ಹಸಿದವರಿಗೆ ಅನ್ನ ನೀಡಿ ಸಾರ್ಥಕತೆ ಪಡೆದ ಹೈದರಾಬಾದಿನ ಹುಡುಗರು
ಹೈದರಾಬಾದ್, ಜುಲೈ 05: ಹಸಿವಿನಂಥ ಭೀಕರ ಶಿಕ್ಷೆ ಬೇರೆ ಇಲ್ಲ. ಹಸಿವು ಎಂಬುದು ಕೆಲವರಿಗೆ ಕೇವಲ ಭಾಷಣದ ಸರಕಾಗಿರಬಹುದು. ಆದರೆ ಹೈದರಾಬಾದಿನ ಕೆಲವು ಹುಡುಗರು ಮಾತ್ರ, 'ಹಸಿವಿನ ಭೀಕರತೆಯನ್ನು ಪದಗಳಲ್ಲಷ್ಟೇ ಕಟ್ಟಿಡುವ ಪ್ರಯತ್ನ ಮಾಡದೆ, ಅದರ ಪರಿಹಾರದ ಉಪಾಯ ಹುಡುಕುತ್ತಿದ್ದಾರೆ.'
ಬಡತನದಿಂದಾಗಿ ಹೊಟ್ಟೆಗೆ ಹಿಟ್ಟಿಲ್ಲದೆ, ತಣ್ಣೀರು ಬಟ್ಟೆ ಕಟ್ಟಿಕೊಂಡೇ ಬದುಕುವ ನಿರ್ಗತಿಕರಿಗೆ ತಮ್ಮ ಕೈಲಾದ ಶಾಯ ಮಾಡುತ್ತಿದ್ದಾರೆ. ಹೈದರ್ ಮೂಸ್ವಿ ಎಂಬ ಯುವಕ ಮತ್ತು ಅವರ ತಂಡ ಸೇರಿ ಪ್ರತಿದಿನ ರಾತ್ರಿ ಹೈದರಾಬಾದಿನ ದಾಪಿರಪುರ ಸೇತುವೆಯ ಬಳಿಯಲ್ಲಿರುವ 100 ಕ್ಕೂ ಹೆಚ್ಚು ಸೌಲಭ್ಯವಂಚಿತ ಮಂದಿಗೆ ಆಹಾರ ಒದಗಿಸುತ್ತಿದ್ದಾರೆ.
2015 ರಿಂದ ಈ ಕೆಲಸ ಆರಂಬಿಸಿರುವ ಮೂಸ್ವಿ ಮತ್ತುವರ ತಂಡ ಪ್ರತಿ ತಿಂಗಳು ಇದಕ್ಕಾಗಿಯೇ 1.2 ಲಕ್ಷ ರೂ.ಗಳನ್ನು ಖರ್ಚು ಮಾಡುತ್ತದೆ. ಪ್ರತಿ ಆಹಾರದ ಪೊಟ್ಟಣಕ್ಕೆ 40 ರೂ. ಅಗತ್ಯವಿರುತ್ತದೆ.

'ನಮ್ಮ ತಂಡವೇ ಹಣವನ್ನು ಹೊಂದಿಸಿ ಇವರಿಗೆ ಆಹಾರ ಒದಗಿಸುತ್ತಿದ್ದೇವೆ. 2015 ಆಹಾರ ಪೂರೈಕೆ ಆರಂಬಿಸಿದಾಗ ಪ್ರತಿದಿನವೂ ಆಹಾರ ಒದಗಿಸುತ್ತಿರಲಿಲ್ಲ. ತಿಂಗಳಲ್ಲಿ ಏಳೆಂಟು ದಿನ ಮಾತ್ರವೇ ಇಲ್ಲಿ ಬಂದು ಆಹಾರವನ್ನು ಹಂಚುತ್ತಿದ್ದೆವು. ನಂತರ 2017 ರ ಮಾರ್ಚ್ ತಿಂಗಳಿನಿಂದ ಪ್ರತಿದಿನ ಇಲ್ಲಿರುವ ಹಸಿದ ಜನರಿಗೆ ಆಹಾರ ಒದಗಿಸುತ್ತಿದ್ದೇವೆ. ಆಹಾರ ಸಿಕ್ಕ ನಂತರ ಇಲ್ಲಿನ ಜನರ ಮುಖದಲ್ಲಾಗುವ ಆನಂದವನ್ನು ಕಂಡರೆ ನಮಗೆ ಜೀವನ ಸಾರ್ಥಕ ಎನ್ನಿಸುತ್ತದೆ ಎನ್ನುತ್ತಾರೆ ಮೂಸ್ವಿ.
ಈ ಕಾಲದಲ್ಲೂ ಇಂಥ ಮಾನವೀಯ ಅಂತಃಕರಣಗಳಿವೆಯಲ್ಲ ಎಂಬುದೇ ಸಂತಸದ ವಿಷಯ. ಇಂಥ ಆದರ್ಶ ಕಾರ್ಯಕ್ಕಾಗಿ ತಮ್ಮ ಬದುಕನ್ನು ಮೀಸಲಿಟ್ಟ ಈ ತಂಡಕ್ಕೆ ನಮ್ಮ ನಮನ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ












Click it and Unblock the Notifications