೈ ಎಂದು ಈಗಾಗಲೇ ಬದಲಾಗಿದೆ. ಹೆಸರನ್ನು ಬದಲಿಸಿಕೊಳ್ಳುತ್ತಿರುವ ಮೂರನೇ ಮಹಾನಗರದ ಸಾಲಿಗೆ ಇದೀಗ ಕಲಕತ್ತ , ಸಾರಿ ಕೋಲ್ಕಟ ಸೇರುತ್ತಿದೆ.
( ಇನ್ಫೋ ವಾರ್ತೆ )-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications