ಮುದ್ದು ಮನಗಳ ಸ್ನೇಹಕ್ಕೂ ದೃಷ್ಟಿತಾಕಿದೆ... !

ಹೌದಲ್ವೆನೋ, ಮೊನ್ನೆ ತನಕ ನಾವಿಬ್ಬರೂ ಮುಖತಃ ಭೇಟಿಯಾಗಿರಲಿಲ್ಲ ನೀನು ಹೀಗೆ ಇರಬಹುದಾ? ಅನ್ನೋ ಸಣ್ಣ ಕಲ್ಪನೆ ಕೂಡ ನನಗಿರಲಿಲ್ಲ, ಆದರೂ ನಿನ್ನೊಂದಿಗೆ ಆಡಿದ ಮಾತುಗಳಷ್ಟು..? ಹಂಚಿಕೊಂಡ ನೋವಿನ ಕಥೆಗಳೆಷ್ಟು....? ಯಾವತ್ತೂ ಯಾರ ಮುಂದೆಯೂ ಕಣ್ಣೀರಾಗದ ನಾನು ನಿನ್ನದೆದುರು ಕಣ್ಣೀರ ಕಡಲಾಗ್ತೀನಲ್ಲ ಯಾಕೆ? ಸಿಂಪಥಿಗಾ? ಸಮಾಧಾನಕ್ಕಾ? ನಂಗೂ ಗೊತ್ತಿಲ್ಲ ಕಣೋ, ಒಂದು ಮಾತ್ರ ನಿಜ, ನಿನಗೆ ಪರಿಶುದ್ಧ ಮನಸ್ಸಿದೆ, ಅದರಲ್ಲಿ ಅಮ್ಮನ ಪ್ರೀತಿಯಿದೆ. ಆ ದೇವರಂತ ಪ್ರೀತಿಗೆ ಈ ಮನಸ್ಸು ಸುಮ್ಮನೆ ಹಂಬಲಿಸುತ್ತಿದೆ.
ನನಗಿಂತ ನಿನಗೆ ಚೆನ್ನಾಗಿ ಗೊತ್ತಿದೆ ನಾನು ನಿನ್ನ ಎಷ್ಟು ಹಚ್ಚಿಕೊಂಡಿದ್ದೀನಿ ಅಂತ, ನೀನು ನನಗೆ ಕೇವಲ ಗೆಳೆಯನೆ ಪ್ರೀತಿಯ ಪ್ರತಿರೂಪವೆ? ನಿನ್ನಡೆಗೆ ನನಗಿರುವುದು ಆಕರ್ಷಣೆಯಾ? ಪ್ರೀತಿಯ ? ಇದ್ಯಾವುದನ್ನೂ ಯೋಚಿಸದೆ. ಅದೊಂದು ಮುಂಜಾನೆ... ನಿನ್ನ ಬದುಕಿಗೆ ನನ್ನನ್ನು ಬರಮಾಡಿಕೊಳ್ಳುತ್ತೀಯಾ..? ಅಂತ ಕೇಳಿದವಳು ನಾನು , ಇವತ್ತಿಗೂ ಹಾಗೆ ಕೇಳಿದ್ದು ಸರಿಯಾ ? ತಪ್ಪಾ? ಗೊತ್ತಿಲ್ವೊ ಆ ನನ್ನ ವಿನಂತಿಯನ್ನು ನೀನು ಒಪ್ಪಿಕೊಂಡೆಯಾ? ತಿರಸ್ಕರಿಸಿದ್ಯಾ ? ತಿಳಿಯಲಿಲ್ಲ. ಆದರೂ ಭಾವನೆಗಳ ಜತೆ ನಾನು ಬಾಂಧವ್ಯ ಬೆಳೆಸಿದೆ. ವಾಸ್ತವ ಮರೆತು ಕಲ್ಪನೆಗಳ ಬೆನ್ನತ್ತಿದೆ . ಇದೆಲ್ಲವನ್ನೂ ತಿಳಿದ ನೀನು ನನ್ನ ಮನದ ಬೆಚ್ಚನೆಯ ಪ್ರೀತಿಯನ್ನು ಬಿರುಸಾಗಿ ತಿರಸ್ಕರಿಸಿದೆ ಅದನ್ನು ಕಾಲದ ಪರಿಧಿಗೆ ಕೊಟ್ಟು ಸುಮ್ಮನಾದೆ.
ನೀನು ಸುಮ್ಮನಿದ್ದುದನ್ನು ಒಲವ ಒಪ್ಪಿಗೆ ಅಂದುಕೊಂಡೆನಾ? ಉಹುಂ.ಗೊತ್ತಿಲ್ಲ ಕಣೋ..ಎಷ್ಟೇ ಆದರೂ ನೀನು ದೇವರಂಥ ಹುಡುಗನಲ್ಲಾ? ನನ್ನ ಮನಸ್ಸು ನಿನಗೆ ತಿಳಿದೇ ಇದ್ದಿತಾ? ಎಷ್ಟು ಜಾಗ್ರತೆ ವಹಿಸಿ ಪ್ರೀತಿಯೆಂಬ ಕಾನನದಿಂದ ಸ್ನೇಹದ ಊರಿಗೆ ಕರೆತಂದೆ ಅಲ್ವಾ? ನಿನಗೆ ಸ್ನೇಹಿತನಾಗಿ ಇರಬಲ್ಲೆ" ಎಂಬ ನಿನ್ನ ಮಾತು ತಡವಾಗಿ ಏನೂ ನನ್ನ ತಲುಪಿಲ್ಲ! ಅವತ್ತಿನ ನನ್ನ ಆಕ್ರಂದನವನ್ನು ನೋಡಿ ಬದುಕು ಗಹಗಹಿಸಿತ್ತು. ವಿಧಿ ವಿಲಕ್ಷಣವಾಗಿ ನಕ್ಕಿತ್ತು ನಿಜ. ಕಣೋ, ಇಷ್ಟು ವರ್ಷದ ಈ ಅವಧಿಯಲ್ಲಿ ಯಾವತ್ತಿಗೂ ನಂಗೆ ಹೀಗೆಲ್ಲ ಅನ್ನಿಸಲಿಲ್ಲ...
ಈ ಪುಟ್ಟ ಬದುಕನ್ನು ಮತ್ತೊಬ್ಬರ ಜತೆ ಹಂಚಿಕೊಳ್ಳೊ ಕನಸು ಕಂಡಿರಲಿಲ್ಲ. ಅದ್ಯಾಕೋ ನಿನ್ನ ಒಡನಾಟದ ಜತೆ ಜತೆಯಲಿ ಸಾಗೋ ಅದಮ್ಯ ಆಸೆ ನನ್ನದಾಗಿತ್ತು. ಪ್ರೀತಿಯಲ್ಲಿ ತಿರಸ್ಕರಿಸಿದರೂ ಸ್ನೇಹಿತರಾಗಿ ಉಳಿತೀನಿ ಅಂತ ಪ್ರಮಾಣ ಮಾಡಿದ್ದೆ ಮತ್ತು ನೀನು ಮಾತಿಗೆ ತಪ್ಪುವವನಲ್ಲ ಅಲ್ವಾ? ಆ ಕಾರಣಕ್ಕೆ ನನ್ನ ಮನದ ಅಷ್ಟು ಭಾವನೆಗಳನ್ನು ಸಮಾಧಿ ಮಾಡಿ ನಿನ್ನ ಸ್ನೇಹಕ್ಕೆ ಮನಸ್ಸು ಒಪ್ಪಿಸಿದ್ದೆ.... ಆದರೀಗ ಆ ಮುದ್ದು ಮನಗಳ ಸ್ನೇಹಕ್ಕೂ ದೃಷ್ಟಿತಾಕಿದಂತಿದೆ. ಇತ್ತೀಚಿನ ನಿನ್ನ ನಡವಳಿಕೆ ಮನಸ್ಸನ್ನ ಭೀತಿಗೊಳಿಸಿದೆ ಕಣೋ....
ಮೊದಲೆಲ್ಲಾ ನನ್ನ ಪ್ರತಿ ಸಂಕಟಕ್ಕೂ ಸಾಂತ್ವನದ ಮಡಿಲಾಗ್ತಿದ್ದ. ನೀನು ಈಗ ಗದರಿಕೆಯ ಮಾತುಗಳನ್ನು ಆಡ್ತಾ ಇದ್ದೀಯ ! ಕೇಳಿದರೆ ಮತ್ತಷ್ಟು ಒರಟಾಗ್ತೀಯ ಆತ್ಮೀಯತೆಯ ಕಡಲಲ್ಲಿ ಅಸಮಾಧಾನದ ಅಲೆಗಳು ಅಬ್ಬರಿಸ್ತಿವೆ, ಯಾಕೋ ಹೀಗೆಲ್ಲಾ ಆಗ್ತಿದೆ? ನಿಜಕ್ಕೂ ನೀನು ಬದಲಾಗಿದ್ದೀಯ ? ಆಥ್ವಾ ನಾನೇ ನಿನ್ನನ್ನು ತಪ್ಪು ತಿಳಿದಿದ್ದೀನಾ ? ನಿನ್ನ ಅಂಗೈಯ ಕಿರುಬೆರಳು ಹಿಡಿದು ಸ್ನೇಹದ ಪಯಣ ಬೆಳೆಸೋ ನನ್ನ ಪುಟ್ಟ ಆಸೆ ತಪ್ಪಾ ? ಉತ್ತರವಿಲ್ಲದ ಈ ಎಲ್ಲಾ ಪ್ರಶ್ನೆಗಳಿಗೂ ಖುದ್ದು ನಿನ್ನಿಂದಲೇ ಉತ್ತರಬೇಕಿದೆ ನೀನು ಸ್ನೇಹದಿಂದಲೂ ದೂರವಾಗ್ತಾ ಇದ್ದೀಯ ಎಂಬ ನನ್ನ ಮನದ ಆತಂಕವನ್ನು ಸುಳ್ಳು ಮಾಡಲು ಒಮ್ಮೆ ಭೇಟಿ ಯಾಗು.. ...!
ಇಂತಿ ನಿನ್ನ ದೂರವಾದ ಆಪ್ತಗೆಳತಿ...?
ರೂಪ.ಎಸ್
-
LPG Price: ಎಲ್ಪಿಜಿ ಗ್ಯಾಸ್ ಸಿಲಿಂಡರ್ ದರದಲ್ಲಿ ಭಾರೀ ಏರಿಕೆ: ಇಲ್ಲಿದೆ ಮಾರ್ಚ್ 1ರ ದರಪಟ್ಟಿ -
Gold Rate Today: ಆಭರಣ ಪ್ರಿಯರ ಗಮನಕ್ಕೆ: ಬೆಂಗಳೂರಿನಲ್ಲಿ ಇಂದು ಚಿನ್ನ-ಬೆಳ್ಳಿ ದರ ಹೇಗಿದೆ? ಇಲ್ಲಿದೆ ಮಾಹಿತಿ -
National Highway: ರಾಜ್ಯದಲ್ಲಿ ಹೊಸ ರಾಷ್ಟ್ರೀಯ ಹೆದ್ದಾರಿಯ ಮಹತ್ವದ ಅಪ್ಡೇಟ್ -
ಬೇರೆ ದೇಶಗಳಂತೆ ಭಾರತೀಯರಿಗೆ ಭಯದಿಂದ ನಿದ್ರಿಸುವ ಪರಿಸ್ಥಿತಿ ಅಲ್ಲ: ನಿವೃತ್ತ ಸೇನಾಧಿಕಾರಿ ಸುನೀಲ್ ಕುಮಾರ್ ಶಾಸ್ತ್ರಿ -
ಇರಾನ್ ಸುಪ್ರೀಂ ಯತೊಲ್ಲಾ ಅಲಿ ಖಮೇನಿ ಅಂತ್ಯ: ವಿಶ್ವದ ಮೇಲೆ 5 ಪರಿಣಾಮ ಸಾಧ್ಯತೆ: ಆಶಿಶ್ ಸಾರಡ್ಕ ಬರಹ -
Thalapathy Vijay: 400 ಕೋಟಿ ಆಸ್ತಿಗೆ ಒಡತಿ, ಲಂಡನ್ ಬೆಡಗಿ: ಯಾವ ಸಿನಿಮಾಗೂ ಕಡಿಮೆ ಇಲ್ಲ ದಳಪತಿ ವಿಜಯ್-ಸಂಗೀತಾ ಲವ್ ಸ್ಟೋರಿ -
Karnataka Weather: ಕರ್ನಾಟಕದ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ಬಿಸಿಲೂ ಹೆಚ್ಚು -
ಮಾರ್ಚ್ 3, 2026 – ಪೂರ್ವ ಫಲ್ಗುಣಿ ನಕ್ಷತ್ರದಲ್ಲಿ ಕೇತುಗ್ರಸ್ತ ಮಹಾ ಚಂದ್ರಗ್ರಹಣ: ದ್ವಾದಶ ರಾಶಿಗಳ ಫಲಿತಾಂಶ -
ಕರ್ನಾಟಕದ 4 ರೈಲು ನಿಲ್ದಾಣ ಸೇರಿ 76 ಕಡೆ ಪ್ರಯಾಣಿಕರ ನಿಲುಗಡೆ ತಾಣ ನಿರ್ಮಾಣ, ಏನಿದರ ಪ್ರಯೋಜನ? -
ಅಮೆರಿಕಕ್ಕೆ ಸೆಡ್ಡು ಹೊಡೆದು 16,800 ಕೋಟಿ ರೂ ಒಪ್ಪಂದ ಕಡಿದುಕೊಂಡ ಆಂತ್ರೋಪಿಕ್: ಬೆಂಗಳೂರು ಟೆಕ್ಕಿ ಮೆಚ್ಚುಗೆ -
ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಹೇಗಿದ್ರು ನೋಡಿ ರಶ್ಮಿಕಾ ಮಂದಣ್ಣ, ವಿಡಿಯೋ ವೈರಲ್ -
ಹರ್ಮೂಜ್ ಜಲಸಂಧಿ ಬಂದ್: ಭಾರತಕ್ಕೆ ತಟ್ಟಲಿದೆ ತೈಲ ದರದ ಬಿಸಿ, ಆರ್ಥಿಕತೆಗೂ ಭಾರಿ ಹೊಡೆತ












Click it and Unblock the Notifications