ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ವೃಷಭ : ಎಂದೋ ಹಾಕಿದ ಬಂಡವಾಳ ಕೈ ಸೇರಬಹುದು. ಅದೇನೋ ಪ್ರೋಗ್ರಾಂ ಹಾಕಿಕೊಂಡಿದ್ದೀರಲ್ಲ , ಅದನ್ನು ಕೊಳೆಸಬೇಡಿ. ಆರಂಭಿಸಲು ಇದು ಸಕಾಲ.
ಮಿಥುನ : ಇಂದು ಧನಲಕ್ಷ್ಮಿ ನಿಮ್ಮತ್ತ ನಡೆದು ಬರಲಿದ್ದಾಳೆ. ದಾಕ್ಷಿಣ್ಯ, ಕಟ್ಟು ಪಾಡುಗಳಿಗೆ ಹೆಚ್ಚು ಒತ್ತು ಕೊಟ್ಟರೆ ಸೋಲುತ್ತೀರಿ. ಸ್ವಂತಿಕೆಯನ್ನು ಉಪಯೋಗಿಸಿಕೊಳ್ಳಬೇಕು.
ಕಟಕ : ಎಂಥ ಸುದಿನ ಇದು ಗೊತ್ತಾ. ಆತ್ಮ ತೃಪ್ತಿಗಿಂತ ಬೇರೇನು ಬೇಕು ? ಮನೆ ಮಠ ಅಂತ ತಲೆ ಕೆಡಿಸಿಕೊಳ್ಳುವುದು ನಿಮಗಿಷ್ಟ ತಾನೇ... ದಿನ ಪೂರ್ತಿ ಆ ಯೋಗ ನಿಮ್ಮ ಮುಂದಿದೆ.
ಸಿಂಹ : ಮಿತ್ರ ವಿಯೋಗ. ಬೆಚ್ಚನೆಯಾಗಿ, ಹಿತವಾಗಿ ಸಲಹುತ್ತಿದ್ದ, ಪ್ರಾಮಾಣಿಕವಾಗಿ ಪ್ರೀತಿಸುತ್ತಿದ್ದ ನಿಮ್ಮ ಸ್ನೇಹಿತ ದೂರವಾಗಲಿದ್ದಾನೆ.
ಕನ್ಯಾ : ಸಮಸ್ಯೆಗಳ ರಾಶಿ ನಿಮ್ಮ ಮುಂದೆ ಕೂತಿದೆ ಅಂತ ತಲೆ ಬಿಸಿ ಬೇಡ. ಸಮಸ್ಯೆಯನ್ನು ಅಗೆದು ತೆಗೆಯಿರಿ. ಅಲ್ಲಿ ಚಿನ್ನವಿದೆ. ಪ್ರೇಯಸಿಯನ್ನು ಅಷ್ಟೊಂದು ಸದರ ಮಾಡುವುದೇ, ಒಳ್ಳೆದಲ್ಲ.
ತುಲಾ : ಇವತ್ತು ದಾನಿಯಾಗುವ ಭಾಗ್ಯವಿದೆ. ಆ ಜೀವ ಸಾಯುವ ವರೆಗೆ ನಿಮ್ಮ ಸ್ಮರಿಸಿಕೊಳ್ಳುತ್ತದೆ. ಕಿಸೆ ಖಾಲಿಯಾಯಿತೆಂದು ಸಿಡುಕು ಸಲ್ಲ. ಎಷ್ಟು ಬೇಲ್ಪುರಿ ಖಾಲಿ ಮಾಡಿಲ್ಲ, ಸಿಗರೇಟುಗಳನ್ನು ಸುಟ್ಟಿಲ್ಲ ನೀವು ?
ವೃಶ್ಚಿಕ : ಕೆಲಸಗಳು ಗುಡ್ಡೆ ಬಿದ್ದಿವೆ. ಯಾರದಾದ್ರೂ ಸಹಾಯ ಸಿಕ್ಕರೆ, ಖಂಡಿತಾ ಗೆಲ್ಲುತ್ತೀರಿ. ತಾಳ್ಮೆ , ಗೆಲುವನ್ನು ತನ್ನ ಪಕ್ಕ ಕೂರಿಸಿಕೊಂಡಿದೆ.
ಧನಸ್ಸು : ಇವತ್ತಿನ ಸಂಜೆ ನಿಮ್ಮದಲ್ಲ. ಪ್ರೇಯಸಿಯದ್ದು. ಅವಳ ಸಂತೋಷ ನಿಮ್ಮ ಮುದಗೊಳಿಸದೇ. ಸೋ ಡೋಂಟ್ ವರಿ.
ಮಕರ : ಈ ಖಾಲಿತನದಿಂದ ಏನೂ ಆಗುವುದಿಲ್ಲ. ಕೊಡವಿ ಎದ್ದು ಬಿಡಿ. ನಡೆಯಲು ನಿಮಗೆ ಬೇರೆಯವರು ಹೇಳಿಕೊಡಬೇಕೇ ?
ಕುಂಭ : ಇವತ್ತು ನಡೆಯುವ ಬದಲಾವಣೆಗಳು ಕ್ಷಣ ನಿಮ್ಮ ಧೃತಿ ಗೆಡಿಸಿದರೂ, ಆಗೋದೆಲ್ಲಾ ಒಳ್ಳೆಯದಕ್ಕೇ. ಜಗಳ ಕಾದಿದೆ. ಭಯ ಬೇಡ.
ಮೀನ : ಕೆಲಸವಾಗಬೇಕಿದ್ದರೆ ಸ್ವಲ್ಪ ಗಟ್ಟಿ ಮನಸ್ಸಿರಬೇಕು. ಪರಿಸ್ಥಿತಿಯ ಲಾಭ ಪಡೆಯುವ ಬುದ್ಧಿ ಇಲ್ಲಿ ನಡೆಯುವುದಿಲ್ಲ. ನೇರ ವ್ಯಕ್ತಿತ್ವವಿದ್ದರೆ ಬದುಕುತ್ತೀರಿ. ಜಗಜ್ಜಾಹೀರಾಗಿರುವ ವಿಷಯವನ್ನು ಮುಚ್ಚಿಟ್ಟಿದ್ದೇನೆ ಎಂಬ ಜಂಭ ಬೇಡ.