ಬಿಜೆಪಿಗೆ ಇನ್ನಾದರೂ ಜ್ಞಾನೋದಯವಾದೀತೇ?

ಅಂತೂ ಇಂತೂ ಚುನಾವಣಾ ಯುದ್ಧ ಮುಗಿದು, ಹೊಸ ವೇಷದಲ್ಲಿ ಹಳೇ ಸರ್ಕಾರ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದು ಆಡಳಿತಕ್ಕೆ ನಿಂತಿದೆ. ಸಂಪುಟ ರಚನೆ ಎಂಬ ದೊಂಬರಾಟದಲ್ಲಿ ಮುಳುಗಿದೆ. ಪರಾಭವಗೊಂಡಿರುವ ಭಾರತೀಯ ಜನತಾ ಪಕ್ಷದಲ್ಲಂತೂ ಆತ್ಮಾವಲೋಕನ ಎಂಬುದಡಿ ಮತ್ತದೇ ಸಮಯ ಹರಣದ ಹಾಗೂ ಕೆಸರೆರಚಾಟದ ಕಾರ್ಯಕ್ರಮ!
ಈ ಸಲದ ಚುನಾವಣೆ ರಾಜಕೀಯ ಪಕ್ಷಗಳಿಗೆ ಬುದ್ಧಿ ಕಲಿಸಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮತದಾರನಿಗೆ ಬುದ್ಧಿ ಕಲಿಸುವ ಬುದ್ಧಿ ಬಂದಿದೆ ಎಂಬುದನ್ನ ಸಾಬೀತು ಮಾಡಿದೆ. ಚುನಾವಣೆಯಲ್ಲಿ ಒಂದು ಪಕ್ಷ ಸೋತರೆ, ಇದರರ್ಥ ಜನತೆಗೆ ಆ ಪಕ್ಷ ಬೇಕಾಗಿಲ್ಲ ಎಂಬುದಕ್ಕಿಂತ, ಆ ಪಕ್ಷ ತನ್ನ ಅಡಳಿತದಲ್ಲಿ ಜನತೆಗೆ ಮೋಸ ಮಾಡಿದೆ ಎಂದರೆ ಹೆಚ್ಚು ಸಮಂಜಸ.
ಅತ್ಯಂತ ಹೆಚ್ಚಿನ ಸಾಮರ್ಥ್ಯ ಇದ್ದಂತಹ, ಹೆಚ್ಚಿನ ವಿದ್ಯಾವಂತರು (ಮತ ಹಾಕದವರು ಎಂದು ಓದಿಕೊಳ್ಳಬಹುದು) ಸಹಜವಾಗಿಯೇ ಅಪೇಕ್ಷೆ ಪಡುವಂತಹ, ಕಿಂಚಿತ್ತಾದರೂ ರಾಷ್ಟ್ರೀಯ ಬದ್ದತೆಯ ಧೋರಣೆ ಹೊಂದಿರ್ತಕ್ಕಂತಹ ಭಾರತೀಯ ಜನತಾ ಪಕ್ಷ ನೆಲಕಚ್ಚಿದ್ದು ಆಶ್ಚರ್ಯವೋ, ಸಹಜವೋ? ಮಾಧ್ಯಮಗಳನ್ನು ಸರಿಯಾಗಿ ಬಳಸಿಕೊಳ್ಳದ, ರಾಷ್ಟ್ರೀಯ ಸುದ್ಧಿವಾಹಿನಿಗಳ ಹಾಗೂ ಎಲ್ಲ ಮಾಧ್ಯಮಮಿತ್ರರೊಡನೆ ಉತ್ತಮ ಸಂಬಂಧವಿರಿಸಿಕೊಳ್ಳದ ಒಂದು ಪಕ್ಷವನ್ನು ರಾಷ್ಟ್ರೀಯ ಪಕ್ಷ ಎಂದು ಕರೆಯಬಹುದಾ? ಎನ್ನುವುದೇ ನನ್ನ ಪ್ರಶ್ನೆ.
ಭಯೋತ್ಪಾದನೆಯಂತಹ ಅತಿ ಮುಖ್ಯವಾದ ಹಾಗೂ ಹೆಚ್ಚು ಮಹತ್ವವಾದ ವಿಷಯವನ್ನೇ ಚುನಾವಣೆಯಲ್ಲಿ ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗದ ಬಿಜೆಪಿಗೆ ಇನ್ಯಾವ ವಿಷಯವನ್ನೂ ಬಳಸಿಕೊಳ್ಳಲು ಸಾಧ್ಯವಿಲ್ಲ. ತಾನು ಸಮಗ್ರ ಭಾರತದ ಕಲ್ಪನೆಯನ್ನಿಟ್ಟುಕೊಂಡು ಅದನ್ನು ಜನತೆಗೆ ನೀಡುವಲ್ಲಿ ಶಕ್ತರಾಗದ ಬಿಜೆಪಿ ಹೇಗೆ ತಾನೆ ಗೆಲುವಿನ ಕನಸು ಕಂಡಿತು? ಶಿಸ್ತಿಗೆ ಹೆಸರಾಗಿದ್ದಂತಹ ಪಕ್ಷ ಅದನ್ನೇ ಕಳೆದುಕೊಳ್ಳುವತ್ತ ಸಾಗಿರುವಾಗ ತನ್ನ ಸ್ಥಾನವನ್ನು ಹೇಗೆ ತಾನೇ ಭದ್ರಪಡಿಸಿಕೊಂಡೀತು? ಬೆಜೆಪಿಗೆ ನೀಡುವ ಬೆಂಬಲವನ್ನ ದೇಶದ ಕೆಲಸ ಎಂದೇ ನಂಬಿರುವ ಲಕ್ಷಾಂತರ ಪ್ರಜೆಗಳಲ್ಲಿ ಯಾವ ನಂಬಿಕೆಯನ್ನುಳಿಸಿದೆ ಬಿಜೆಪಿ? ಮತದಾನ ಮಾಡದ ವಿದ್ಯಾವಂತರನ್ನು ಆಕರ್ಷಿಸಲು ಅಸಮರ್ಥವಾದ ಬಿಜೆಪಿಗೆ ಜ್ಞಾನೋದಯ ಯಾವಾಗ?
ಇನ್ನಾದರೂ ಭಾರತೀಯ ಜನತಾ ಪಕ್ಷ ಎಚ್ಚೆತ್ತುಕೊಳ್ಳದಿದ್ದರೆ ದೇಶಕ್ಕೂ ನಷ್ಟ, ಜನತೆಗೂ ದ್ರೋಹ, ಪಕ್ಷದ ಅಸ್ತಿತ್ವಕ್ಕೂ ಧಕ್ಕೆ. 2014ರ ಚುನಾವಣೆಯ ನಂತರ ಆತ್ಮಾವಲೋಕನದ ಸಭೆ ಬಿಜೆಪಿಗೆ ಕಟ್ಟಿಟ್ಟ ಬುತ್ತಿ!
-
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral












Click it and Unblock the Notifications