ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹೇಗೆ ಎಸೆದರೂ ನೆಲಕ್ಕೆ ಬೀಳುವ ಬ್ರಾಹ್ಮಣರು ಬೆಕ್ಕಿನಂತೆ
ಬೆಳಗಾವಿಯಲ್ಲಿ ಸಹೃದಯರೊಂದಿಗೆ ಗುರುವಾರ ಮುಖಮುಖಿಯಾಗಿದ್ದ ಅನಂತಮೂರ್ತಿಯವರ ಸಂವಾದದ ಮುಖ್ಯಾಂಶಗಳನ್ನು ಈಗಾಗಲೇ ಓದಿದ್ದೀರಿ. ಆ ವರದಿಯಲ್ಲಿ ಬಿಟ್ಟು ಹೋದ ಕೆಲವು ಮುಖ್ಯ ಅಂಶಗಳು : ಬ್ರಾಹ್ಮಣರಿಗೆ ಎಲ್ಲವನ್ನೂ ಜೀರ್ಣಿಸಿಕೊಳ್ಳುವ ಶಕ್ತಿಯಿದೆ. ಬ್ರಾಹ್ಮಣರು ಬೆಕ್ಕಿನಂತೆ. ಹೇಗೆ ಎಸೆದರೂ ಕಾಲೂರಿ ನೆಲಕ್ಕೆ ಬೀಳುವ ಬೆಕ್ಕಿನ ಶಕ್ತಿ ಬ್ರಾಹ್ಮಣರಿಗೂ ಇದೆ.
ಬ್ರಾಹ್ಮಣರಿಗೆ ಸರ್ಕಾರಿ ಕೆಲಸ ಸಿಗುವುದಿಲ್ಲ ಎಂದಾಗ, ಕೈಗಾರಿಕಾ ಕ್ಷೇತ್ರಕ್ಕೆ ಬಂದು ಅಲ್ಲಿಯೂ ಯಶಸ್ಸು ಕಂಡರು. ಬ್ರಾಹ್ಮಣರನ್ನು ಬೈದರೆ ಹೊಡೆಯುವುದಿಲ್ಲ . ಬೇರೆ ಜಾತಿಯವರನ್ನು ಬೈದರೆ ಹೊಡೆಯುತ್ತಾರೆ. ಪಿ.ಲಂಕೇಶ್ ಕನ್ನಡದ ಅತ್ಯುತ್ತಮ ಲೇಖಕರು. ಆದರೆ ಪ್ರತಿವಾರ ಬರೆಯಬೇಕಾದ ತುರ್ತಿನಿಂದ ಅವರು ರಂಜನೀಯವಾಗಿ ಬರೆಯಲು ಪ್ರಯತ್ನಿಸಿದರು.
ಸೃಜನಶೀಲ ಲೇಖಕ ಈ ರೀತಿ ಗರ್ಭ ಧರಿಸುವುದು ಒಳ್ಳೆಯದಲ್ಲ . ಯಾವ ಭಾಷೆ ಸ್ವತಂತ್ರ ಧರ್ಮ ಗ್ರಂಥ ಹೊಂದಿರುತ್ತದೆಯೋ ಅದು ಶ್ರೇಷ್ಠ ಭಾಷೆ. ವೀರಶೈವ ಧರ್ಮದ ಭಾಷೆ ಕನ್ನಡ.
Comments
English summary
Discussion program held in Belgaum with jnana peetha awardee Dr. U.R .Ananthamurthy