ಬೆಂಗಳೂರಿನ ಮತ್ತೊಂದು ಸಾಧನೆ!
ಬೆಂಗಳೂರು : ಅತಿ ಹೆಚ್ಚು ಹಳ್ಳ ಕೊಳ್ಳಗಳಿರುವ ರಸ್ತೆಗಳ ನಗರ ಯಾವುದೆಂದು ಯಾರಾದರೂ ಕೇಳಿದರೆ, ಬೆಂಗಳೂರು ಎಂದು ನೀವು ಧೈರ್ಯವಾಗಿ ಎದೆತಟ್ಟಿ ಹೇಳಬಹುದು. ಬೆಂಗಳೂರು ಮಹಾ ನಗರ ಪಾಲಿಕೆಯ ಮಾಜಿ ಆಯುಕ್ತರಾದ ಜೈರಾಜ್ ಅವರೇ ನಗರದ ರಸ್ತೆಗಳ ಹಳ್ಳ-ಕೊಳ್ಳಗಳನ್ನು ಲೆಕ್ಕ ಹಾಕಿ ಒಟ್ಟು 26 ಸಾವಿರದ 284 ಗುಂಡಿಗಳಿವೆ ಎಂದು ಬಹಿರಂಗವಾಗಿ ಹೇಳಿದ್ದಾಗಿದೆ.
ಈಗ ಬೆಂಗಳೂರು ಅತಿ ಹೆಚ್ಚು ಕೊಳೆಗೇರಿಗಳನ್ನು ಒಳಗೊಂಡ ನಗರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿ ಅಗ್ರಸ್ಥಾನ ಪಡೆದಿದೆ. ಸಿಲಿಕಾನ್ ನಗರಿ, ಹೈಟೆಕ್ ಸಿಟಿ, ಉದ್ಯಾನ ನಗರಿ, ಮಾಲಿನ್ಯ ನಗರಿ ಎಂದೆಲ್ಲಾ ಬಿರುದಾಂಕಿತವಾದ ಬೆಂಗಳೂರೀಗ ಕೊಳೆಗೇರಿಗಳ ನಗರಿಯೂ ಆಗಿದೆ ಎಂಬ ವಿಷಾದದ ಸಂಗತಿ ನಿಮಗೂ ತಿಳಿದಿರಲಿ.
ಕರ್ನಾಟಕದ 27 ಜಿಲ್ಲೆಗಳಲ್ಲಿ ಒಟ್ಟು 2322 ಕೊಳಚೆ ಪ್ರದೇಶಗಳಿವೆ. (ಸರ್ಕಾರದ ಲೆಕ್ಕಕ್ಕೆ ಬಾರದ ಅನಧಿಕೃತ ಕೊಳಚೆ ಪ್ರದೇಶಗಳನ್ನು ಬಿಟ್ಟು) ಈ 2322ರಲ್ಲಿ 362 ಕೊಳಚೆ ಪ್ರದೇಶಗಳು ಬೆಂಗಳೂರಿನಲ್ಲೇ ಇವೆ. ಸರಕಾರ ಈ 362 ಕೊಳಚೆ ಪ್ರದೇಶಗಳಲ್ಲಿ 182ನ್ನು ಕೊಳೆಗೇರಿ ಎಂದು ಘೋಷಿಸಿದೆ. (ಕೊಳಚೆ ಪ್ರದೇಶ - ಕೊಳೆಗೇರಿಗೆ ಸರಕಾರ ಬೇರೆ ಬೇರೆ ವಾಖ್ಯೆ ನೀಡುತ್ತದೆ) ಈ ವರೆಗೆ 553 ಕೊಳಚೆ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲಾಗಿದೆ (ಬಹುಶಃ ಸ್ವಾತಂತ್ರ್ಯ ಬಂದ ದಿನದಿಂದ) ಈ ವಿಷಯವನ್ನು ವಸತಿ ಸಚಿವ ಖಮರುಲ್ಲಾ ಇಸ್ಲಾಂ ಅವರೇ ಸರಿತಾ ಕುಸುಮಾಕರ ದೇಸಾಯಿ ಅವರಿಗೆ ವಿಧಾನ ಮಂಡಲದಲ್ಲಿ ನೀಡಿರುವ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಂದ ಮೇಲೆ ಯಾರಾದರೂ ಬೆಂಗಳೂರನ್ನು ಕೊಳೆಗೇರಿಗಳ ನಗರ ಎಂದರೆ ನಾವು ಸುಮ್ಮನೆ ಸಿಟ್ಟಾಗುವುದರಲ್ಲಿ ಅರ್ಥವಿಲ್ಲ ಅಲ್ಲವೇ?
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications