ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭದ್ರಾವತಿಯಲ್ಲಿ ಅಗಲಿದ ಕವಿಗಳ ಸಂಸ್ಮರಣೆ

By Staff
|
Google Oneindia Kannada News

ಭದ್ರಾವತಿ : ಉಕ್ಕಿನ ನಗರ ಭದ್ರಾವತಿಯ ಹಳೇ ನಗರದಲ್ಲಿ ‘ಸಂಸಾರ’ ಕವಿ ನಮನ ಕಾರ್ಯಕ್ರಮ ಏರ್ಪಡಿಸಿತ್ತು. ಅಗಲಿದ ಮೂವರು ಸಾಹಿತಿಗಳಾದ ಎಸ್‌.ವಿ. ಪರಮೇಶ್ವರಭಟ್‌, ಹಾಮಾ. ನಾಯಕ್‌ ಹಾಗೂ ಕು.ಶಿ. ಹರಿದಾಸಭಟ್ಟರ ಸಂಸ್ಮರಣೆ ಕಾರ್ಯಕ್ರಮವೂ ನಡೆಯಿತು.

ಕವಿ ಪಂಚಾಕ್ಷರಯ್ಯನವರು ಪರಮೇಶ್ವರ ಭಟ್ಟರ ಬಹರದಲ್ಲಿನ ಮಧುರಾನುಭವಗಳನ್ನು ರಸವತ್ತಾಗಿ ವರ್ಣಿಸಿದರು. ನವಿರಾದ ಬಹರವನ್ನು ಕನ್ನಡಿಗರಿಗೆ ಪರಿಚಯಿಸಿದ ಭಟ್ಟರ ಸಾಧನೆಯನ್ನು ಕೊಂಡಾಡಿದರು. ಕು.ಶಿ. ಹರಿದಾಸ ಭಟ್ಟರ ಸಾಹಿತ್ಯ ಸೇವೆ ಹಾಗೂ ಅಂಕಣಕಾರರಾಗಿ, ಲೇಖಕರಾಗಿ ಹಾ.ಮಾ.ನಾಯಕ್‌ ನೀಡದ ಕೊಡುಗೆಯನ್ನೂ ವಿವರಿಸಿದರು. ಸಂಸ್ಥೆಯ ಅಧ್ಯಕ್ಷ ಕೃಷ್ಣ ಎಸ್‌. ಭಟ್‌ ಅಧ್ಯಕ್ಷತೆ ವಹಿಸಿದ್ದರು.

ಮುಖಪುಟ / ಊರು ಕೇರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X