ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಧನೂರು: ಮಲೇರಿಯಾಕ್ಕೆ ಓರ್ವ ಮಹಿಳೆ ಬಲಿ

By Staff
|
Google Oneindia Kannada News

ಸಿಂಧನೂರು : ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿರುವ ಮಲೇರಿಯಾ ಜ್ವರದಿಂದ ನೂರಾರು ಜನರು ಬಳಲುತ್ತಿದ್ದು, ಜ್ವರಕ್ಕೆ ರತ್ನಾಪುರ ಹಟ್ಟಿ ಗ್ರಾಮದ ಕರಿ ಹನುಮವ್ವ ಗೊಲ್ಲರ್‌ ಎನ್ನುವ ಮಹಿಳೆ ಬಲಿಯಾಗಿದ್ದಾರೆ.

ಗುಂಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರತ್ನಾಪುರ ಹಟ್ಟಿ, ಗೊರ್ಲೂಟಿ, ಹಸೂರು, ಬೊಮ್ಮನಾಳಗಳ ನೂರಾರು ಗ್ರಾಮಸ್ಥರು ಮಲೇರಿಯಾದಿಂದ ಅಸ್ವಸ್ಥರಾಗಿದ್ದಾರೆ. ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಸೂಕ್ತ ಚಿಕಿತ್ಸೆ ದೊರಕದ ಕಾರಣ, ತಾಲ್ಲೂಕು ಆರೋಗ್ಯ ಕೇಂದ್ರದಲ್ಲಿ ಮಲೇರಿಯಾ ರೋಗಿಗಳ ನೂಕು ನುಗ್ಗಲು ಉಂಟಾಗಿದೆ ಎಂದು ತಾಲ್ಲೂಕಿನ ನಮ್ಮ ವರದಿಗಾರರು ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಊರು ಕೇರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X