ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮರಳಿ ಬಾ ತವರಿಗೆ ಮಲೆನಾಡಿಗ
ಋಷಿಗಳಂತಿರುವ ಅಚಲ ಗುಡ್ಡಗಾಡು
ಚಿಲಿಪಿಲಿ ನಿನಾದದ ಹಕ್ಕಿಗಳ ಬೀಡು
ಕಬ್ಬಿಗನೇ ನೀ ಸುಮ್ಮನೆ ಬಂದುಬಿಡು
ಪಟ್ಟಣದ
ಸಂತೆಯಲಿ
ಕಳೆದುಹೋಗದಿರು
ಸ್ವರತಿಯವರೊಡನಾಡಿ
ಮತ್ತೆ
ಮರುಗದಿರು
ಭೂಲೋಕದ
ನಾಕವಿದು
ಮರೆಯದಿರು
ಬಂದು
ನೆಲೆಸಿಲ್ಲಿ
ನೀ
ಸುಖವಾಗಿರು
ಪ್ರಕೃತಿದೇವಿಯೇ
ನೆಲೆಸಿರುವ
ಜಾಗ
ಇಲ್ಲಿಲ್ಲ
ಮೈಮರೆಸುವ
ವೈಭೋಗ
ಅರೆಹೊಟ್ಟೆಯನುಂಡರೂ
ಸಂತಸವಾಗಿರುವ
ಮೊಗ
ನೋಡಿ
ನೀನೂ
ಅವರಂತಾಗು
ಕಬ್ಬಿಗ
ಹಣದಾಸೆಗೆ
ನಿನ್ನನೇ
ಮಾರಿಕೊಂಡಿರುವ
ಓ
ಚತುರ
ಖಂಡಿತಾ
ಕ್ಷಮಿಸುವಳೀ
ತಾಯಿ
ಮತ್ತೆ
ಬಾರಾ
ಮನಸು
ಮುರಿಯುವ
ಮೊದಲು
ತೆಗೆದುಕೋ
ನಿರ್ಧಾರ
ಆಗ
ಹರಿದು
ಬಂದೀತು
ನಿನ್ನೆದೆಗೆ
ಸಂತಸದ
ಮಹಾಪೂರ
Comments
ಮಲೆನಾಡು ಪ್ರಕೃತಿ ಕನ್ನಡ ಕವನ ಶೃಂಗೇರಿ ಚಿಕ್ಕಮಗಳೂರು ಕನ್ನಡ ಸಾಹಿತ್ಯ malenadu nature kannada poem sringeri chikkamagaluru kannada literature
Story first published: Friday, March 19, 2010, 12:37 [IST]