ಏರೋಬಿಕ್ಸ್ ಅಂತರರಾಷ್ಟ್ರೀಯ ಸ್ಪರ್ಧೆಗೆ ಮೈಸೂರಿನ ದಂತವೈದ್ಯೆ
ಮೈಸೂರು : ಏರೋಬಿಕ್ಸ್ ಎಂದಾಕ್ಷಣ ಫಿಟ್ನೆಸ್ನ ಒಂದು ತಂತ್ರ ಅಂದುಕೊಳ್ಳುವವರೇ ನಮ್ಮಲ್ಲಿ ಹೆಚ್ಚು. ನಮ್ಮ ದೇಶದಲ್ಲಿ ಇದೊಂದು ಸ್ಪರ್ಧೆಯಾಗಿ ಇನ್ನೂ ಶೈಶಾವಸ್ಥೆಯಲ್ಲೇ ಇದೆ. ಈ ನಡುವೆಯೂ ಕನ್ನಡತಿ ಡಾ. ಅನುರಾಧ ಕೆ.ಎನ್. ವಾರಾಂತ್ಯದಲ್ಲಿ ಅಂತರರಾಷ್ಟ್ರೀಯ ಏರೋಬಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಅಮೆರಿಕೆಗೆ ಹಾರಲಿದ್ದಾರೆ.
ದಂತವೈದ್ಯೆಯಾಗಿರುವ 28 ವರ್ಷದ ಅನುರಾಧ ಕಳೆದೆರಡು ವರ್ಷಗಳಿಂದ ರಾಷ್ಟ್ರೀಯ ಚಾಂಪಿಯನ್. ಜಿಮ್ನ್ಯಾಶಿಯಂನಿಂದ ಏರೋಬಿಕ್ಸ್ನತ್ತ ಅವರು ಜಿಗಿದದ್ದೇ ಇಂದು ಅವರಿಗೆ ವರವಾಗಿದೆ. ‘ನಾನು ಚಿಕ್ಕವಳಿದ್ದಾಗಲೇ ಜಿಮ್ನ್ಯಾಶಿಯಂ ಸೇರಿದ್ದೆ. 1995ರಲ್ಲಿ ನನಗೆ ಪೆಟ್ಟಾಯಿತು. ಫಿಟ್ ಆಗಿರಲು ನಾನು ಏನಾದರೊಂದು ಮಾಡಲೇಬೇಕಾಯಿತು. ಏರೋಬಿಕ್ಸ್ ಆಯ್ದುಕೊಂಡೆ. ಈಗ ಅದು ಕ್ರೀಡಾಪಟುವಾಗಿ ಗುರ್ತಿಸಿಕೊಳ್ಳಲು ಅವಕಾಶ ಮಾಡಿ ಕೊಟ್ಟಿದೆ’ ಎಂದು ಅನುರಾಧ ಹೇಳುವಾಗ ಸಂತೋಷ ಉಕ್ಕುತ್ತದೆ.
‘ಹಿಂದೆ ಅಥ್ಲೀಟ್ಗಳಾಗಿದ್ದವರು ತಮ್ಮ ದೇಹದ ಫಿಟ್ನೆಸ್ ಕಾಯ್ದುಕೊಳ್ಳಲು ಏರೋಬಿಕ್ಸ್ ಉತ್ತಮ ಅವಕಾಶ. ಇದಕ್ಕೆ ಹೆಚ್ಚು ಹೆಚ್ಚು ಜನ ಸೇರಬೇಕು. ದೈಹಿಕ ಸಾಮರ್ಥ್ಯ, ಸಮತೋಲನ ಹಾಗೂ ಆಟದ ಲಯ ಕಾಯ್ದುಕೊಳ್ಳಲು ಈ ಕ್ರೀಡೆ ಉತ್ತಮವಾದದ್ದು’ ಎನ್ನುತ್ತಾರೆ ಸಂಚಾಲಕ ಎಂ.ಕಾಮತ್.
ನ್ಯಾಷನಲ್ ಸ್ಫೋರ್ಟ್ ಡಾನ್ಸಿಂಗ್ ಮತ್ತು ಫಿಟ್ನೆಸ್ ಫೆಡರೇಷನ್ ನಡೆಸಿದ ರಾಷ್ಟ್ರೀಯ ಕ್ರೀಡೆಗಳಲ್ಲಿ 2 ವರ್ಷಗಳಿಂದ ಅನುರಾಧ ಚಾಂಪಿಯನ್ ಪಟ್ಟ ಬಿಟ್ಟು ಕೊಟ್ಟಿಲ್ಲ. ಏರೋಬಿಕ್ಸ್ ಕೂಡ 1.45 ನಿಮಿಷಗಳ ರುಟೀನ್. ಅದರಲ್ಲೇ ನಿಮ್ಮ ಮೊನಚು, ಹೊಸತನ ತೋರಬೇಕಷ್ಟೆ. ಹಾಗೆ ಮಾಡಲು ಸತತ ಪರಿಶ್ರಮ ಬೇಕೇ ಬೇಕು ಎಂಬುದು ಅನುರಾಧ ಅವರ ಅನುಭವದ ಮಾತು.
ಸೋಂಕೊಂದರ ತೊಂದರೆ ಅನುಭವಿಸುತ್ತಿರುವ ಅನುರಾಧಗೆ ಇನ್ನೂ ವೀಸಾ ಸಿಕ್ಕಿಲ್ಲ. ಯಾವುದಾದರೂ ಪ್ರಾಯೋಜಕರ ಬರುವಿನ ನಿರೀಕ್ಷೆಯಲ್ಲಿರುವ ಅವರು ಪ್ರತಿಭೆ ಎನ್ನುವುದರಲ್ಲಿ ಎರಡು ಮಾತಿಲ್ಲ. ತನ್ನ ಸಾಧನೆಗಳು ಇಂಥ ಸಮಸ್ಯೆಗಳನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಹೊಡೆದೋಡಿಸುತ್ತವೆಂಬ ಭರವಸೆ ಹೊತ್ತಿರುವ ಅನುರಾಧಗೆ ಆಲ್ ದಿ ಬೆಸ್ಟ್ .
(ಮೈಸೂರು ಪ್ರತಿನಿಧಿಯಿಂದ)
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications