ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹನಿಗವನಗಳು
-
ಚಂದ್ರಮ,
ಬೆಂಗಳೂರು
[email protected]
ನೀನು ಬಂದೆಯೆಂದು
ನೆರಳು ಸರಿದಾಡಿದರೂ ಅನಿಸುತ್ತೆ
ನೀನು ಬಂದೆಯೆಂದು
ಈಗ ನೀನೆ ಹೇಳು ನಲ್ಲೆ
ನೀನ್ಯಾವ ಭೂತಕ್ಕಿಂತ ಕಮ್ಮಿಯೆಂದು !!!
*
ಸುಡೊದಕ್ಕೆ
ಬೆಂಕಿ
ಅಂತಾರೆ
ಆರಿದ್ದಕ್ಕೆ
ಬೂದಿ
ಅಂತಾರೆ
ನಿನ್ನ
ಹತ್ತಿರ
ಏನಿಲ್ಲವೋ
ಅದಕ್ಕೆ
ಮೆದುಳು
ಅಂತಾರೆ
!!!
*
ದೇವರು
ಭೂಮಿಯನ್ನು
ಸೃಷ್ಟಿಸಿದ
ಅರಣ್ಯವನ್ನು
ಸೃಷ್ಟಿಸಿದ
ನದಿ
ಕೆರೆಗಳನ್ನು
ಸೃಷ್ಟಿಸಿದ
ಜೊತೆಗೆ
ನಿನ್ನನ್ನು
ಸೃಷ್ಟಿಸಿದ
ಹೌದು
ದೇವರು
ಕೂಡ
ಕೆಲವೊಮ್ಮೆ
ತಪ್ಪು
ಮಾಡುತ್ತಾನೆ
!!!
*
ಮದ್ಯದಿಂದ
ನಶೆ
ಏರುತ್ತದೆ
ನಶೆಯಿಂದ
ಛಲ
ಬರುತ್ತದೆ
ಛಲದಿಂದ
ದುಡಿಮೆಯಾಗುತ್ತದೆ
ದುಡಿಮೆಯಿಂದ
ದುಡ್ಡು
ಬರುತ್ತದೆ
ದುಡ್ಡಿನಿಂದ
ಗೌರವ
ಬರುತ್ತದೆ
ಅದಕ್ಕೆ
ಗೌರವ
ಪಡೆಯಲು
ಮದ್ಯ
ಸೇವನೆ
ಅಗತ್ಯವಾಗಿರುತ್ತದೆ
Cheers!
*
ಹೂವಿನಂತೆ
ಸುಂದರ
ಯಾವುದೂ
ಇಲ್ಲ
ಸಾಗರದ
ಆಳದಷ್ಟು
ಯಾವುದೂ
ಇಲ್ಲ
ಇನ್ನೂ
ನಿನ್ನ
ಏನೆಂದು
ಹೊಗಳಲಿ
ಗೆಳೆಯಾ
ನಿನ್ನಂಥ
ನಾಲಾಯಕ್
ಯಾರೂ
ಇಲ್ಲ
*
ತುಟಿಯಿಂದ
ಮುತ್ತಿಟ್ಟ
ಅನುಭವ
ಇನ್ನೂ
ಹಾಗೆ
ಇದೆ
ಕಣ್ಣಾಲಿಗಳಲ್ಲಿ
ನೀರಿದೆ
ಊಸಿರಾಟದಲ್ಲಿ
ಜ್ವಾಲೆಯಿದೆ
ಯಾಕಿರಲ್ಲ
ಹೇಳು
ನೀ
ತಿನ್ನಿಸಿದ
ಹಸಿ
ಮೆಣಸಿನಕಾಯಿ
ಇನ್ನೂ
ಬಾಯಲ್ಲಿ
ಹಾಗೆ
ಇದೆ
!!!
Comments
Story first published: Monday, February 3, 2003, 5:30 [IST]