ಜಿಲೇಬಿ ; ಕಾಯ್ಕಿಣಿಯ ಹಿಂಗಾರು ಫಸಲು

ಈಗ ಹಿಂಗಾರು. ಅವರು ಬರೆದ ಹೊಚ್ಚಹೊಸ ಕವನಗಳನ್ನು ಪುಸ್ತಕದಲ್ಲಿ ಓದುವುದಕ್ಕೆ ಹದವಾದ ಕಾಲ. ಆ ಪುಸ್ತಕದ ಹೆಸರು ಒಂದು ಜಿಲೇಬಿ. ಇದೇ ಡಿಸೆಂಬರ್ 28ರ ಭಾನುವಾರ ಬೆಳಗ್ಗೆ 10.30 ಸುಮಾರಿಗೆ ಜಿಲೇಬಿ ಲೋಕಾರ್ಪಣವಾಗಲಿದೆ. ಎಲ್ಲಿ ಎಂದು ನೀವು ಕೇಳುವ ಹಾಗೇ ಇಲ್ಲ. ಪುಸ್ತಕ ಬಿಡುಗಡೆಗೆ ಸಮೃದ್ಧ ನೆಲವೆನಿಸಿದ ಬಸವನಗುಡಿಯ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣ. ಅಲ್ಲಿಗೆ ನೀವು ಈ ಭಾನುವಾರ ಹೋಗಬೇಕಾಗಿರುವುದಕ್ಕೆ ಕಾಯ್ಕಿಣಿ ಮತ್ತು ಕವನ ಬಿಟ್ಟು ಬೇರೆ ಆಕರ್ಷಣೆಗಳೂ ಇವೆ.
ಹಿಮ ಕರಡಿಯಂತೆ ಅಪರೂಪಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಮುಖ ತೋರಿಸುವ ರೋಡ್ಸ್ ಸ್ಕಾಲರ್ ಡಾ.ಗಿರೀಶ್ ಕಾರ್ನಾಡ್ ಬಿಡುಗಡೆ ಸಮಾರಂಭಕ್ಕೆ ಬಸವನಗುಡಿಗೆ ಆಗಮಿಸುವರು. ಅಂದು ಅಲ್ಲಿ ಅವರ ಕೆಲಸ ನಾಲ್ಕು ನಲ್ನುಡಿಗಳನ್ನು ಆಡುವುದು. ನೀವು ಅದನ್ನು ಮಿಸ್ ಮಾಡಿಕೊಳ್ಳಬಾರದು. ಆದರೆ, ಅವರನ್ನು ತಾವು ಕಂಡಾಗ 'ಇವನು ಗೆಳೆಯನಲ್ಲ, ಗೆಳತಿ ನಾನು ಮೊದಲೇ ಅಲ್ಲ, ಇವನು ಇನಿಯನಲ್ಲ, ತುಂಬ ಸನಿಹ ಬಂದಿಹನಲ್ಲ, ನೋವಿನಲ್ಲು ನಗುತಿಹನಲ್ಲ, ಯಾಕೆ ಈ ಥರ' ಎಂದು ಗುನುಗಿಕೋಬಾರದು.
ಅಂದು ನಿಮ್ಮ ಕಿವಿಗಳು ಇನ್ನೆರಡು ಉಪನ್ಯಾಸಕ್ಕೆ ತೆರೆಕೊಳ್ಳಬೇಕು. ವೈದ್ಯಕೀಯ ಅನುಭವ ಕಥನ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ತುರ್ತು ಔಷಧಿ ವಿಭಾಗದಲ್ಲಿ ಪರಿಣತ ವೈದ್ಯ ಮತ್ತು ಕಥೆಗಾರ ಡಾ. ಗುರುಪ್ರಸಾದ್ ಕಾಗಿನೆಲೆ ಮಾತನಾಡುವರು. ವಿಶೇಷ ಅತಿಥಿಗಳ ಇಷ್ಟೊಂದು ಆಪ್ತ ಮಾತುಗಳ ನಡುವೆ ಅಧಿಕ ಪ್ರಸಂಗದ ಮಾತುಗಳನ್ನಾಡುವವರು ಮುಂಗಾರು ಮಳೆ ನಿರ್ದೇಶಕ ಯೋಗರಾಜ ಭಟ್ಟರು.
ಜಿಲೇಬಿ ಜತೆ ಇತರ ಪದಾರ್ಥಗಳನ್ನೂ ಅಂದು ನೀವು ಸವಿಯಬಹುದು. ಜಯಂತರ ಈ ಮುಂಚಿನ ಸಂಕಲನಗಳಾದ ರಂಗದಿಂದೊಷ್ಟು ದೂರ ಕೋಟಿತೀರ್ಥ, ಶ್ರಾವಣ ಮಧ್ಯಾನ್ಹ ಮತ್ತು ನೀಲಿಮಳೆಯ ಎಲ್ಲ ಕವನಗಳನ್ನು ಒಟ್ಟಾಗಿಸಿದ ಇನ್ನೆರಡು ಸಂಪುಟಗಳು ಬೆಳಕು ಕಾಣುತ್ವೆ. ಜಯಂತ್ + ಕಾಯ್ಕಿಣಿ ಅವರ ಕವನ ಸಂಭ್ರಮದಲ್ಲಿ ನೀವು ಭಾಗಿಗಳಾಗಿ ಎಂದು ದಟ್ಸ್ ಕನ್ನಡ ಡಾಟ್ ಕಾಂ ಅಲ್ಲದೆ ವಿನಂತಿಸಿಕೊಳ್ಳುತ್ತಿರುವವರು ಅಂಕಿತ ಪ್ರಕಾಶನದ ಶ್ರೀಮತಿ ಮತ್ತು ಶ್ರೀ ಪ್ರಕಾಶ್ ಕಂಬತ್ತಳ್ಳಿ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications