ಹೊಸ ಛಂದ ಪುಸ್ತಕಗಳು ಬೇಕಿದ್ದರೆ ಭಾನುವಾರ ಬನ್ನಿ

Chanda book publication
ಇದೇ ಭಾನುವಾರ ಜುಲೈ 5ರಂದು ಬೆಂಗಳೂರಿನ ಪುಸ್ತಕ ಪ್ರೇಮಿಗಳ ಕೈಗೆ 3 ಚೆಂದನೆಯ ಪುಸ್ತಕಗಳನ್ನು ನೀಡಲು ಛಂದ ಪುಸ್ತಕ ಪ್ರಕಾಶನ ಮತ್ತೆ ಅಣಿಯಾಗಿದೆ. ಛಂದ ಪುಸ್ತಕ ಬಿಡುಗಡೆ ಕಾರ್ಯಕ್ರಮವೆಂದರೆ ಅದೊಂದು ಹಬ್ಬ. ಹೊಸ ಪುಸ್ತಕಗಳ ಹುಡುಕಾಟದಲ್ಲಿರುವ ಎಲ್ಲ ಎಳೆಯ ಹಿರಿಯ ಗೆಳೆಯರೆಲ್ಲ ಒಂದೆಡೆ ಸೇರಿ ಉಭಯ ಕುಶಲೋಪರಿ ವಿಚಾರಿಸುತ್ತಾರೆ, ಪುಸ್ತಕ ಕೊಳ್ಳುತ್ತಾರೆ.

ಪತ್ರಕರ್ತ ಸಂದೀಪ್ ನಾಯಕ, ಕಥೆಗಾರ್ತಿ ಸುಮಂಗಲಾ ಮತ್ತು ಆರ್ಕಿಟೆಕ್ಟ್ ನಾಗರಾಜ ವಸ್ತಾರೆ ಅವರ ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ. ಪುಸ್ತಕಗಳ ಕುರಿತು ಶ್ರೀಧರ ಬಳಗಾರ ಅವರು ಮಾತನಾಡಲಿದ್ದಾರೆ. ಎಸ್ ಮಂಜುನಾಥ್ ಅವರು 'ಕಾವ್ಯ ನಿಷ್ ಪ್ರಯೋಜಕ' ಎಂಬ ವಿಷಯ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ. ಚರ್ಚೆಯಲ್ಲಿ ಸಭಿಕರೂ ಭಾಗವಹಿಸಬಹುದು.

ಗೋಡೆಗೆ ಬರೆದ ನವಿಲು : ಸಂದೀಪ ನಾಯಕ (2009ನೇ ಸಾಲಿನ ಛಂದ ಪುಸ್ತಕ ಬಹುಮಾನ ಪಡೆದ ಕಥಾಸಂಕಲನ)
ಕಾಲಿಟ್ಟಲ್ಲಿ ಕಾಲುದಾರಿ : ಸುಮಂಗಲಾ (ಕಥಾಸಂಕಲನ)
ಮಡಿಲು : ನಾಗರಾಜ ವಸ್ತಾರೆ (ನೀಳ್ಗತೆ)

ಈ 3 ಪುಸ್ತಕಗಳು ಇದೇ ಜುಲೈ 5ರಂದು, ಭಾನುವಾರ ಬೆಳಿಗ್ಗೆ 10ಕ್ಕೆ ಬಸವನಗುಡಿಯಲ್ಲಿರುವ ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಬಿಡುಗಡೆ ಆಗಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+