125291independence dayಕೆಂಪು ಕೋಟೆಯ ಮನಮೋಹನ್ ಸಿಂಗ್ ಭಾಷಣ/news/2009/08/15/pm-singh-independence-day-speech-h1n1-terror.htmlನವದೆಹಲಿ, ಆ. 15 : ದೇಶದ 63 ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳುವುದು ಕೇಂದ್ರ ಸರಕಾರದ ಗುರಿಯಾಗಿದೆ. ಕೇಂದ್ರದ ಯುಪಿಎ ಸರಕಾರ ಜನಪರ ಆಡಳಿತ ನೀಡಲಿದೆ. ಜೊತೆಗೆ ಆರ್ಥಿಕತೆ ಇನ್ನಷ್ಟು ವೃದ್ಧಿಗೊಳಿಸುವ ಮತ್ತಷ್ಟು ಕಾರ್ಯಕ್ರಮಗಳು, ನೀತಿ ನಿಯಮಗಳನ್ನು ಜಾರಿಗೊಳಿಸಲಾಗುವುದು. ದೇಶದಲ್ಲಿ ಬರದ ಛಾಯೆ ಆವರಿಸಿರುವ ಹಿನ್ನೆಲೆಯಲ್ಲಿ ರೈತನ ಬೆನ್ನಿಗೆ ಕೇಂದ್ರ ಸರಕಾರ ಇರಲಿದೆ 38635http://kannada.oneindia.com/img/2009/08/15-manmohan-singh2.jpg125291independence dayಸ್ವಾತಂತ್ಯ್ರ ಚಿಂತನೆ: ಅಧಿಕಾರಕ್ಕೆ ಜೋತು ಬಿದ್ದ ಪಕ್ಷಗಳು/literature/articles/2009/independence-day-an-essay-by-siddesha-kurki.htmlಪ್ರತಿಯೊಂದು ದೇಶದ ಸ್ವಾತಂತ್ರ್ಯ ಸಂಗ್ರಾಮವು ಅತ್ಯಂತ ರೋಚಕವಾಗಿರುವಂತೆ ಭಾರತದ ಸ್ವಾತಂತ್ರ್ಯಸಂಗ್ರಾಮವು ರೋಚಕವಷ್ಟೇ ಅಲ್ಲ ಅತ್ಯಂತ ವೈಶಿಷ್ಯ್ಟ ಪೂರ್ಣವೂ ಆಗಿತ್ತು. ಇಡೀ ಜಗತ್ತಿಗೆ ಹೊಸಮಾರ್ಗವನ್ನು ತೋರಿದ ಶ್ರೇಯಸ್ಸು ಭಾರತಕ್ಕೆ ಸಲ್ಲುವುದು, ಸತ್ಯ ಅಹಿಂಸೆ, ಸತ್ಯಾಗ್ರಹ, ಆತ್ಮ ಬಲಿದಾನ ಇವುಗಳಿಂದ ಅತ್ಯಂತ ಬಲಾಢ್ಯವಾದ ಸಂಘಟನೆಯ ಸಂಗಡ ಯುದ್ಧಮಾಡಿ ಹೇಗೆ ಜಯಗಳಿಸಬಹುದೆಂಬುದನ್ನು ಭಾರತವು ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ.ಸ್ವಾತಂತ್ರ್ಯವೆಂದರೆ ಸ್ವೇಚ್ಚಾಚಾರವಲ್ಲ, 38640http://kannada.oneindia.com/img/2009/08/15-siddesha-kurki.jpg125291independence dayಅಮೆರಿಕದಲ್ಲಿ ಕಾಲಿಡಲು ಮುಜುಗರ: ಖಾನ್/movies/controversy/2009/08/16-do-not-feel-like-stepping-on-american-soil-srk.htmlನನಗೆ ಆದ ಅಪಮಾನಕ್ಕೆ ಕ್ಷಮೆಯಾಚನೆ ಬೇಕೆಂದು ಕೇಳುವುದಿಲ್ಲ. ಆದರೆ, ಅಮೆರಿಕದ ನೆಲದ ಮೇಲೆ ಮತ್ತೆ ಕಾಲಿಡಲು ಮುಜುಗರವಾಗುತ್ತದೆ ಎಂದು ಬಾಲಿವುಡ್ ನ ಬಾದ್ ಷಹ ಕಿಂಗ್ ಖಾನ್ ಶಾರುಖ್ ಪ್ರತಿಕ್ರಿಯಿಸಿದ್ದಾರೆ.ವಿಮಾನನಿಲ್ದಾಣದ ತಪಾಸಣೆ ಪ್ರಸಂಗ ಮುಗಿದ ನಂತರ ಅಟ್ಲಾಂಟಿಕ್ ನಗರದ ತಾಜ್ ಮಹಲ್ ಹೋಟೆಲ್ ನಲ್ಲಿ ನಡೆದ ರಸಸಂಜೆಗೆ ಎರಡು ಗಂಟೆ ತಡವಾಗಿ ಆಗಮಿಸಿದ ಶಾರುಖ್, ತನ್ನನ್ನು 38646http://kannada.oneindia.com/img/2009/08/16-shahrukh-khan1.jpg125291independence dayಲಂಡನ್ನಿನಲ್ಲಿ ನಮ್ಮ ಶಾಸಕರ ಸ್ವಾತಂತ್ರ್ಯ ದಿನಾಚರಣೆ/nri/article/2009/0818-britain-kannadigas-independence-day.htmlಲಂಡನ್, ಆ, 18 : ಬ್ರಿಟನ್ನಿನ ಅನಿವಾಸಿ ಕನ್ನಡಿಗರ ವೇದಿಕೆಯ ಆಶ್ರಯದಲ್ಲಿ ಭಾರತ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಆಗಸ್ಟ್ 15ರ ಸಂಜೆ ನಾಲ್ಕು ಗಂಟೆಗೆ ಲಂಡನ್ನಿನ ದನುಬಿಎಸ್ ಹೋಟೆಲ್ ಸಭಾಂಗಣದಲ್ಲಿ ವೇದಿಕೆಯ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಸಂಯೋಜಕರಾದ ಕುಂಟಿಕಾನಮಠ ಕುಮಾರ್ ಅವರು ಅತಿಥಿಗಳನ್ನು ಸ್ವಾಗತಿಸುತ್ತ ಸ್ವಾತಂತ್ರ್ಯ ದಿನಾಚರಣೆಯಂದು ಭಾರತದಲ್ಲಿ ಶಾಲಾ ಸಮವಸ್ತ್ರ ಧರಿಸಿ ಹಳ್ಳಿ ಹಳ್ಳಿಗಳಿಗೆ 38694http://kannada.oneindia.com/img/2009/08/18-jagadish-shettar1e.jpg125291independence dayಅಮೆರಿಕಾದಲ್ಲಿ ಭಾರತ ಸ್ವಾತಂತ್ರ್ಯ ದಿನಾಚರಣೆ/nri/article/2009/0819-india-independence-day-in-america-psymphony.htmlಫ್ರಿಮಾಂಟ್, ಆ. 19 : ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಸಂಜಾತರು 62ನೇ ಭಾರತ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದರು. ಆಗಸ್ಟ್ 14ರಿಂದ 16ರವರೆಗೆ ಇಲ್ಲಿ ಏರ್ಪಡಿಸಲಾಗಿದ್ದ ಭಾರತ ಉತ್ಸವದಲ್ಲಿ ಭಾರತೀಯತೆ ಮೆರೆದಾಡಿತು.ನಾಡಗೀತೆಗಳು, ಹಾಡು, ಪ್ರತಿಭಾ ಶೋಧ ಮುಂತಾದ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಅಮೆರಿಕಾದ ಸರಕಾರಿ ಅಧಿಕಾರಿಗಳು, ಭಾರತದಿಂದ ಇದೇ ಉದ್ದೇಶಕ್ಕಾಗಿ ಆಗಮಿಸಿದ್ದ ಬಾಲಿವುಡ್ ನಟ, 38719http://kannada.oneindia.com/img/2009/08/19-us-india-independence1.jpg205349mahatma gandhiಗಾಂಧೀ ತಾತನ ಫೋಟೋ ನೋಡಿದ್ರಾ?/literature/articles/2009/0127-india-martyrs-mohandas-karamchand-gandhi.htmlಈ ದೇಶದಲ್ಲಿ ಗಾಂಧೀ ಚಿತ್ರ ಅಂಟಿಸುವುದು ಅಪರಾಧವಾಗಿದ್ದ ಕಾಲವೊಂದಿತ್ತು. ಸದ್ಯಕ್ಕೆ ಭಾರತದಲ್ಲಿ ಅಂತಹ ಪರಿಸ್ಥಿತಿ ಇಲ್ಲದಿರುವುದು ಒಂದು ಕ್ಷೇಮಸಮಾಚಾರ. ಆದರೆ, ಈಗ ಗಾಂಧೀ ಫೋಟೋ ಅಂಟಿಸುವವರೇ ಕಾಣಿಸುತ್ತಿಲ್ಲವೇ! ದೇವರ ಪಟಗಳನ್ನು ಇಡುವುದಕ್ಕೇ ಜಾಗ ಇಲ್ಲದಿರುವಾಗ ಗಾಂಧೀ, ಶಾಸ್ತ್ರೀ ಅವರಿಗೆ ಜಾಗ ಎಲ್ಲಿಂದ ತರೋಣ ಎನ್ನುತ್ತೀರೇನೋ?* ಮಂಜುನಾಥ ಅಜ್ಜಂಪುರಜನವರಿ 30 ಬಂದಿತೆಂದರೆ ಮನಸ್ಸು ಭಾರವಾಗಿಬಿಡುತ್ತದೆ. ಅಂತರಂಗದಲ್ಲಿ, ಗಾಂಧೀಜಿ 34306http://kannada.oneindia.com/img/2009/01/27-mahatma-gandhi4e.jpg205349mahatma gandhiಓಟಿಸ್ ಬಳಿ ಗಾಂಧಿಜಿ ಚಿತಾಭಸ್ಮ, ರಕ್ತದ ಮಾದರಿ/news/2009/03/05/otis-claims-he-has-gandhis-ashes-blood-sample.htmlನ್ಯೂಯಾರ್ಕ್, ಮಾ.5: ಮಹಾತ್ಮಾಗಾಂಧಿ ಬಳಸುತ್ತಿದ್ದ ಕನ್ನಡಕ, ಕಂಕುಳಲ್ಲಿ ಸಿಕ್ಕಿಸಿಕೊಳ್ಳುತ್ತಿದ್ದ ಗಡಿಯಾರ, ಎರಡು ಜೋಡಿ ಚಪ್ಪಲಿಗಳು ಮುಂತಾದ ವಸ್ತುಗಳನ್ನು ಹರಾಜಿಗೆ ಇಟ್ಟಿದ್ದ ಅಮೆರಿಕಾ ಮೂಲದ ಜೇಮ್ಸ್ ಓಟಿಸ್ ತನ್ನ ಬಳಿ ಗಾಂಧಿಜಿ ಬಳಸುತ್ತಿದ್ದ ಇನ್ನೂ ಅನೇಕ ಅಮೂಲ್ಯ ವಸ್ತುಗಳಿವೆ ಎಂದು ತಿಳಿಸಿದ್ದಾರೆ. ಮಹಾತ್ಮಾಗಾಂಧಿ ಅವರ ಚಿತಾಭಸ್ಮ, ಅವರು ಹತ್ಯೆಗೆ ಗುರಿಯಾದ ಪ್ರದೇಶದಿಂದ ಸಂಗ್ರಹಿಸಿದ ರಕ್ತದ ಮಾದರಿಗಳು 35011http://kannada.oneindia.com/img/2009/03/05-mahatma-gandhi-items1.jpg205349mahatma gandhi'ತೀನ್ ಪತ್ತಿ'ಯಲ್ಲಿ ಆಂಗ್ಲ ನಟ ಬೆನ್ ಕಿಂಗ್ಸ್ ಲೆ/movies/bollywood/2009/05/18-ben-kingsley-acts-in-teen-patty.htmlಮಾಹಾತ್ಮಗಾಂಧಿ ಅವರ ಪಾತ್ರವನ್ನು ಪೋಷಿಸುವ ಮೂಲಕ ಭಾರತೀಯರಿಗೆ ಹತ್ತಿರವಾದ ಆಂಗ್ಲ ನಟ ಬೆನ್ ಕಿಂಗ್ಸ್ ಲೆ. ಕಾಲು ಶತಮಾನಕ್ಕೂ ಹೆಚ್ಚು ಕಾಲದ ನಂತರ ಮತ್ತೆ ಬಾಲಿವುಡ್ ಗೆ ಹಿಂತಿರುಗುತ್ತಿದ್ದಾರೆ. ಅವರು ಪ್ರಸ್ತುತ 'ತೀನ್ ಪತ್ತಿ' ಎಂಬ ಹಿಂದಿ ಚಿತ್ರದಲ್ಲಿ ನಟಿಸುತ್ತಿದ್ದುಅಮಿತಾಬ್ ಬಚ್ಚನ್ ಪ್ರಧಾನ ಪಾತ್ರವನ್ನು ಪೋಷಿಸುತ್ತಿದ್ದಾರೆ. 'ತೀನ್ ಪತ್ತಿ' ಚಿತ್ರದಲ್ಲಿ ಲೆಕ್ಕದ ಮೇಷ್ಟ್ರ ಪಾತ್ರದಲ್ಲಿ ಕಿಂಗ್ಸ್ 36733http://kannada.oneindia.com/img/2009/05/18-ben-kingsley1.jpg205349mahatma gandhiತಿರುಕ್ಕುರಲ್ ಕರ್ತೃ ಕವಿ ತಿರುವಳ್ಳುವರ್ ಕಿರುಪರಿಚಯ/literature/articles/2009/0720-thirukkural-tamil-poet-thiruvalluvar.htmlತಿರುವಳ್ಳುವರ್ ತಮಿಳುನಾಡಿನ ಮಹಾನ್ ಕವಿ. ಮಧುರೆ ಜಿಲ್ಲೆಯ ಕಾವೇರಿ ತೀರದ ಪೂ೦ಪುಹಾರ್ ಹಳ್ಳಿಯಲ್ಲಿ ಹುಟ್ಟಿದರೆ೦ದು ಕೆಲವರ ಅಭಿಪ್ರಾಯ. ಮತ್ತೆ ಕೆಲವರು ಚೆನ್ನೈನಲ್ಲಿರುವ ಮೈಲಾಪುರ್ ಸ್ಥಳದವರೆನ್ನುತ್ತಾರೆ. ತಿರುವಳ್ಳುವರ್ ಅವರು 133 ಅಧ್ಯಾಯದ ತಿರುಕ್ಕುರಳ್ ಎ೦ಬ ಮಹಾ ಗ್ರ೦ಥ ರಚಿಸಿದ ಕವಿ. ಈತನ ಕಾಲ ನಿಗದಿಯಾಗಿಲ್ಲವಾದರೂ ಕ್ರಿಸ್ತಪೂರ್ವ 2ರಿಂದ ಹಿಡಿದು ಕ್ರಿಸ್ತಶಕ 8ವರೆಗೆ ಇರಬಹುದು ಎ೦ದು ಹೇಳಲಾಗಿದೆ. ಇವರ ಹೆಸರಿನಲ್ಲಿ 38088http://kannada.oneindia.com/img/2009/07/20-thiruvalluvar1.jpg205349mahatma gandhiಸ್ವಾತಂತ್ಯ್ರ ಚಿಂತನೆ: ಅಧಿಕಾರಕ್ಕೆ ಜೋತು ಬಿದ್ದ ಪಕ್ಷಗಳು/literature/articles/2009/independence-day-an-essay-by-siddesha-kurki.htmlಪ್ರತಿಯೊಂದು ದೇಶದ ಸ್ವಾತಂತ್ರ್ಯ ಸಂಗ್ರಾಮವು ಅತ್ಯಂತ ರೋಚಕವಾಗಿರುವಂತೆ ಭಾರತದ ಸ್ವಾತಂತ್ರ್ಯಸಂಗ್ರಾಮವು ರೋಚಕವಷ್ಟೇ ಅಲ್ಲ ಅತ್ಯಂತ ವೈಶಿಷ್ಯ್ಟ ಪೂರ್ಣವೂ ಆಗಿತ್ತು. ಇಡೀ ಜಗತ್ತಿಗೆ ಹೊಸಮಾರ್ಗವನ್ನು ತೋರಿದ ಶ್ರೇಯಸ್ಸು ಭಾರತಕ್ಕೆ ಸಲ್ಲುವುದು, ಸತ್ಯ ಅಹಿಂಸೆ, ಸತ್ಯಾಗ್ರಹ, ಆತ್ಮ ಬಲಿದಾನ ಇವುಗಳಿಂದ ಅತ್ಯಂತ ಬಲಾಢ್ಯವಾದ ಸಂಘಟನೆಯ ಸಂಗಡ ಯುದ್ಧಮಾಡಿ ಹೇಗೆ ಜಯಗಳಿಸಬಹುದೆಂಬುದನ್ನು ಭಾರತವು ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ.ಸ್ವಾತಂತ್ರ್ಯವೆಂದರೆ ಸ್ವೇಚ್ಚಾಚಾರವಲ್ಲ, 38640http://kannada.oneindia.com/img/2009/08/15-siddesha-kurki.jpg110253politicsಕೊಳೆತ ಮಾರುಕಟ್ಟೆಯಲ್ಲಿ ಹೆಂಗಸರ ತಾಜಾ ರಾಜಕೀಯ/column/humor/2008/0506-fresh-politics-in-rotten-market.htmlಭಾನುವಾರ ಬೆಳಿಗ್ಗೆ ಸಂತೆ. ಹಣ್ಣು, ಹೂವು, ತರಕಾರಿ ಮಾರುವವರದೇ ಭರಾಟೆ. ತರಕಾರಿ ಹೆಸರನ್ನು ಹಿಡಿದುಕೊಂಡು ಗಿರಾಕಿಗಳನ್ನು ತಮ್ಮತ್ತ ಸೆಳೆಯುವವರದೇ ಚೀರಲು ಧ್ವನಿಗಳು. ಆದರೆ, ಒಂದು ಮೂಲೆಯಲ್ಲಿ ಈ ಎಲ್ಲ ಚೀರು ಧ್ವನಿಗಳನ್ನು ಮೀರಿ ರೋಷಾವೇಷದ ಮಾತುಗಳು ಕೇಳಿಬರುತ್ತಿತ್ತು. ಮಹಿಳಾಮಣಿಗಳದ್ದೇ ಅಬ್ಬರ. ಏನೋ ಮಜಾ ನಡೆದೈತಿ ಅಂತ ನನ್ನ ಅನುಮತಿಗೂ ಕಾಯದೇ ಡಿಬ್ಬಿ ಅತ್ತ ಎಳೆದುಕೊಂಡು ಹೋದ. ಯಶ್ 2596http://kannada.oneindia.com/img/2009/11/14-market1.jpg110253politicsಮಾದೇಗೌಡರ ಮೇಲೆ ಬಿಜೆಪಿ ಜನರ ಹಲ್ಲೆ/news/2008/12/30/bjp-activists-attack-g-madegowda-in-maddur.htmlಮದ್ದೂರು, ಡಿ. 30 : ಬಿಜೆಪಿ ಅಭ್ಯರ್ಥಿ ಡಿ.ಸಿ.ತಮ್ಮಣ್ಣ ವಿರುದ್ಧವಾಗಿ ಚುನಾವಣಾ ಪ್ರಚಾರ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಕಾರ್ಯಕರ್ತರು ಹಿರಿಯ ರಾಜಕಾರಣಿ ಜಿ. ಮಾದೇಗೌಡರ ಮೇಲೆ ತೀವ್ರವಾಗಿ ಹಲ್ಲೆ ಮಾಡಲಾಗಿದೆ. ಮಾದೇಗೌಡರಿದ್ದ ಗಾಂಧಿ ಸ್ಮಾರಕ ಭವನಕ್ಕೆ ನುಗ್ಗಿದ ದುಷ್ಕರ್ಮಿಗಳು ಭವನದ ಕಿಟಕಿ ಗಾಜು, ಕುರ್ಚಿ ಮೇಜುಗಳನ್ನು ನುಚ್ಚುನೂರು ಮಾಡಿದ್ದಾರೆ ಮತ್ತು ಮಾದೇಗೌಡರಿಗೆ ಸೇರಿದ ಕಾರನ್ನು ಜಖಂಗೊಳಿಸಿದ್ದಾರೆ.'ಮಾದೇಗೌಡರು 33778http://kannada.oneindia.com/img/2008/12/30-madegowda1e.jpg110253politicsಬಳ್ಳಾರಿ ರೆಡ್ಡಿಗಳ ವಿರುದ್ಧ ನಟ ಸುದೀಪ್ ಸ್ಪರ್ಧೆ!?/movies/hero/2009/03/09-actor-sudeep-may-contest-lok-sabha-election-09.htmlಈ ಬಾರಿಯ ಲೋಕಸಭೆ ಚುನಾವಣೆಗೆ ನಟ ಸುದೀಪ್ ರನ್ನು ಕಣಕ್ಕಿಳಿಸಲು ರಾಜಕೀಯ ಪಕ್ಷಗಳು ತೆರೆ ಮರೆಯಲ್ಲಿ ಕಸರತ್ತು ನಡೆಸುತ್ತಿವೆ. ಹಲವಾರು ರಾಜಕೀಯ ಪಕ್ಷಗಳು ಸುದೀಪ್ ಗೆ ದುಂಬಾಲು ಬಿದ್ದಿರುವ ಕಾರಣ ಅವರು ರಾಜಕೀಯಕ್ಕೆ ಧುಮುಕುವ ಸಾಧ್ಯತೆಗಳಿವೆ. ಎಲ್ಲಿ ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸುದೀಪ್ ನಟನೆಯ 'ಈ ಶನಮಾನದ ವೀರ ಮದಕರಿ' ಚಿತ್ರ ಬಿಡುಗಡೆಗೆ 35107http://kannada.oneindia.com/img/2009/03/09-sudeep-madakari1.jpg110253politicsಬಿಜೆಪಿಯಿಂದ ಬೆಂಗಳೂರು ಉತ್ತರಕ್ಕೆ ಅಂಬರೀಷ್ ?/news/2009/03/14/congress-mp-ambareesh-to-join-bjp.htmlಬೆಂಗಳೂರು, ಮಾ.14: ಮಂಡ್ಯ ಸಂಸದ ಅಂಬರೀಷ್ ಅವರನ್ನು ಬಿಜೆಪಿಗೆ ಸೆಳೆಯುವ ಎಲ್ಲ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ. ಈಗಾಗಲೇ ಅಂಬರೀಷ್ ಕಾಂಗ್ರೆಸ್ ತೊರೆಯುವ ಮುನ್ಸೂಚನೆ ನೀಡಿರುವುದೇ ಈ ರಾಜಕೀಯ ಬೆಳವಣಿಗೆಗಳಿಗೆ ಕಾರಣವಾಗಿದೆ. ಮಂಡ್ಯ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಈ ಮೊದಲು ಚಿಂತಿಸಲಾಗಿತ್ತು. ನಂತರ ಯೋಗೇಶ್ವರ ಅವರಿಂದ ತೆರವಿನಿಂದ ಖಾಲಿಯಾಗಿರುವ ಚೆನ್ನಪಟ್ಟಣ ಕ್ಷೇತ್ರದಿಂದ ವಿಧಾನಸಭಾ ಸ್ಥಾನಕ್ಕೆ ಸ್ಪರ್ಧಿಸುವ ಚರ್ಚೆ 35211http://kannada.oneindia.com/img/2009/03/14-ambarish5.jpg110253politicsನೂತನ ವೆಬ್ ಸೈಟ್ ಆರಂಭಿಸಿದ ಗೋಪಿನಾಥ್/news/2009/04/01/official-website-to-vote-captain-gopinath.htmlಬೆಂಗಳೂರು, ಏ. 1 : 15ನೇ ಲೋಕಸಭೆ ಮಹಾಸಮರದ ಕಣದಲ್ಲಿ ವಿವಿಧ ರಂಗದಲ್ಲಿ ಖ್ಯಾತಿ ಗಳಿಸಿರುವ ಗಣ್ಯರು ರಾಜಕೀಯದ ಕಡೆಗೆ ಮುಖ ಮಾಡುತ್ತಿರುವುದು ಸಂತಸದ ಸಂಗತಿಯೇ ಆಗಿದೆ. ರಾಜಕೀಯ ಅಂದಾಕ್ಷಣ ಬಹುದೂರ ನಿಲ್ಲುತ್ತಿದ್ದ ಪ್ರತಿಷ್ಠಿತರೆಲ್ಲ ಅಖಾಡಕ್ಕೆ ಧುಮುಕುತ್ತಿರುವುದು ರಾಜಕೀಯ ಕ್ಷೇತ್ರದಲ್ಲಿ ಕೂಡಾ ಬದಲಾವಣೆ ಗಾಳಿ ಬೀಸಲಾರಂಭಿಸಿದೆ.ವಿಜ್ಞಾನ ತಂತ್ರಜ್ಞಾನ ಮುಂದುವರೆದಂತೆಲ್ಲ ಕಾಲಕ್ಕೆ ತಕ್ಕಂತೆ ವಿವಿಧ ಪಕ್ಷಗಳು ಹಾಗೂ ಅದರ 35650http://kannada.oneindia.com/img/2009/04/01-capt-gopinath1.jpgnews"> ಸ್ವಾತಂತ್ಯ್ರ ಚಿಂತನೆ: ಅಧಿಕಾರಕ್ಕೆ ಜೋತು ಬಿದ್ದ ಪಕ್ಷಗಳು | Indina Independence Day | Siddesha Kurki | Democracy | Mahatma Gandhi | ಸ್ವಾತಂತ್ಯ್ರ ಚಿಂತನೆ: ಅಧಿಕಾರಕ್ಕೆ ಜೋತು ಬಿದ್ದ ಪಕ್ಷಗಳು - Kannada Oneindia

ಸ್ವಾತಂತ್ಯ್ರ ಚಿಂತನೆ: ಅಧಿಕಾರಕ್ಕೆ ಜೋತು ಬಿದ್ದ ಪಕ್ಷಗಳು

Siddesha Kurki
ಪ್ರತಿಯೊಂದು ದೇಶದ ಸ್ವಾತಂತ್ರ್ಯ ಸಂಗ್ರಾಮವು ಅತ್ಯಂತ ರೋಚಕವಾಗಿರುವಂತೆ ಭಾರತದ ಸ್ವಾತಂತ್ರ್ಯಸಂಗ್ರಾಮವು ರೋಚಕವಷ್ಟೇ ಅಲ್ಲ ಅತ್ಯಂತ ವೈಶಿಷ್ಯ್ಟ ಪೂರ್ಣವೂ ಆಗಿತ್ತು. ಇಡೀ ಜಗತ್ತಿಗೆ ಹೊಸಮಾರ್ಗವನ್ನು ತೋರಿದ ಶ್ರೇಯಸ್ಸು ಭಾರತಕ್ಕೆ ಸಲ್ಲುವುದು, ಸತ್ಯ ಅಹಿಂಸೆ, ಸತ್ಯಾಗ್ರಹ, ಆತ್ಮ ಬಲಿದಾನ ಇವುಗಳಿಂದ ಅತ್ಯಂತ ಬಲಾಢ್ಯವಾದ ಸಂಘಟನೆಯ ಸಂಗಡ ಯುದ್ಧಮಾಡಿ ಹೇಗೆ ಜಯಗಳಿಸಬಹುದೆಂಬುದನ್ನು ಭಾರತವು ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ.

ಸ್ವಾತಂತ್ರ್ಯವೆಂದರೆ ಸ್ವೇಚ್ಚಾಚಾರವಲ್ಲ, ಸ್ವ-ನಿಯಂತ್ರಿತದಲ್ಲಿರುವುದು, ನಮ್ಮನ್ನು ನಾವೇ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಈಕಾರ್ಯವನ್ನು ನೀತಿಪೂರ್ಣದಿಂದ ನಡೆಯುವವನೇ ಮಾಡಬಲ್ಲ ಆತ ಪರರಿಗೆ ಮೋಸ ಮಾಡುವುದಿಲ್ಲ, ಸತ್ಯಮಾರ್ಗವನ್ನು ಬಿಡುವುದಿಲ್ಲ, ಆತ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡುವ ಮತ್ತು ಯಾರ ಹಂಗಿಲ್ಲದೆ ಬಾಳುವುದನೇ ಸ್ವರಾಜ್ಯ ಎಂದು ಗಾಂಧಿಯವರು ನಂಬಿದ್ದರು.

ಪ್ರಜಾಪ್ರಭುತ್ವ ಎಂದರೆ ಪ್ರಜೆಗಳು ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ಅಳಲ್ಪಡುವ ತತ್ವ ಎಂದು. ಅದರೆ ಇಂದಿನ ಪ್ರಜಾಪ್ರಭುತ್ವ (ಡೆಮಾಕ್ರಸಿ ) ಎಂದರೆ ಮತಗಳ ಬೇಟೆಯಾಡುವುದು, ದೇಶದ ಸಂಪನ್ಮೂಲಗಳನ್ನು ಲೂಟಿಮಾಡುವುದು, ರಾಜಕೀಯವಾಗಿ ಕ್ರಿಮಿನಲೈಜು ಮಾಡುವುದು, ಅಮಾಯಕಾರನ್ನು ಶೋಷಿಸುವುದು ಎಂಬುದಾಗಿದೆ. ಏಕೆಂದರೆ ಸಾಕ್ರೆಟಿಸನ ಮಾತು ಕೇಳ್ತಿದ್ದಿವೆ ಆದರೂ ವಿಷ ಹಾಕ್ತಿವಿ.

ಪೈಗಂಬರ ಬಗ್ಗೆ ಮಾತನಾಡುವುದು ದೇಶಾಂತರ ಓಡಿಸುತ್ತೇವೆ. ಕ್ರಿಸ್ತನ ವಿಚಾರ ಹೇಳುವುದು ಶಿಲುಬೆಗೆ ಏರಿಸುವುದು. ಗಾಂಧಜೀಯವರ ಅನುಯಾಯಿಗಳು ಎಂದು ಹೇಳುತ್ತೇವೆ, ನಿರಪಾರಾಧಿಗಳಿಗೆ ಗುಂಡು ಹಾರಿಸೋದು . ರೌಡಿಗಳಿಗೆ ಭೂಗತ ದೊರೆಗಳಿಗೆ ಪೋತ್ಸಾಹ ನೀಡುವುದು, ನಿಷ್ಟಾವಂತ ಪ್ರಾಮಾಣಿಕರನ್ನು ಮೇಲೆ ಏಳದಂತೆ ತುಳಿಯುವುದು , ದೇಶದ್ರೋಹಿಗಳಿಗೆ ಸಹಕಾರ ನೀಡುವಾದಾಗಿದೆ.

ಹಿಂದೆ ದೇಶಕ್ಕೆ ಮಾನ, ಮರ್ಯಾದೆ ಘನತೆ ಗೌರವ, ಪ್ರತಿಷ್ಟೆಗಳಿಗೆ " ಬರ " ಇರಲಿಲ್ಲ ಏಕೆಂದರೆ ದೇಶಕ್ಕಾಗಿ "ನಾನು "ಎಂದು ತಿಳಿದಿದ್ದರು. ಈಗ " ನನಗಾಗಿ" ದೇಶ ಎನ್ನುವ ಭ್ರಷ್ಟರ ಸಂತತಿ ಹೆಚ್ಚಿ, ತನ್ನ ಅಸ್ತಿ,ಕುಟುಂಬಕ್ಕಾಗಿ,ಸಂವಿಧಾನ ( ರಾಜ್ಯ ದೇಶದ) ನೀತಿ ತತ್ವಗಳನ್ನು ಗಾಳಿಗೆ ತೂರಿ, ತಮಗೆ ತೋರಿದಂತೆ ಕಾನೂನು ನೀತಿ ನಿಯಮ ಬದಲಾಗಿ ಇವತ್ತು ನಮ್ಮ ದೇಶದಲ್ಲಿ ಎಲ್ಲ ರಾಜಕೀಯ ಪಕ್ಷಗಳು , ನಾಯಕರು ವೋಟಬ್ಯಾಂಕಗಳೆಂದು ಪರಿಗಣಿಸಿ ರಾಜಕೀಯ ಲಾಭ ಗಿಟ್ಟಿಸುವ ದಾರಿಯಲ್ಲಿ ನಡೆದು ಧರ್ಮ , ಜಾತಿ ಪಂಗಡಎಂದು ಸಮಾಜ ಹೊಡೆಯುತ್ತಾ , ಅಸಹಾಯಕರ ಮೇಲೆ ಶೋಷಣೆ ನಿರಂತರವಾಗಿ ಸಾಗಿ. ನಮ್ಮ ದೇಶದಲ್ಲಿ ಈ ಕೆಳಗಿನ ಸಮಸ್ಯೆಗಳು ಕಾಡುತ್ತಿವೆ.

ರಾಜಕೀಯ ಪಕ್ಷಗಳಿಗೆ ದೇಶದ ಪ್ರಗತಿಗಿಂತ ಅಧಿಕಾರ ಹಿಡಿಯುವುದೇ ಮುಖ್ಯವಾಗಿ ಬಿಟ್ಟಿರುವುದರಿಂದ ಆರ್ಧಿಕ ವಿಷಯ ನಿರ್ಲಕ್ಷಕ್ಕೊಳಗಾಗಿ ಭಾಷಣಗಳಲ್ಲಿ ಸುದ್ದಿ ಸಮಚಾರಗಳಲ್ಲಿ ಬಹುತೇಕ ಪಕ್ಷಗಳು ಆರ್ಥಿಕ, ಸಾಮಜಿಕ ಸುಧಾರಣೆಗಳನ್ನು ಪ್ರತಿಪಾದಿಸುತ್ತವೆ. ಆದರೆ ವಾಸ್ತವದಲ್ಲಿ ಆಡಳಿತಾರೂಢ ಪಕ್ಷಗಳಾಗಲಿ ಅಥವಾ ವಿರೋದ ಪಕ್ಷಗಳಾಗಲಿ ಸುಧಾರಣೆಯತ್ತ ಗಮನ ಹರಿಸುತ್ತಿಲ್ಲ.
ನೂರೆಂಟು ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಂಡು , ಒಂದೊಂದು ಪಕ್ಷದ ನಿಲುವುಗಳು ಬೇರೆ ಬೇರೆಯಾಗಿ ದೇಶದ ಏಕತೆಗೆ ದುಡಿಯುವ ಕಾರ್ಯ ಆಗುತ್ತಿಲ್ಲ.ಅಧಿಕಾರದ ದಾಹ ಎಲ್ಲ ಪಕ್ಷಗಳಿಗೆ ಅಂಟಿಕೊಂಡು ರೋಗವಾಗಿ , ಪಕ್ಷಂತಾರಗೊಳ್ಳುತ್ತಿದ್ದರೆ.

ಭಾರತ ಫೆಡರಲ್ ರಾಷ್ಟವೆಂದು ಡಾ.ಬಿ.ಆರ್. ಅಂಬೇಡ್ಕರವರ ನಿಲುವಾಗಿತ್ತು. ಆದರೆ ಸ್ವಾತಂತ್ರ್ಯದ ನಂತರ ಪಕ್ಷಗಳ ವ್ಯವಸ್ಥೆ ಆರೋಗ್ಯ ಪೂರ್ಣವಾಗಿ ಬೆಳೆಯಲಿಲ್ಲ, ರಾಷ್ಟೀಯ ಪಕ್ಷಗಳು ಫೆಡರಲ್ ತತ್ವಗಳನ್ನು ಮೈಗೂಡಿಸಿಕೊಳ್ಳಲಿಲ್ಲ, ಹಾಗಾಗಿ ದೇಶದ ಪರಿಸ್ಥಿತಿ ಹದಗೆಟ್ಟಿದೆ.ರಾಷ್ಟೀಯ ಪಕ್ಷಗಳು ಹೈಕಮಾಂಡ ಪ್ರವೃತಿ ಬೆಳಸಿಕೊಂಡು, ದೇಶದ ಆಗು ಹೋಗುಗಳ ಬಗ್ಗೆ ಚರ್ಚಿಸದೆ, ತಮ್ಮ ಪಕ್ಷಗಳ ನಿಲುವನ್ನು ಅವಲಂಬಿಸಿರುವುದು ದೇಶಕ್ಕೆ ದೊಡ್ಡ ಹೊಡೆತವಾಗಿದೆ.

ದೇಶದ ಪ್ರಗತಿಗಾಗಿ ಅನುಸರಿಸಬೇಕಾದ ನಿಯಮಗಳು

*ಬೆಳೆಯುತ್ತಿರುವ ಜನಸಂಖ್ಯೆಯನ್ನು ಕಡಿಮೆ ಮಾಡಬೇಕಾದರೆ " ಕುಟುಂಬಕ್ಕೆ ಒಂದೇ ಜ್ಯೋತಿ " ಸಾಕು ಚಿಕ್ಕ ಕುಟುಂಬ ಚೊಕ್ಕ ಕುಟುಂಬವೆಂದು ಕಾನೂನು ನಿಯಮ.
*ರಾಜಕಾರಣಿಗಳು , ಆಡಳಿತಧಿಕಾರಿಗಳು, ಸರ್ಕಾರಿ ಕೆಲಸಕ್ಕೆ ಲಂಚ ಪಡೆಯದೆ ಪರಿಶುದ್ದರಾಗಬೇಕು ಆಗ ಭ್ರಷ್ಟಾಚಾರ ನಿರ್ಮೂಲನಗೊಂಡು ದೇಶದ ಆಭಿವೃದ್ದಿಗೆ ಸಹಾಯಕವಾಗಲಿದೆ.
*ಅಮೆರಿಕದ ಅಧ್ಯಕ್ಷಗಿರಿಗೆ ನಿಯಮವಿದ್ದಂತೆ,ನಮ್ಮ ದೇಶದಲ್ಲಿಯೂ ಒಂದೇಬಾರಿ ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಹುದ್ದೆಗೆ ಅಧಿಕಾರ ನಿಯಮ.
*ಆರ್ಥಿಕ ಸುಧಾರಣೆಗಾಗಿ ಎಲ್ಲ ಪಕ್ಷಗಳು ಏಕಚಿತ್ತದಿಂದ ಶ್ರಮಿಸಿದರೆ ಭಾರತ ಪ್ರಬಲ ಆರ್ಥಿಕ ಶಕ್ತಿಯನ್ನು ಹೊಂದಿದ ದೇಶವಾಗಿ ಹೊರಹೊಮ್ಮುತ್ತದೆ.
*ಪರರಾಷ್ಟ್ರಗಳಿಂದ ಸಾಲ ಮಾಡುವುದನ್ನು ತಡೆಗಟ್ಟಿ, ರಾಷ್ಟ್ರದ ಸಂಪನ್ಮೂಲಗಳನ್ನು ಸದುಪಯೋಗಪಡಿಸಿಕೊಳ್ಳುವತ್ತ ಗಮನಹರಿಸಬೇಕು.
*ದೇಶದಲ್ಲಿ ಸಂಯುಕ್ತರಂಗಗಳ ಸರಕಾರ ರಚನೆಯಾಗುತ್ತಿದ್ದು ರಾಜಕೀಯವಾಗಿ ಭಿನ್ನಭಿಪ್ರಾಯಗಳು ಬಂದು ಮಧ್ಯೆ ಸರಕಾರ ಬಿದ್ದು ಮಧ್ಯಂತರ ಚುನಾವಣೆಗಳ ಹಾವಳಿ ಹೆಚ್ಚಿ, ದೇಶದ ಮೇಲೆ ಹಣದ ಹೊರೆ ಬೀಳುತ್ತದೆ ಅದ್ದರಿಂದ ಚುನಾವಣಾ ಆಯೋಗ ಒಂದೆರಡು ರಾಷ್ಟ್ರೀಯ ಪಕ್ಷಗಳಿಗೆ ಮಾತ್ರ ಮನ್ನಣೆ ನೀಡಿ, ಪ್ರಾದೇಶಿಕ ಪಕ್ಷಗಳಿಗೆ ಚುನಾಯಿತರಾದರೆ ನಾಮಪತ್ರದಲ್ಲಿ ಯಾವ ಪಕ್ಷಕ್ಕೆ ಬೆಂಬಲವನ್ನು ನೀಡುತ್ತಾರೆ ಎಂಬುದು ತಿಳಿಸಬೇಕು. ಹಾಗೆಯೇ ಬೆಂಬಲ ವ್ಯಕ್ತ ಪಡಿಸಿದ ಪಕ್ಷಕ್ಕೆ ಐದು ವರ್ಷ ಅವಧಿಯವರಗೂ ಬೇರೆ ಪಕ್ಷಗಳಿಗೆ ಬೆಂಬಲಿಸುವಂತಿಲ್ಲವೆಂದು ಆಯೋಗ ನಿಯಮ ಮಾಡಬೇಕು.
*ಜಾತಿ ಭೇಧ ಎನ್ನದೆ ಎಲ್ಲರಿಗೂ ಒಂದೇ ಕಾನೂನು ಮಾಡಿ ಆರ್ಥಿಕವಾಗಿ ಹಿಂದುಳಿದಂಥವರಿಗೆ ಮಾತ್ರ ಮೀಸಲಾತಿ ಕೊಡುವಂತಾಗಬೇಕು.
*ಒಳ್ಳೆಯ ತಂತ್ರಜ್ಞ್ಞಾರಿಗೆ, ವಿಜ್ಞಾನಿಗಳಿಗೆ,ಆರ್ಥಶಾಸ್ತ್ರಜ್ಞರಿಗೆ ಸರಕಾರ ಪೋತ್ಸಹ ನೀಡಿ ಸಂಶೋದನೆ ಮಾಡಲು ಅವಕಾಶ ಮಾಡಿಕೊಡಬೇಕು.
*ಕೇವಲ ವೋಟಬ್ಯಾಂಕಗೋಸ್ಕರ ಜಾತಿ ಬೀಜ ಬಿತ್ತದೆ ಸರ್ವರಿಗೂ ಸಮನಾದ ಹಕ್ಕನ್ನ ನೀಡಬೇಕು.
*ಭ್ರಷ್ಟ ರಾಜಕಾರಣಿ , ಅಧಿಕಾರಿಗಳಿಗೆ ಶಿಕ್ಷೆ ನೀಡುವಂತಯಾಗಬೇಕು.
*ಕ್ರಿಮಿನಲ್‌ಗಳಿಗೆ ಚುನಾವಣಿಯಲ್ಲಿ ಸ್ಪರ್ಧಿಸಲು ಅವಕಾಶ ಕೊಡಬಾರದು.
*ಭಯೋತ್ಪಾದನೆ ನಿರ್ಮೂಲನಕ್ಕೆ ಎಲ್ಲ ರಾಜಕೀಯ ಪಕ್ಷಗಳು ,ಪಕ್ಷ ಬೇಧ ಮರೆತು ಒಂದುಗೂಡಿಯಾವ ವ್ಯಕ್ತಿಯ ಭಯೋತ್ಪಾದನೆಯಲ್ಲಿ ತೊಡಗುತ್ತಾನು ಆತಂಹವನಿಗೆ ಪ್ರೋತ್ಸಹ ನೀಡದೆ ವಿಚಾರಣೆಯಲೇ ಕಾಲ ಕಳೆಯದೇ ಗಲ್ಲು ಶಿಕ್ಷೆಗೆ ಗುರಿ ಪಡಿಸಲು ಒಮ್ಮತದ ನಿರ್ಧಾರ ಕೈಗೊಳ್ಳಬೇಕು.

ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರೆ, ವಿಶ್ವದ ಅಗ್ರಮಾನ್ಯ ರಾಷ್ಟ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿರಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+