‘ನನ್ನ ಹೆಸರು ಉಪಾಸೆ ಕಣ್ರೀ...ಗೋವಿಂದ ಅಲ್ರೀ...’
- ಶಾಲಿನಿ ಹೂಲಿ
‘ಸಿಲ್ಲಿ ಲಲ್ಲಿ’ ಸೀರಿಯಲ್ನಲ್ಲಿ ಮಕ್ಕಳಿಗೆ ಹೆಚ್ಚು ಇಷ್ಟವಾಗುವ ಪಾತ್ರ ಯಾವುದು? ಡಾಕ್ಟರ್ ವಿಠಲ್ರಾವ್, ಸಮಾಜ ಸೇವಕಿ ಲಲಿತಾಂಬಾ, ವಿಶಾಲೂ, ರಂಗ, ಪಲ್ಲಿ, ಸೂಜಿ.... ಅಲ್ಲವೇ ಅಲ್ಲ !
ಹೌದು ನಿಮ್ಮ ಊಹೆ ನಿಜ. ಗೋವಿಂದನ ಪಾತ್ರ ಮಕ್ಕಳಿಗೆ ಮಾತ್ರವಲ್ಲ ಮನೆಮಂದಿಗೆಲ್ಲಾ ಇಷ್ಟ. ಎಲ್ಲೋ ಒಂದು ಸಲ ಸೀರಿಯಲ್ ನಡುವೆ ಮೂಲೆಯಲ್ಲಿ ಗೋವಿಂದ ಕಾಣಿಸಿದರೂ ಮನೆಯಲ್ಲಿ ಮಕ್ಕಳು ಗೋವಿಂದ... ಗೋವಿಂದ ಎಂದು ಕಿರುಚಲು ಪ್ರಾರಂಭಿಸುತ್ತಾರೆ.
‘ಗೋವಿಂದ...’ ಎಂದು ಕೂಗಿದರೇ ಸಾಕು, ‘ಅಯ್ಯೋ... ನನ್ನ ಹೆಸರು ಉಪಾಸೆ ಕಣ್ರೀ...ಗೋವಿಂದ ಅಲ್ಲಾ .... ’ ಎಂದು ಅಪ್ಪಟ ಉತ್ತರಕರ್ನಾಟಕದ ಭಾಷೆಯಲ್ಲಿ ಮಾತಿಗೆ ಕುಳಿತವರು ಇದೋ ಗೋವಿಂದು, ಅರ್ಥಾತ್ ಸಂಗಮೇಶ ಉಪಾಸೆ.
ಬಿಜಾಪುರ ಜಿಲ್ಲೆಯ ಅಂಜುಟಗಿ ಎಂಬ ಕುಗ್ರಾಮದಲ್ಲಿ ಜನಿಸಿದ ಉಪಾಸೆ, ಗೋವಿಂದನಾಗಿ ಈಟೀವಿ ನೋಡುಗರಿಗೆಲ್ಲ ಪರಿಚಿತರು. ರಂಗಭೂಮಿ ಪಟ್ಟುಗಳು ಅವರಿಗೆ ಕಿರುತೆರೆಯಲ್ಲಿ ಉಪಯೋಗಕ್ಕೆ ಬಂದಿವೆ. ಸಿಲ್ಲಿಲಲ್ಲಿಯಲ್ಲಿ ಪಾತ್ರಚಿಕ್ಕದಾದರೂ ಜನರ ಹೃದಯದಲ್ಲಿ ಜಾಗ ಮಾಡಿಕೊಂಡು ಕುಳಿತಿದ್ದಾರೆ. ಇವರು ಹಾಸ್ಯನಟರಾಗಿ ಎಲ್ಲರಿಗೂ ಗೊತ್ತು. ಅವರ ಉಳಿದ ಮುಖಗಳು ನಿಮಗೆ ಗೊತ್ತಾ ? ಪತ್ರಕರ್ತರಾಗಿ ‘ಕನ್ನಡಿ’ ಎನ್ನುವ ಮಾಸಪತ್ರಿಕೆಯ ಹೊರತರುತ್ತಿದ್ದಾರೆ. ಸಹ ನಿದೇಶಕರಾಗಿ, ಸಂಭಾಷಣಾಕಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರಿಗೆ ಬದುಕು ಅರಸುತ್ತಾ ಬಂದ ಈ ಉಪಾಸೆ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ. ಎ. ಮುಗಿಸಿದ್ದಾರೆ, ಕಾಲೇಜೊಂದರಲ್ಲಿ ಪ್ರಾಧ್ಯಾಪಕರು ಕೂಡ. ಅವರೊಂದಿಗೆ ನಡೆಸಿದ ಪುಟ್ಟ ಮಾತುಕತೆ ಹೀಗಿದೆ;
- ನೀವು ಟಿ.ವಿ ಮಾಧ್ಯಮಕ್ಕೆ ಕಾಲಿಟ್ಟಿದ್ದು ಹೇಗೆ ?
- ಕಿರುತೆರೆಯಲ್ಲಿ ನೀವು ನಟಿಸಿದ ಧಾರವಾಹಿಗಳು ಯಾವುವು?
- ನಿಮ್ಮ ರಂಗಭೂಮಿ ಅನುಭವ ಕಿರುತೆರೆಗೆ ಪೂರಕವಾಯಿತೇ?
- ಸಂಭಾಷಣೆಕಾರ, ಸಹನಿರ್ದೇಶನದ ಕೆಲಸದ ಬಗೆಗೆ....
- ಸಿಲ್ಲಿ ಲಲ್ಲಿ ಧಾರವಾಹಿಯಲ್ಲಿ ಗೋವಿಂದನ ಪಾತ್ರ ಎಷ್ಟರ ಮಟ್ಟಿಗೆ ಯಶಸ್ಸನ್ನು ಕೊಟ್ಟಿದೆ?
- ಉತ್ತರ ಕನ್ನಡ ಭಾಷೆ ನಿಮಗೆ ಹೇಗೆ ನೆರವಾಗಿದೆ ?
- ಭಾನುವಾರ ಏನ್ ಮಾಡ್ತೀರಾ ಗೋವಿಂದು? ಏನಾದ್ರೂ ವಿಶೇಷ?
- ನಿಮ್ಮ ಮನಸ್ಸಿನಲ್ಲಿರೋ ಕನಸು ಏನೆಂದು ಹೇಳುವಿರಾ ?












Click it and Unblock the Notifications