ಮಂಗಳದ ತಿರುಗುದಾರಿಯಲ್ಲಿ ಮೂರು ಹಂತದ ಕೆಲಸ
[ಓದುವ ಮುನ್ನ : ಇದು ಅಚ್ಚಕನ್ನಡದ ಆಡುಭಾಷೆ] ಬಾನಬಂಡಿಯನ್ನು ಮಂಗಳದ ತಿರುಗುದಾರಿಯಲ್ಲಿ ಸೇರಿಸುವ ಕೆಲಸ ಮೂರು ಹಂತಗಳಲ್ಲಿ ನಡೆಯಲಿದೆ. ಈ ಮೂರು ಹಂತಗಳನ್ನು ಕೆಳಗಿನ ತಿಟ್ಟದಲ್ಲಿ ತೋರಿಸಲಾಗಿದೆ.
1. ನೆಲ ನಡುವಣದ ಹಂತ (Geo Centric Phase): ಈ ಹಂತದಲ್ಲಿ ಏರುಬಂಡಿ ತನ್ನ 6 ಮುಕ್ಯ ಬಿಣಿಗೆಗಳ ನೆರವಿನೊಂದಿಗೆ ಬಾನಬಂಡಿಯನ್ನು 918,347 ಕಿ.ಲೋ. ದೂರದಲ್ಲಿ ನೆಲದಂಚಿನ ಮೊಟ್ಟೆಯಾಕಾರದ ತಿರುಗುದಾರಿಯಲ್ಲಿ ಚಿಮ್ಮಲಿದೆ. ಅಲ್ಲಿಂದ ಬಾನಬಂಡಿ ತನ್ನದೇ ಕಸುವಿನಿಂದ ಮಂಗಳದೆಡೆಗೆ ಸಾಗಬೇಕು. ಇಸ್ರೋದ ಮುಂದಿರುವ ದೊಡ್ಡ ಸವಾಲೆಂದರೆ ತುಂಬಾ ಕಡಿಮೆ ಉರುವಲು ಬಳಸಿ ಬಾನಬಂಡಿಯನ್ನು ಮಂಗಳದ ತಿರುಗುದಾರಿಯವರೆಗೆ ಸಾಗಿಸುವುದು.
ಇದಕ್ಕಾಗಿ 'ಹೋಮನ್ ಸಾಗಾಣಿಕೆಯ ತಿರುಗುದಾರಿ' (Hohmann transfer orbit) ಇಲ್ಲವೇ 'ಎಲ್ಲಕ್ಕಿಂತ ಕಡಿಮೆ ಕಸುವಿನ ಸಾಗಾಣಿಕೆಯ ತಿರುಗದಾರಿ' (minimum energy transfer orbit) ಎಂದು ಕರೆಯಲಾಗುವ ಬಗೆಯನ್ನು ಇಸ್ರೋ ಆಯ್ದುಕೊಂಡಿದೆ. ಈ ಬಗೆಯಲ್ಲಿ ಬಾನಬಂಡಿಯು 'ಮೊಟ್ಟೆಯಾಕಾರದ' (elliptical) ದಾರಿಯಲ್ಲಿ ಸಾಗಿ ನೆಲಕ್ಕಿಂತ ಬೇರೆ ಎತ್ತರದಲ್ಲಿರುವ ಮಂಗಳದ ತಿರುಗುದಾರಿಯನ್ನು ಸೇರಲಿದೆ.

2. ನೇಸರ ನಡುವಣದ ಹಂತ (Helio Centric Phase): ತನ್ನ ಪಯಣದ ಕೊನೆಯಲ್ಲಿ ಬಾನಬಂಡಿಯು ಮಂಗಳದ ತಿರುಗುದಾರಿಯನ್ನು, ಮಂಗಳ ಅಲ್ಲಿರುವಾಗಲೇ ಸೇರಲಿದೆ. ಈ ಬಗೆಯಲ್ಲಿ ಮಂಗಳ ಹತ್ತಿರವಾಗುವುದು ಎರಡು ವರಶಕ್ಕೊಮ್ಮೆ. ನೇಸರ, ನೆಲ ಮತ್ತು ಮಂಗಳ ಒಂದಕ್ಕೊಂದು 44 ಡಿಗ್ರಿ ಕೋನದಲ್ಲಿ ಬಂದಾಗ ಇಂತ ಆಗುಹ ನಡೆಯುತ್ತದೆ.
3. ಮಂಗಳಿಗರ ಹಂತ (Martian Phase): ಜಗತ್ತಿನ ಹಲವಾರು ಕಟ್ಟುಕತೆಗಳಲ್ಲಿ ಮಂಗಳದಲ್ಲಿ ನಮ್ಮಂತೆ ಜೀವಿಗಳಿವೆ ಅನ್ನುವ ಕತೆಗಳನ್ನು ಹೆಣೆಯಲಾಗಿದ್ದು, ಮಂಗಳದ ಜೀವಿಗಳನ್ನು ಮಂಗಳಿಗರು (Martians) ಅಂತಾ ಕರೆಯಲಾಗುತ್ತದೆ. ಅರಿಮೆಯ ನೆಲದಲ್ಲಿ ಈ ಪದವನ್ನು ಮಂಗಳದ ಎಲ್ಲೆಯನ್ನು ಗುರುತಿಸಲು ಬಳಸಲಾಗುತ್ತದೆ.
ಈ ಎಲ್ಲೆ ಮಂಗಳದ ಸುತ್ತ 5,73,473 ಕಿ.ಮೀ.ವರೆಗೆ ಹರಡಿಕೊಂಡಿದೆ. ಇಸ್ರೋದ ಬಾನಬಂಡಿ ತನ್ನ ಮೂರನೇ ಹಂತದಲ್ಲಿ ಮಂಗಳಿಗರ ಈ ಪ್ರದೇಶವನ್ನು ಹೊಕ್ಕಲಿದ್ದು, ಅಲ್ಲಿಂದ ಮಂಗಳದ ಸುತ್ತ ತಿರುಗುತ್ತ ತನ್ನ ಕೆಲಸವನ್ನು ಆರಂಬಿಸಲಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications