ಏಳನೇ ತರಗತಿಯ ಕನ್ನಡ ಕಸ್ತೂರಿಯಲ್ಲಿ ‘ಒಂದೇ ಮಾತರಂ’
*ಡ್ಯಾನಿ ಪೆರೇರಾ, ಹಳ್ಳಿ ಮೈಸೂರು
ಕರ್ನಾಟಕದ ಪಠ್ಯಪುಸ್ತಕ ರಚನಾ ಸಮಿತಿಯು ಗೊಂದಲ, ಅಧ್ವಾನಗಳಿಗೆ ಕುಖ್ಯಾತಿ ಪಡೆದಿರುವುದು ಎಲ್ಲರಿಗೂ ತಿಳಿದ ವಿಷಯ. ಈ ವರ್ಷದ 7 ನೇ ತರಗತಿ ಕನ್ನಡ ಕಸ್ತೂರಿ ಪಠ್ಯಪುಸ್ತಕದಲ್ಲಿ ತಪ್ಪು ಮಾಹಿತಿ ನೀಡುವುದರೊಂದಿಗೆ ತನ್ನ ಗೊಂದಲ ಮುಂದುವರಿಸಿದೆ.
‘ಭಾರತ ಸೇವಾದಳ’ ಎಂಬ ಪಾಠದಲ್ಲಿ ನಾ.ಸು.ಹರ್ಡೀಕರ್ ಬಗ್ಗೆ ಹೇಳುತ್ತಾ , ಸತ್ಯಾಗ್ರಹಿಗಳಲ್ಲಿ ಶಿಸ್ತು , ಆದರ್ಶ, ಗುರಿ ಮೂಡಿಸುವ ಸಲುವಾಗಿ 1973 ರಲ್ಲಿ ಹಿಂದೂಸ್ತಾನಿ ಸೇವಾದಳ ಆರಂಭಿಸಲಾಯಿತೆಂದು ಅದರ ಪ್ರಥಮ ಅಧ್ಯಕ್ಷ ಜವಾಹರ್ಲಾಲ್ ನೆಹರೂ ಅವರೆಂದೂ, 1931 ರಲ್ಲಿ ಹಿಂದೂಸ್ತಾನಿ ಸೇವಾದಳ ಭಾರತ ಸೇವಾದಳವಾಗಿ ಪುನರ್ ನಾಮಕರಣಗೊಂಡಿತೆಂದೂ ತಿಳಿಸಲಾಗಿದೆ.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದದ್ದು 1947 ರಲ್ಲಿ . ಪಾಠದ ಪ್ರಕಾರ ಸೇವಾದಳ ಆರಂಭವಾದದ್ದು 1973 ರಲ್ಲಿ . ಹಾಗಾದರೆ ಹರ್ಡೀಕರರು ಯಾವ ದೇಶದ ಸ್ವಾತಂತ್ರ್ಯಕ್ಕಾಗಿ ಶಿಸ್ತು, ಆದರ್ಶ, ಗುರಿ ಮೂಡಿಸಲು ಸೇವಾದಳ ಆರಂಭಿಸಿದರು? 1973 ರವರೆಗೆ ನೆಹರೂ ಬದುಕಿದ್ದರೆ? ಈ ಪ್ರಶ್ನೆಗಳಿಗೆ ಪಠ್ಯಪುಸ್ತಕ ಸಮಿತಿ ಉತ್ತರಿಸಬೇಕಿದೆ.
ಈ ದೇಶದ ಮಕ್ಕಳಿಗೆ ಮಾತೃಭೂಮಿಯ ಸ್ಪಷ್ಟ ಪರಿಚಯ ಮಾಡಿಕೊಡುವ ‘ವಂದೇ ಮಾತರಂ’ (ತಾಯೆ ವಂದಿಸುವೆ) ಇವರಿಗೆ ‘ಒಂದೇ ಮಾತರಂ’ ಆಗಿರುವುದು ಇನ್ನೊಂದು ಅಭಾಸ. ಸ್ವಾತಂತ್ರ್ಯೋತ್ತರ ಸೇವಾದಳ ರಾಜಕೀಯ ಪಕ್ಷವೊಂದರ ತುತ್ತೂರಿ ಎಂಬುದು ತಿಳಿದ ವಿಚಾರವೇ. ಭಾರತ ಸೇವಾದಳದ ಶಿಸ್ತು , ರಾಷ್ಟ್ರಪ್ರೇಮವನ್ನು ಹೊಗಳುವ ಭರದಲ್ಲಿ ರಾಷ್ಟ್ರೀಯ ಘೋಷಣೆಗೆ ಅಪಮಾನ ಮಾಡಬಾರದು.
ಮುಖಪುಟ / ಸಾಹಿತ್ಯ ಸೊಗಡು-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications