ದೇವರಿದ್ದಾನೆ! ಎಂದ ಉಪ್ಪಿ ಏನ್ಮಾಡ್ತಿದ್ದಾರೆ? ಮೀಮ್ಸ್ ನೋಡಿ
Recommended Video

ಪ್ರಜೆಗಳಿಗೋಸ್ಕರ ಇರೋದು ಪ್ರಜಾಕೀಯ. ಈ ನಾಯಕರು ರಿಪೋರ್ಟಿಂಗ್ ಆಫೀಸರ್ ರೀತಿ ವರ್ಕ್ ಮಾಡುತ್ತಿದ್ದಾರೆ. ಎಲ್ಲವೂ ಪೋಲಿಂಗ್ ಮೂಲಕ ನಡೆಯಬೇಕು. ಜನರ ಅಭಿಪ್ರಾಯ ಸಂಗ್ರಹ ಆಧಾರದ ಎಲ್ಲವೂ ನಡೆಯಲಿದೆ. ಇಲ್ಲ ಯಾರೂ ಕಿಂಗ್ ಗಳಿರುವುದಿಲ್ಲ. ಜನಸೇವಕರಿರುತ್ತಾರೆ. ಕಾರ್ಮಿಕರಿರುತ್ತಾರೆ. ರಾಜಕೀಯ ಬೇರೆ, ಪ್ರಜಾಕೀಯ ಬೇರೆ, ಪ್ರಜೆಗಳಿಂದ ಪ್ರಜೆಗಳಿಗಾಗಿ ಮಾಡಿಕೊಂಡ ವ್ಯವಸ್ಥೆ ಇದು ನಟ, ನಿರ್ದೇಶಕ, ಹೊಸ ರಾಜಕಾರಣಿ ಅಲ್ಲಲ್ಲ ಪ್ರಜಾಕಾರಣಿ ಉಪೇಂದ್ರ ಅವರು ಪ್ರಜಾಕೀಯದ ಬಗ್ಗೆ ವಿವರಿಸಿದ ರೀತಿ.
ಹಣ, ಹೆಸರು ಬೇಡ, ನಿಮ್ಮ ಸಿದ್ಧಾಂತ ಮುಖ್ಯ ಎಂದು ಉಪೇಂದ್ರರನ್ನು ನಂಬಿ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ (ಕೆಪಿಜೆಪಿ) ಸ್ಥಾಪಕ ಮಹೇಶ್ ಗೌಡ ಅವರು ಹೊಸ ರೀತಿ ರಾಜಕೀಯದ ಇನ್ನಿಂಗ್ಸ್ ಆರಂಭಿಸಿದ್ದರು.

ಆದರೆ, ತಿಂಗಳುಗಳು ಕಳೆದರೂ ಉಪೇಂದ್ರ ಅವರ ಪ್ರಜಾಕೀಯ ಅಂದರೆ ಏನು ಎಂಬುದು ಅರ್ಥವೇ ಆಗಲಿಲ್ಲ. ಅವರಿಗೆ ಅರ್ಥ ಆಗ್ತಿಲ್ಲ ಎನ್ನೋದು ಬುದ್ಧಿವಂತ ಉಪ್ಪಿಗೆ ಯಾಕೆ ಅರ್ಥವಾಗ್ಲಿಲ್ವೋ ಆರ್ಥವಾಗ್ತಿಲ್ಲ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಸದ್ಯಕ್ಕೆ ಉಪೇಂದ್ರ ಅವರು ಕೆಪಿಜೆಪಿಗೆ ರಾಜೀನಾಮೆ ನೀಡಿ, 224 ಕ್ಷೇತ್ರಗಳ ಅಭ್ಯರ್ಥಿಗಳ ಹಿತ ಕಾಯಲು ಪ್ರಜಾಕೀಯ ಮುಂದುವರೆಸುವುದಾಗಿ ಘೋಷಿಸಿದ್ದಾರೆ.

ಮುಂದೇನಾಗುತ್ತೋ ನೋಡಣ, ಅಲ್ಲಿ ತನಕ ಈ ಘಟನೆ ಆಧಾರಿಸಿ ರಚಿಸಿದ ಮೀಮ್ಸ್ ಗಳನ್ನು ನೋಡಿ ಆನಂದಿಸಿ, ಮೀಮ್ಸ್, ಟ್ರಾಲ್, ಕಾರ್ಟೂನ್ ಗಳ ಉದ್ದೇಶ ಹಾಸ್ಯ. ಅಪಹಾಸ್ಯವಲ್ಲ.

ಪ್ರಜಾಕೀಯ ಎಂಬ ಪಕ್ಷ ಸ್ಥಾಪಿಸುತ್ತೇವೆ. ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಗದಿದ್ದರೆ, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ. ಕಾರ್ಪೊರೇಟ್ ಎಲೆಕ್ಷನ್, ಗ್ರಾಮ ಪಂಚಾಯಿತಿ ಚುನಾವಣೆಯ ಎಲ್ಲದರಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ಉಪೇಂದ್ರ ಅವರು ತಮ್ಮ ಮುಂದಿನ ನಡೆಯನ್ನು ಹೇಳಿದ್ದಾರೆ.

ಈ ಬಗ್ಗೆ ನಿಮಗೆ ಆಕ್ಷೇಪಣೆಗಳಿದ್ದರೆ, ನಿಮ್ಮ ಸಲಹೆಗಳಿದ್ದರೆ, ಮೀಮ್ಸ್ ಗೆ ನೀವು ಚೆಂದದ ಪಂಚಿಂಗ್ ಡೈಲಾಗ್ ಒದಗಿಸಬಲ್ಲರಾದರೆ ನಮಗೆ ಇಮೇಲ್ [[email protected]]ಮಾಡಿ











Click it and Unblock the Notifications