ನಿರಂತರ ಸಂಶೋಧನೆಗೆ ಒಗ್ಗಿದ, ಬಗ್ಗಿದ ಮನಸ್ಸು
ರಾಮನ್ ಜನಿಸಿದ್ದು ತಿರುಚಿನಾಪಳ್ಳಿಯಲ್ಲಿ. ಇವರ ತಂದೆ ಚಂದ್ರಶೇಖರನ್, ತಾಯಿ ಪಾರ್ವತಿ ಅಮ್ಮಾಳ್, ರಾಮನ್ ತಮ್ಮ ಬಾಲ್ಯವನ್ನು ಕಳೆದದ್ದು ವಿಶಾಖಪಟ್ಟಣದಲ್ಲಿ. ಮೊದಲಿನಿಂದಲೂ ವಿಜ್ಞಾನದ ಬಗ್ಗೆ ಅಪಾರ ಆಸಕ್ತಿ ತಳೆದಿದ್ದ ರಾಮನ್ ಏಳು ವರ್ಷದ ಬಾಲಕರಾಗಿದ್ದಾಗಲೇ ಗನೋಸ್ ಫಿಸಿಕ್ಸ್ ಹಾಗೂ ಇನ್ನಿತರೇ ಪುಸ್ತಕಗಳನ್ನು ಅಭ್ಯಸಿಸಿ ಹೊಸತನ್ನು ಹುಡುಕುವ ಕಾಯಕದಲ್ಲಿ ನಿರತರಾಗಿದ್ದರು. ವಯಸ್ಸಿಗೂ ಮೀರಿದ ಚುರುಕುತನ, ಸಂಶೋಧನೆಯ ತುಡಿತ ಅವರಲ್ಲಿ ಕಾಣುತ್ತಿತ್ತು.
ನಂತರ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವಿದ್ಯಾಭ್ಯಾಸ. ಭೌತಶಾಸ್ತ್ರ ವಿಷಯದಲ್ಲಿ ಪ್ರಥಮ ರ್ಯಾಂಕ್ನೊಂದಿಗೆ ಎಂ.ಎ. ಪದವಿ. ತಮ್ಮ ಕಾಲೇಜು ವ್ಯಾಸಂಗಾವಧಿಯಲ್ಲೇ ಅನ್ವೇಷಣಾ ಪ್ರಯೋಗ ನಡೆಸಲು ರಾಮನ್ ಕಾಲೇಜಿನ ಅನುಮತಿ ಕೋರಿದ್ದರು ಆದರೆ, ಅವರಿಗೆ ಅನುಮತಿ ನಿರಾಕರಿಸಲಾಗಿತ್ತು.
ಆದರೆ, ಪ್ರಥಮ ರ್ಯಾಂಕ್ನೊಂದಿಗೆ ಎಂ.ಎ ಪದವಿ ಪಡೆದ ರಾಮನ್ರನ್ನು ಮದ್ರಾಸು ಸರಕಾರ ಅಖಿಲ ಭಾರತ ಸ್ಪರ್ಧಾ ಪರೀಕ್ಷೆಗೆ ಹೆಸರಿಸಿತ್ತು. ಆ ಪರೀಕ್ಷೆಯಲ್ಲೂ ರಾಮನ್ ಪ್ರಥಮ ರ್ಯಾಂಕ್ ತಮ್ಮದಾಗಿಸಿಕೊಂಡ ರಾಮನ್ 1907ರಲ್ಲಿ ಕಲ್ಕತ್ತಾದಲ್ಲಿ ಅಸಿಸ್ಟೆಂಟ್ ಅಕೌಂಟೆಂಟ್ ಜನರಲ್ ಆಗಿ ನೇಮಕಗೊಂಡರು. ಅಂದಿನ ಜನರಲ್ಲಿ ರಂಗು - ರಂಗಿನ ಕಲ್ಪನೆ ಮೂಡಿಸಿದ್ದ ರಂಗೂನ್, ನಾಗಪುರಗಳಲ್ಲೂ ಅಧಿಕಾರಿಯಾಗಿ ಜೀವನ ಸಾಗಿಸಿದರು.
ಉನ್ನತ ಅಧಿಕಾರಿಯಾಗಿದ್ದರೂ, ರಾಮನ್ ಮನಸ್ಸಿನಲ್ಲಿ ವೈಜ್ಞಾನಿಕ ಪ್ರಜ್ಞೆ, ಆಸಕ್ತಿ, ಹೊಸತನ್ನು ಹುಡುಕುವ ತವಕದ ತುಡಿತ. ಈ ತುಡಿತವೇ ಅಧಿಕಾರಿಯ ವೃತ್ತಿಯಿಂದ ರಾಮನ್ರನ್ನು ಕಲ್ಕತ್ತಾ ವಿ.ವಿ.ಯ ಪ್ರಾಧ್ಯಾಪಕ ವೃತ್ತಿಗೆ ಎಳೆದು ತಂತು.
ಬೆಂಗಳೂರಲ್ಲಿ ರಾಮನ್: ಸಂಶೋಧನೆಯಲ್ಲಿ ನಿರತರಾದ ರಾಮನ್ಗೆ ವಿಜ್ಞಾನ ಕ್ಷೇತ್ರದಲ್ಲಿ ಮನ್ನಣೆಯೂ ದೊರಕಿತು. ಪುರಸ್ಕಾರಗಳು ಲಭ್ಯವಾದವು. 1933ರಲ್ಲಿ ರಾಮನ್ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ನಿರ್ದೇಶಕರಾದರು. ವಿಜ್ಞಾನ ಕ್ಷೇತ್ರವೇ ನಿಬ್ಬೆರಗಾಗುವಂತಹ ಸಾಧನೆ ಮಾಡಿದ್ದರೂ, ಅವರಲ್ಲಿ ಸಂಶೋಧನೆಯ ದಾಹ ಇಂಗಲಿಲ್ಲ. 1948ರಲ್ಲಿ ನಿವೃತ್ತರಾದ ನಂತರವೂ ರಾಮನ್ ತಮ್ಮದೇ ಆದ ಸ್ವಂತ ಪ್ರಯೋಗಾಲಯ ರಾಮನ್ ಇನ್ಸ್ಟಿಟ್ಯೂಟ್ ಆರಂಭಿಸಿದರು.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications