ತೇಜಸ್ವಿ ಹುಟ್ಟುಹಬ್ಬ ಪ್ರಯುಕ್ತ ಟ್ರೆಕ್ಕಿಂಗ್, ನಾಟಕ

ಮಂಗಳವಾರ ಮೂಡಿಗೆರೆಯ ಗಣೇಶ್ ಕಲಾ ಕುಂಜದಲ್ಲಿ ತೇಜಸ್ವಿ ಹುಟ್ಟುಹಬ್ಬದ ಅಂಗವಾಗಿ ಸರ್ಕಾರಿ ಪದವಿಪೂರ್ವ ಬಾಲಕಿಯರ ಶಾಲಾ ವಿದ್ಯಾರ್ಥಿನಿಯರಿಗಾಗಿ 'ಕನ್ನಡ ಜಾಗೃತಿ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಾಹಿತಿ ನಾ.ಡಿಸೋಜ, ರಂಗಕರ್ಮಿಗಳಾದ ಮುಕುಂದರಾಜ್ ಹಾಗೂ ಕೆವಿ ನಾಗರಾಜಮೂರ್ತಿ ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಆದಿಕವಿ ಪಂಪನಿಂದ ಹಿಡಿದು ಆಧುನಿಕ ಕವಿಗಳ ಬಗ್ಗೆ ಪ್ರಸ್ತಾಪಿಸಿ, ಕನ್ನಡ ಸಾಹಿತ್ಯ ಮಿಕ್ಕೆಲ್ಲಾ ಭಾಷೆಗಳಿಗಿಂತ ಹೇಗೆ ವಿಭಿನ್ನ ಹಾಗೂ ಶ್ರೀಮಂತವಾಗಿ ಎಂದು ನಿರೂಪಿಸಲಾಯಿತು. ನಮ್ಮ ಪರಿಸರದಲ್ಲಿರುವ ಜನಸಾಮಾನ್ಯರ ನುಡಿಗಳೇಅನೇಕಾನಕ ಮೇರುಕೃತಿಗಳಿಗೆ ಆಕರ ವಸ್ತುಗಳಾಗಿವೆ. ಪಂಪನ ಬಗ್ಗೆ ತಿಳಿಯುವುದು ಎಷ್ಟೋ ಮುಖ್ಯವೋ ತಮ್ಮ ಸಮಕಾಲೀನ ಲೇಖಕ/ಕಿಯರ ಜೀವನದ ಬಗ್ಗೆ ಅರಿವು ಬೆಳೆಸಿಕೊಳ್ಳುವುದು ಮುಖ್ಯ.
ಜನ ಸಾಮಾನ್ಯರಿಂದ ಹುಟ್ಟಿ ಬೆಳೆದ ಸಾಹಿತ್ಯ ನಮ್ಮದು. ಕನ್ನಡಭಾಷೆ ಜಾತ್ಯಾತೀತವಾದದ್ದು ಎಂದು ಒಕ್ಕೊರಲಿನ ನಿರ್ಣಯಕ್ಕೆ ಬರಲಾಯಿತು. ಕನ್ನಡಅಭಿವೃದ್ಧಿ ಪ್ರಾಧಿಕಾರ ಹಾಗೂ ವಿಸ್ಮಯ ಪ್ರತಿಷ್ಠಾನ, ಮೂಡಿಗೆರೆಯ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಜಿವಿ ಆತ್ರಿ ಸ್ಥಾಪಿತ ಚಿಕ್ಕಮಗಳೂರಿನ ಸಂಗೀತಾ ಗಂಗಾ ತಂಡದವರ ಸಂಗೀತ ಕಾರ್ಯಕ್ರಮ ಮೆರಗು ತಂದಿತು.
ಟ್ರೆಕ್ಕಿಂಗ್ ಕಾರ್ಯಕ್ರಮ : 'ಗ್ರೀನ್ ಟ್ರಯಾಂಗಲ್ 'ಹೆಸರಿನಲ್ಲಿ ದತ್ತಪೀಠ-ಮಾಣಿಕ್ಯಧಾರಾ-ಗಾಳಿಕೆರೆ ಪ್ರದೇಶದಲ್ಲಿ ಚಾರಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮ ವಿವರ:
ದಿನಾಂಕ /ದಿನ: 12/09/2010, ಭಾನುವಾರ
ವಿಸ್ಮಯ ಪ್ರತಿಷ್ಠಾನ ಕಚೇರಿಯಿಂದ ದತ್ತ ಪೀಠಕ್ಕೆ ಬೆಳಗ್ಗೆ 7.30 ಕ್ಕೆ ಪಯಣ.ಬೆಳಗ್ಗೆ 9.30ರಿಂದ ಟ್ರೆಕ್ಕಿಂಗ್ ಆರಂಭ.
ಊಟ, ಮೂಡಿಗೆರೆಯಿಂದ ಟ್ರೆಕ್ಕಿಂಗ್ ಸ್ಥಳಕ್ಕೆ ವಾಹನ ವ್ಯವಸ್ಥೆಯಿರುತ್ತದೆ. ಟ್ರೆಕ್ಕಿಂಗ್ ಶುಲ್ಕ 250 ರು ಗಳು.
ಆಸಕ್ತರು ಸೆ.10 ಸಂಜೆ ಆರು ಗಂಟೆಯೊಳಗೆ ತಮ್ಮ ಹೆಸರನ್ನು ನಮೂದಿಸಬಹುದು.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ವಿಸ್ಮಯ ಪ್ರತಿಷ್ಠಾನ, ಮೂಡಿಗೆರೆ -577132
ಚಿಕ್ಕಮಗಳೂರು ಜಿಲ್ಲೆ
ಗಣೇಶ ಮಗ್ಗಲಮಕ್ಕಿ : 94483 05990/94832 26999
ಕಚೇರಿ ದೂರವಾಣಿ ಸಂಖ್ಯೆ: 08263-222 288
ಮಾಯಾಮೃಗ ನಾಟಕ: ತೇಜಸ್ವಿ ಅವರ ಸಣ್ಣಕಥೆ ಆಧಾರಿತ 'ಮಾಯಾಮೃಗ' ನಾಟಕ ಪ್ರದರ್ಶನ ಬೆಂಗಳೂರಿನ ರಂಗಶಂಕರದಲ್ಲಿ ಇಂದು 7.30ಕ್ಕೆ ಆಯೋಜಿಸಲಾಗಿದೆ. ವಟಿಕುಟೀರ ತಂಡ, ಅವಿರತ ಟ್ರಸ್ಟ್ ಪ್ರಸ್ತುತ ಪಡಿಸುತ್ತಿರುವ ಈ ನಾಟಕವನ್ನು ಪೃಥ್ವಿ ಆರಾಧ್ಯ ನಿರ್ದೇಶಿಸಿದ್ದಾರೆ. ಟಿಕೆಟ್ ಗಳಿಗಾಗಿ ಸಂಪರ್ಕಿಸಿ: 98806 95659.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications