ತಲೆಬರಹ : ನೂರೆಂಟು ಮಾತು ಕೇಳಲು ಭಾನುವಾರ ಬನ್ನಿ

ಪ್ರತಿ ಗುರುವಾರ ಪ್ರಕಟವಾಗುವ ಅಂಕಣ 'ನೂರೆಂಟು ಮಾತು' ಮೊನಚಿನಿಂದ ಕೂಡಿದ ಅಭಿಪ್ರಾಯ, ಸೊಗಸಾದ ನಿರೂಪಣೆಯಿಂದ ಓದುಗರ ಮನ ಮುಟ್ಟಿದೆ. ಈ ಅಂಕಣ ಬರಹದ ಐದನೇ ಪುಸ್ತಕ ಭಾನುವಾರ ಓದಗರ ಕೈಸೈರಲಿದೆ. ಇನ್ನು 'ತಲೆಬರಹ ಪತ್ರಿಕೆ ಹಣೆಬರಹ'ದಂಥ ಪುಸ್ತಕ ಪ್ರಕಟವಾಗಿರುವುದು ಕಡಿಮೆಯೇ. ಸೊಗಸಾದ ಮತ್ತು ಸೂಕ್ತವಾದ ತಲೆಬರಹ ಒಂದು ಸಾಧಾರಣ ಲೇಖನವನ್ನು ಕೂಡ ಓದುವಂತೆ ಸೆಳೆಯಬಲ್ಲದು. ಅದೇ ರೀತಿ ಒಂದು ಅರ್ಥಹೀನ, ಕೆಟ್ಟ ತಲೆಬರಹ ಅತ್ಯುತ್ತಮವಾದ ಬರಹವನ್ನು ಕೊಲ್ಲಲೂಬಹುದು. ನೂರೆಂಟು ಮಾತು ಬರಹಗಳು ಕೂಡ ಓದುಗರನ್ನು ಸೆಳೆದದ್ದು ಉತ್ತಮ ತಲೆಬರಹಗಳಿಂದಲೇ.
ಪುಸ್ತಕ ಬಿಡುಗಡೆ ಕಾರ್ಯಕ್ರಮ ಭಾನುವಾರ ಬೆಳಿಗ್ಗೆ 10.30ಕ್ಕೆ ಬಸವನಗುಡಿಯ ಬಿಪಿ ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಜರುಗಲಿದೆ.
ಬೆಳಗಿನ ಬಿಸಿಬಿಸಿ ಉಪಹಾರದ ಜೊತೆಗೆ ಸವಿಸವಿಯಾದ ನೂರೆಂಟು ಮಾತುಗಳಿಗೂ ಕೊರತೆಯಿರುವುದಿಲ್ಲ. ವಿಶ್ವೇಶ್ವರ ಭಟ್ ಅವರ ಜೊತೆ ಮುಖ್ಯ ಅತಿಥಿಗಳಾಗಿ ಕವಿ, ಕಥೆಗಾರ ಜಯಂತ್ ಕಾಯ್ಕಿಣಿ ಮತ್ತು ಜಿಎನ್ ಮೋಹನ್ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಕವಿ ಡಾ. ಎಚ್.ಎಸ್.ವೆಂಕಟೇಶ ಮೂರ್ತಿ ಅವರು ವಹಿಸಿಕೊಳ್ಳಲಿದ್ದಾರೆ.
ಎರಡೂ ಪುಸ್ತಕಗಳನ್ನು ಅಂಕಿತ ಪುಸ್ತಕ ಪ್ರಕಾಶನ ಹೊರತಂದಿದೆ. ನೂರೆಂಟು ಮಾತು ಕೇಳಲು ಮತ್ತು ಕೊಳ್ಳಲು ಪುಸ್ತಕ ಪ್ರೇಮಿಗಳೇ ಭಾನುವಾರ ಬನ್ನಿ.
(ದಟ್ಸ್ ಕನ್ನಡ ವಾರ್ತೆ)
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications