ಕೊನೇ ಶಬ್ದ
ಡಿಸೆಂಬರ್ 28, 2008ರ ಭಾನುವಾರ ಜಯಂತ್ ಕಾಯ್ಕಿಣಿ ಅವರ ಹೊಸ ಕವನಗಳ ಸಂಕಲನ 'ಒಂದು ಜಿಲೇಬಿ' ಬೆಂಗಳೂರಿನಲ್ಲಿ ಬಿಡುಗಡೆ ಆಯಿತು. ಸಂಕಲನದಿಂದ ಆಯ್ದ ಒಂದು ಕವನ 'ಕೊನೇ ಶಬ್ದ'ವನ್ನು ಇಲ್ಲಿ ನೀಡಲಾಗಿದೆ. ಇದು ಸ್ವತಃ ಕವಿಯೇ ಆಯ್ದು ಕಳಿಸಿದ ಕವನ.
* ಜಯಂತ್ ಕಾಯ್ಕಿಣಿ, ಬೆಂಗಳೂರು
ಕವಿತೆಯ ಕೊನೇ ಶಬ್ದ ಎಲ್ಲೋ ನೋಡುತಿದೆ
ಕಿಟಕಿ ಸೀಟಿನ ಮಗುವಿನಂತೆ
ಅದಕೆ ಒಳಗಿದ್ದೂ ಹೊರಗೆ ನೋಡುವ ಭಾಗ್ಯವಿದೆ
ಕೆಲವರು ಅನ್ನುತ್ತಾರೆ ಅಲ್ಲೇ ಮುಗಿಯುವುದು ಎಲ್ಲ
ಅಥವಾ ಅಲ್ಲಿಂದಲೇ ಆರಂಭ
ಪೂರ್ಣಗೊಳಿಸಲಾಗದು ಕವಿತೆಯನ್ನು
ಕಠೋರವಾಗಿ ತ್ಯಜಿಸಿ ಮುಂದರಿಯಬೇಕು
ಪರ್ವತಾರೋಹಿಗಳು ಕೈಲಾಗದ ಸಹಯಾತ್ರಿಯನ್ನು
ಹಿಂದೆ ಬಿಟ್ಟಂತೆ
ಬಾಡಿಗೆಗೆ ಬಂದ ಶಬ್ದಗಳು
ತಮ್ಮ ಕೆಲಸ ತಾವು ಮಾಡಿಕೊಂಡು ಸುಮ್ಮನಿದ್ದರೆ ಚೆನ್ನು
ತುಂಬ ದೂರ ನಡೆದು ಬಂದಿವೆ ಅವು
ನಾಲಿಗೆಯ ಮೇಲೆ
ಹಳೆಯ ತಿರುವುಗಳನ್ನು ಹೊಸ ಕನಸಿನಲ್ಲಿ ಕಂಡಿವೆ
ಬಾವಿಯಲ್ಲಿ ಬಿದ್ದ ಕೊಡದಂತೆ
ಯುಗಾಂತರಗಳ ನಂತರ ಮನಸಿನಲ್ಲಿ ಎದ್ದಿವೆ
ಸಿಕ್ಕಂತೆ ನೀರವ ತೀರದಲ್ಲೊಂದು ಸಂಜೆ ಬೆಳಕಿನ ಚಿಪ್ಪು
ಅಥವ ಸಂತೆಯ ಮರುದಿನ ಬಯಲಲ್ಲಿ
ಒಂಟಿ ಬೇಬಿ ಶೂಸು
ಸಿಗುತ್ತದೆ ಶಬ್ದ ಕೆಲವರಿಗೆ
ಗುಜರಿ ಅಂಗಡಿಯ ಅನಾಥ ಕನ್ನಡಿಯಂತೆ
ಬಾ ಮುಖ ನೋಡಿಕೋ ಎನ್ನುತ್ತವೆ
ಕೆಲವಂತೂ ಚಹಾದಲ್ಲಿ ಕೈ ತಪ್ಪಿ ಮುಳುಗಿ
ತಳ ಸೇರಿದ ಬಿಸ್ಕೀಟೀನಂತೆ
ಇದ್ದ ಹಾಗೆ ಊದಿಕೊಂಡು ಭಯ ಹುಟ್ಟಿಸುತ್ತವೆ
ನತದೃಷ್ಟ ಶಬ್ದಗಳಷ್ಟೆ ಕವಿತೆಯ
ತಲೆಬರಹವಾಗುತ್ತವೆ
ಕೈದಿಯ ಕೊರಳಿನ ಸ್ಲೇಟಿನ ನಂಬರಿನಂತೆ
ಕವಿತೆಯ ಒಳಗೆ ಸೀದಾ ಬಂದು ಕೂತ ಶಬ್ದಕ್ಕೋ
ಅದರದೇ ಅಲ್ಪ ಮುಕ್ತಿಯ ಭ್ರಮೆ
ಏಕೆಂದರೆ ತಕ್ಷಣ ಅದು ಯಾರ ಕಣ್ಣಿಗೂ ಬೀಳುವುದಿಲ್ಲ
ಅಥವಾ ಮುಂದಿನ ಸಾಲಿಗೆ ಜಿಗಿಯಲೇ ಬೇಕು
ಅಂತ ಕಾನೂನೇನಿಲ್ಲ ಬಿದ್ದು ಕಾಲು ಮುರಕೊಂಡರೂ
ನಿಶ್ಯಬ್ದದ ಪ್ರಪಾತದಲ್ಲಿ ಕೂಗು ಬೇಗ ಮೇಲೆ ಬರುವುದಿಲ್ಲ
ಇಷ್ಟಾಗಿ ಕವಿತೆ ಯಾರದು
ಕವಿಯದಂತೂ ಖಂಡಿತ ಅಲ್ಲ
ಹಾಗಿದ್ದರೆ ಖಂಡಿತ ಹೀಗೆ ಅವ
ಪೇಟೆಯಲ್ಲಿ ಬಿಟ್ಟು ಹೋಗುತ್ತಿರಲಿಲ್ಲ
ಆದರೆ ಎಲ್ಲೋ ನೋಡುತ್ತಿರುವ
ಕವಿತೆಯ ಕೊನೇ ಶಬ್ದ ಮಾತ್ರ ಹೇಗೆ
ಶಾಲೆಗೆ ಮೊದಲ ದಿನ ನೂಕಲ್ಪಡುತ್ತಿರುವ ಶಿಶುವಿನಂತೆ
ತನ್ನೆರಡೂ ಪುಟಾಣಿ ಕೈಗಳಿಂದ ಬಿಗಿದು
ಅವಚಿಕೊಂಡಿದೆ ಕವಿತೆಯ ಕೊರಳನ್ನು
ಮರಣ ಭಯದಲ್ಲಿ
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications