ಆ ಕಾಲದ ಬೆಂಗಳೂರು ಸಿನಿಮಾ ಥಿಯೇಟರ್

ಅಲ್ಲಿಂದ ಒಂದು 200 ಮೀಟರ್ ಲಾಲ್ ಭಾಗಿಗೆ ಹೋಗುವ ಓಣಿಯೊಳಗೆ ಓಡಿದರೆ ಸಿಕ್ಕುತ್ತಿತ್ತು, ಮಾವಲ್ಲಿ ಟಿಫನ್ ರೂಮ್ಸ್ ಉರುಫ್ ಎಮ್. ಟಿ. ಆರ್.
ಓಣಿಯಿಂದ ಶುರುವಾದ ಎಮ್. ಟಿ. ಆರ್. ಲಾಲ್ ಭಾಗ್ ಹತ್ತಿರುವ ಮೈನ್ ರೋಡಿಗೆ ಹೋಗಿ, ಪ್ರಪಂಚದೆಲ್ಲಾ ಕಡೆ ಹೆಸರುವಾಸಿಯಾಗಿದೆ. ಅವರು ಮಾಡುವ ಚಟ್ಣಿ, ಸಾಂಬಾರ್ ಪುಡಿಗಳಿಂದಲೇ ಭಾರತದ ಅದರಲ್ಲೂ ಬೆಂಗಳೂರಿನ ವಿದ್ಯಾರ್ಥಿಗಳು ವಿದೇಶದಲ್ಲಿ ಜೀವನ ಮಾಡುತ್ತಾ ವ್ಯಾಸಂಗ ಮಾಡಿ ಒಳ್ಳೇ ಅಡುಗೆ ಭಟ್ಟರಾಗಿದ್ದಾರೆ!.
ಮುಂದಿನ ಸ್ಟಾಪೇ" ಭಾರತ್ ಟಾಕೀಸ್ ನಲ್ಲಿ. ಕಂಟ್ರುಮೆಂಟಿಗೆ ಹೋಗದೆ ಇಂಗ್ಲಿಷ್ ಸಿನಿಮಾ ನೋಡಬೇಕೆಂದರೆ ಬರೀ ಭಾರತ್ ಅಥವ ಚಿಕ್ಕಪೇಟೆಯಲ್ಲಿರುವ ವಿಜಯಲಕ್ಷ್ಮಿ ಚಿತ್ರಮಂದಿರಗಳೆರಡೇ! ಸ್ಪಾರ್ಟಾಕಸ್, ರೋಬ್ ಇವೆಲ್ಲವೂ ಭಾರತ್ ನಲ್ಲಿ ಬಂದಿತ್ತು.
ಅಷ್ಟು ಹೊತ್ತಿಗೆ ಬಸ್ಸಿಗೆ ಟಿಕೆಟ್ "ಚೆಕಿಂಗ್" ಶುರುವಾಗಿ ಒಂದು ಅರ್ಧ ಗಂಟೆ ಬಸ್ಸನ್ನು ನಿಂತಲ್ಲೇ ಕೊಳೆಹಾಕಿ ಬಿಡುತ್ತಿದ್ದರು. ಡ್ರೈವರ್ ಗಣೇಶ ಬೀಡಿ ಹಚ್ಚಿ ತನ್ನನ್ನು ತಾನೆ ಕನ್ನಡೀಲಿ ನೋಡಿಕೊಳ್ಳುವ ಸಮಯ!
ಶಿವಾಜಿ ಟಾಕೀಸ್ ಗೊತ್ತಾ:ಬೆಂಗಳೂರನ್ನು ಸಿನಿಮಾ ಥೀಯೇಟರ್ಗಳಿಗಾಗಿ ಮಾಡಿಸಿದೆಂದಿತ್ತು. ಮುಂದಿನ ಸ್ಟಾಪ್ "ಶಿವಾಜಿ" ಟಾಕೀಸ್. ಬೆಂಗಳೂರಿನಲ್ಲಿ ಆ ಕಾಲದಲ್ಲಿ ಕುದುರೆಯ ಮೇಲೆ ಕೂತ ಶಿವಾಜಿ ಸ್ಟ್ಯಾಚು ಇತ್ತೆಂದರೆ ಆಶ್ಚರ್ಯವೇ! ಇದು ಬಾಳ್ ಠಾಕ್ರೆಗೋ ಇಲ್ಲಾ ರಾಜ್ ಠಾಕ್ರೆಗೋ ಗೊತ್ತಾಗಿದ್ದಿದ್ದರೆ ಶಿವಸೇನೆ ಬೆಂಗಳೂರಿನಲ್ಲೇ ಶುರು ಮಾಡುತ್ತಿದ್ದರೇನೋ!
ಆಗ ಬೆಂಗಳೂರಿನಲ್ಲಿ ಕನ್ನಡ ಸಿನಿಮಾಗಳು ಅಪರೂಪವಾಗಿದ್ದ ಕಾಲ. "ಬೇಡರ ಕಣಪ್ಪ", ರತ್ನಗಿರಿರಹಸ್ಯ" ( "ಅಮರ ಮಧುರ ಪ್ರೇಮ" ಹಾಡು ಈಗಲೂ ಫೇಮಸ್) ಸ್ಕೂಲ್ ಮಾಸ್ಟರ್" ನಂತಹ ಸಿನಿಮಾಗಳು ಯಾವಾಗಲೋ ಒಮ್ಮೊಮ್ಮೆ ಬರುತ್ತಿತ್ತು. ಆಗ ಮುಖ್ಯತಹ ಬರುತ್ತಿದ್ದ ಪಿಕ್ಚರ್ ಗಳು ಹಿಂದಿ, ತೆಲುಗು, ತಮಿಳು. ಇಂಗ್ಲಿಷ್.. ಶಿವಾಜಿ ಯಲ್ಲಿ ತೋರಿಸುತ್ತಿದ್ದಿದ್ದು ಎಲ್ಲಾ ತಮಿಳೇ! ಎಮ್. ಜಿ.ಆರ್. ಮತ್ತು ನಂಬಿಯಾರ್ ಫೈಟಿಂಗ್ ನೋಡುವುದಕ್ಕೇ ಅರ್ಧ ಥೀಯೇಟರ್ ಕಾಯ್ದು ಕೂತಿರುತ್ತಿತ್ತು. ಶಿವಾಜಿ ಗಣೇಷನ್ ಒಳ್ಳೇ ಆಕ್ಟರ್. ಆದರೆ ಅವನ ಪಿಕ್ಚರ್ಗೆ ಹೋದವರು ಅತ್ತು ಅತ್ತು ಕಣ್ಣು ಕೆಂಪಗೆ ಮಾಡಿಕೊಂಡು ಎರಡು, ಮೂರು ಕರ್ಚೀಫ್ ಒದ್ದೆ ಮಾಡಿಕೊಂಡು ಹೊರಗೆ ಬರುತ್ತಿದ್ದರು!
ಇಷ್ಟೆಲ್ಲಾ ಆಗುವ ಹೊತ್ತಿಗೆ ನಮ್ಮ ಬಸ್ ಟೌನ್ ಹಾಲ್ ಬಂದು ಸೇರಿತು.
ಒಂದು ಪರ್ವ ದಾಟಿದಂತೆ.
ಪರ್ವ, ದಾಟು ಅಂದರೆ ಜ್ಞಾಪಕಕ್ಕೆ ಬರುವುದು ಎಸ್. ಎಲ್. ಬಿ. ಅವರ ಪುಸ್ತಕಗಳು.
ಆಗ ಭೈರಪ್ಪನವರ ಕಾಸಿಕ್ಸ್ನಲ್ಲಿ ಸೇರುವ "ದಾಟು", ಪರ್ವ ಬರೆದಿದ್ದರೋ ಖಚಿತವಾಗಿ ಗೊತ್ತಿಲ್ಲ. ತರಾಸುರವರ "ಹಂಸಗೀತೆ", ಚಿತ್ರದುರ್ಗದ ಇತಿಹಾಸ ಹೇಳುವ "ರಕ್ತರಾತ್ರಿ", ತಿರುಗು ಬಾಣ, ಹೊಸಹಗಲು; ನಾಗರಹಾವು; ತ್ರಿವೇಣಿ ಯವರ "ಬೆಕ್ಕಿನ ಕಣ್ಣು", "ಹಣ್ಣೆಲೆ ಚಿಗುರಿದಾಗ", ಅ.ನ. ಕೃ. ಅವರ "ಸಂಧ್ಯಾರಾಗ, ಉದಯರಾಗ" ಗಳ ಕಾಲ. ಪ್ರಜಾಮತ ಮತ್ತು ಇಲ್ಲಸ್ಟರೇಟೆಡ್ ವೀಕ್ಲಿ" ಸುಮಾರು ಒಂದೇ ಸೈಜಿನಲ್ಲಿ ಬರೋದು.
ವೀಕ್ಲಿಯಲ್ಲಿ ಹೊಸದಾಗಿ ಮದುವೆಯಾದ ದಂಪತಿಗಳ ಫೊಟೊ ಅವರಿಗೆ ಮಕ್ಕಳಾದ ಮೇಲೆ ಬರುತ್ತಿತ್ತು!
ಮಕ್ಕಳಿಗೆ ಚಂದಮಾಮ ಮತ್ತು ಬಾಲಮಿತ್ರ; ವಯಸ್ಕರಿಗೆ ರಾಶಿಯವರ ಬ್ರೈನ್ ಟಾನಿಕ್ - ಕೊರವಂಜಿ.
ನಾನು ನಮ್ಮ ಬಸ್ಸಿನ ತರಹ ಎಲ್ಲೆಲ್ಲೊ ಹೊರಟುಹೋದೆ. ಕ್ಷಮಿಸಿ. [ಬೆಂಗಳೂರು]
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications