ರಾ-ಜ್ಯ-ಕ್ಕೆ ತಮಿಳುನಾಡು ವಿಶ್ವಾ-ಸ ದ್ರೋ-ಹ ಮಾಡಿ-ಲ್ಲ : ಚಂದ್ರೇಗೌಡ
ಬೆಂಗಳೂರು : ವೀರಪ್ಪನ್ ಕಪಿಮುಷ್ಟಿಯಿಂದ ರಾಜ್ ಅವರನ್ನು ಬಿಡಿಸುವ ಜವಾಬ್ದಾರಿಯಿಂದ ತಮಿಳುನಾಡು ಸರ್ಕಾರ ನುಣುಚಿಕೊಳ್ಳುತ್ತಿಲ್ಲ ಎಂದು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಡಿ.ಬಿ. ಚಂದ್ರೇಗೌಡ ಗುರುವಾರ ಹೇಳಿದ್ದಾರೆ.
ತಮಿಳುನಾಡು ಸರ್ಕಾರ -ಸು-ಪ್ರಿಂ-ಕೋರ್ಟ್-ಗೆ ಸಲ್ಲಿ-ಸಿ-ರು-ವ -ಪ್ರ--ಮಾಣ ಪತ್ರದಲ್ಲಿ ಕರ್ನಾಟಕವನ್ನು ತರಾಟೆಗೆ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಪ್ರಶ್ನೆಯಾಂದಕ್ಕೆ ಉತ್ತರಿಸಿದ ಚಂದ್ರೇಗೌಡ, ‘ತಮಿಳುನಾಡು ನಮಗೆ ವಿಶ್ವಾಸದ್ರೋಹ ಮಾಡಿಲ್ಲ ಎಂದರು. ತಮಿಳುನಾಡಿನ ಪ್ರಮಾಣ ಪತ್ರ ನ್ಯಾಯಾಧಿಕರಣಕ್ಕೆ ಸಂಬಂಧಿಸಿದ ವಿಷಯ. ಅದರ ಬಗ್ಗೆ ನಾನು ಏನೂ ಹೇಳಲು ಇಷ್ಟಪಡುವುದಿಲ್ಲ. ಆದರೆ ತಮಿಳುನಾಡು ಆಡಿದ ಮಾತಿಗೆ ತಪ್ಪುತ್ತಿಲ್ಲ. ಉಭಯ ರಾಜ್ಯಗಳ ಸಮಿತಿಗಳು ಪ್ರಮಾಣ ಪತ್ರದ ಬಗ್ಗೆ ಚರ್ಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲಿವೆ. ಇದು ಅಪೆಕ್ಸ್ ಕೋರ್ಟಿನ ಮುಂದಿರುವ ಗಂಭೀರ ವಿಚಾರವೇನಲ್ಲ ’ ಎಂದರು.
ಕೇಂದ್ರದ ನೆರವು ಕೋರಿಲ್ಲ : ಮುಖ್ಯಮಂತ್ರಿ ಕೃಷ್ಣ ದೆಹಲಿಯಲ್ಲಿ ಕೇಂದ್ರದ ಮಂತ್ರಿಗಳನ್ನು ಭೇಟಿ ಮಾಡಿ, ರಾಜ್ ಬಿಡುಗಡೆಗೆ ಸಹಾಯ ಕೋರಿದರೇ ಎಂಬ ಪ್ರಶ್ನೆಗೆ, ‘ಸಂಧಾನ ವಿಫಲವಾದಲ್ಲಿ ಮಾತ್ರ ಕೇಂದ್ರದ ನೆರವ-ನ್ನು ಪಡೆಯಲಾಗುತ್ತದೆ. ಸದ್ಯಕ್ಕೆ ಯಾವ ನೆರವನ್ನೂ ಪಡೆಯುವುದಿಲ್ಲ’ ಎಂದು ಉತ್ತರ ಕೊಟ್ಟರು.
ಮತ್ತೊಂದು ಪ್ರಶ್ನೆಗೆ ಉತ್ತರಿಸುತ್ತಾ, ‘ಕಾನೂನಿನ ತೊಡಕುಗಳಿಂದ ಟಾಡಾ ಬಂದಿಗಳ ಬಿಡುಗಡೆ ವಿಳಂಬವಾಗಿದೆಯಷ್ಟೆ. ಅಕ್ಟೋಬರ್ 11ರಂದೇ ಅಂತಿಮ ತೀರ್ಪು ಕೊಡೇಕೆಂದು ಅಪೆಕ್ಸ್ ಕೋರ್ಟು ಸುಪ್ರಿಂಕೋರ್ಟಿಗೆ ಮನವಿ ಸಲ್ಲಿಸಿದೆ. ಅಬ್ದುಲ್ ಕರೀಂ ಸಲ್ಲಿಸಿರುವ ತಕರಾರು ಅರ್ಜಿಯ ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ 86 ಅರ್ಜಿಗಳು ಕೋರ್ಟಿನಲ್ಲಿ ದಾಖಲಾಗಿವೆ. ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಸುಪ್ರಿಂಕೋರ್ಟ್ ಅಕ್ಟೋಬರ್ 11ನ್ನು ವಿಚಾರಣೆಗೆ ಗೊತ್ತು ಪಡಿಸಿದೆ’ ಎಂದರು.
(ಯುಎನ್ಐ)