ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆಳ್ವಾಸ್ ನುಡಿಸಿರಿ : ಅಕ್ಷರ ಚಾತ್ರೆಗೆ ಬಲ್ಲಾಳರಿಂದ ಚಾಲನೆ
(ಪ್ರತ್ಯಕ್ಷ ವರದಿ : ಡಿ.ಎಸ್.ಶ್ರೀನಿಧಿ)
ಮೂಡಬಿದರೆ, ನ. 30 : 'ಆಳ್ವಾಸ್ ನುಡಿಸಿರಿ 2007'ಎಂಬ ಮೂರು ದಿನಗಳ ಅಕ್ಷರ ಜಾತ್ರೆಗೆ ಇಂದು(ನ.30)ಬೆಳಗ್ಗೆ ಚಾಲನೆ ದೊರೆತಿದೆ. ಕನ್ನಡ ಮನಸ್ಸು - ಸಾಹಿತಿಯ ಜವಾಬ್ದಾರಿ ಎಂಬ ಪರಿಕಲ್ಪನೆಯೊಂದಿಗೆ ಮೂಡಿ ಬರುತ್ತಿರುವ ಈ ಕನ್ನಡ ನುಡಿ ಹಬ್ಬಕ್ಕೆ ಖ್ಯಾತ ಕಾದಂಬರಿಕಾರ ವ್ಯಾಸರಾಯ ಬಲ್ಲಾಳರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಈ ನಾಲ್ಕನೇ ಆಳ್ವಾಸ್ ನುಡಿಸಿರಿಯ ಅಧ್ಯಕ್ಷತೆಯನ್ನು ಖ್ಯಾತ ನಿಘಂಟುಕಾರ ಜಿ.ವೆಂಕಟಸುಬ್ಬಯ್ಯ ಅವರು ವಹಿಸಲಿದ್ದಾರೆ.
ನವೆಂಬರ್ 30ರ ವರೆಗೆ ಮೂಡುಬಿದರೆ ಸಮೀಪದ ವಿದ್ಯಾಗಿರಿಯಲ್ಲಿ ಉತ್ಸವ ನಡೆಯಲಿದೆ. ಈ ಉತ್ಸವದ ಬಗೆಗಿನ ನೇರ ಮತ್ತು ವಿಶೇಷ ವರದಿಗಳನ್ನು ದಟ್ಸ್ ಕನ್ನಡ ಕಾಲ ಕಾಲಕ್ಕೆ ನಿಮ್ಮ ಮುಂದೆ ತೆರೆದಿಡಲಿದೆ.
ಆಳ್ವಾಸ್ ನುಡಿಸಿರಿ: ಜಾತ್ರೆಯ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
Story first published: Friday, November 30, 2007, 13:07 [IST]