ರಾಹುದೋಷ ಇದ್ದರೆ ಮನೆಯಲ್ಲಿ ಖಾಲಿ ಕುಂಡ ಈ ದಿಕ್ಕಿಗೆ ಇಡಿ..
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ಖಾಲಿ ಮಡಕೆ ಅಥವಾ ಹೂವಿನ ಕುಂಡವನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಖಾಲಿ ಮಡಕೆಯನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಇರಿಸಿದರೆ ನಿಮ್ಮ ಮನೆಯಿಂದ ಅನೇಕ ಸಮಸ್ಯೆಗಳು ದೂರವಾಗುತ್ತವೆ.
ಹೌದು.. ನಿಮ್ಮ ಜಾತಕದಲ್ಲಿ ರಾಹುವಿನ ಕೆಟ್ಟ ಪರಿಣಾಮಗಳನ್ನು ಹೊಂದಿದ್ದರೆ, ಖಾಲಿ ಮಡಕೆಯನ್ನು ಸರಿಯಾದ ದಿಕ್ಕಿನಲ್ಲಿ ಇಡಬೇಕು. ಹಾಗಾದರೆ ರಾಹುದೋಷದಿಂದ ಪಾರಾಗಲು ಮನೆಯ ಯಾವ ದಿಕ್ಕಿಗೆ ಖಾಲಿ ಮಡಕೆ ಇಡಬೇಕು ಎಂದು ತಿಳಿಯೋಣ.

ಮನೆಯಲ್ಲಿ ಖಾಲಿ ಮಡಕೆಯನ್ನು ಯಾವ ದಿಕ್ಕಿನಲ್ಲಿ ಇಡಬೇಕು?
ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆಯ ದಕ್ಷಿಣ ದಿಕ್ಕಿನಲ್ಲಿ ಖಾಲಿ ಮಡಕೆ ಅಥವಾ ಕುಂಡವನ್ನು ಇಡಬೇಕು. ಇದು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಹೊರಹಾಕುತ್ತದೆ. ಈ ಖಾಲಿ ಕುಂಡದಲ್ಲಿ ಅರಿಶಿನದ ಉಂಡೆಯನ್ನು ಹಾಕಿ ಇಟ್ಟರೆ ತುಂಬಾ ಪ್ರಯೋಜನಕಾರಿ. ಇದು ನಿಮ್ಮ ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ.
ಖಾಲಿ ಮಡಕೆ ಎಂದರೆ ನೀವು ಅದನ್ನು ಸಂಪೂರ್ಣವಾಗಿ ಖಾಲಿ ಇಡಬೇಕು ಎಂದು ಅರ್ಥವಲ್ಲ, ಆದರೆ ಅದರಲ್ಲಿ ಮಣ್ಣು ಕೂಡ ಹಾಕಿ ಇಡಬಹುದು. ಅದರಲ್ಲಿ ಯಾವುದೇ ಸಸ್ಯಗಳನ್ನು ನೆಟ್ಟಿಲ್ಲ ಎಂದಾದರೂ ಪರವಾಗಿಲ್ಲ. ಇದು ನಿಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ದೂರ ಮಾಡುತ್ತದೆ. ಆದರೆ ಅದರ ವಾಸ್ತು ಮಾತ್ರ ಸರಿಯಾಗಿರಬೇಕು.
ದುಷ್ಟ ಕಣ್ಣಿನಿಂದ ರಕ್ಷಿಸುವ ಖಾಲಿ ಮಡಕೆ
ದುಷ್ಟ ಕಣ್ಣು ನಕಾರಾತ್ಮಕ ಶಕ್ತಿಯೊಂದಿಗೆ ಸಂಬಂಧಿಸಿದೆ. ನಿಮ್ಮ ಮನೆಗೆ ಯಾರೊಬ್ಬರ ದುಷ್ಟ ಕಣ್ಣಿನ ನೆರಳು ಬೀಳದಂತೆ ತಡೆಯಲು ದಕ್ಷಿಣ ದಿಕ್ಕಿನಲ್ಲಿ ಖಾಲಿ ಮಡಕೆಯನ್ನು ಇಡಬೇಕು. ಹೀಗೆ ಮಾಡುವುದರಿಂದ ದುಷ್ಟ ಕಣ್ಣಿನ ಪರಿಣಾಮ ದುರ್ಬಲಗೊಳ್ಳುತ್ತದೆ ಮತ್ತು ನಿಮ್ಮ ಅಪೂರ್ಣ ಕೆಲಸವೂ ಪೂರ್ಣಗೊಳ್ಳಲು ಪ್ರಾರಂಭಿಸುತ್ತದೆ.

ಅಕಾಲಿಕ ಮರಣದ ಅಪಾಯವನ್ನು ತೆಗೆದುಹಾಕುತ್ತದೆ
ದಕ್ಷಿಣ ದಿಕ್ಕನ್ನು ಯಮರಾಜನ ದಿಕ್ಕು ಎಂದು ಕರೆಯಲಾಗುತ್ತದೆ. ಆದ್ದರಿಂದ ದಕ್ಷಿಣ ದಿಕ್ಕಿಗೆ ಮುಖಮಾಡಿ ಆಹಾರವಾಗಲಿ ಅಥವಾ ಯಾವುದೇ ಶುಭ ಕಾರ್ಯವಾಗಲಿ ಮಾಡಲಾಗುವುದಿಲ್ಲ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ದಕ್ಷಿಣ ದಿಕ್ಕಿನಲ್ಲಿ ಖಾಲಿ ಮಡಕೆಯನ್ನು ಇಡುವುದರಿಂದ ಅದು ಅಕಾಲಿಕ ಮರಣದ ಅಪಾಯವನ್ನು ತೆಗೆದು ಹಾಕುತ್ತದೆ.
ಮನೆಯ ತೊಂದರೆ ತೊಡೆದುಹಾಕಲು ಪರಿಣಾಮಕಾರಿ
ನಿಮ್ಮ ಮನೆಯಲ್ಲಿ ಯಾವಾಗಲೂ ಜಗಳಗಳು ನಡೆಯುತ್ತಿದ್ದರೆ ಹೂವಿನ ಕುಂಡವನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ಇಡಿ. ಏಕೆಂದರೆ ಸಣ್ಣ ವಿಷಯಗಳಿಗೆ ಘರ್ಷಣೆಗಳು ನಡೆದರೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯಿದೆ ಎಂದರ್ಥ. ಆದ್ದರಿಂದ ಹೂವಿನ ಕುಂಡವನ್ನು ದಕ್ಷಿಣದಲ್ಲಿ ಇಡಬೇಕು. ಇದರಿಂದ ನಕಾರಾತ್ಮಕ ಶಕ್ತಿಯು ಮನೆಯಿಂದ ಹೊರಹೋಗುತ್ತದೆ.
ಆರ್ಥಿಕ ಸ್ಥಿತಿ ಸದೃಢ
ಒಬ್ಬ ವ್ಯಕ್ತಿಯ ಜೀವನದಲ್ಲಿ ಕೆಟ್ಟ ಸಮಯ ಆರಂಭವಾದರೆ ಅವನು ಮಾಡಿದ ಕೆಲಸವು ಹಾಳಾಗಲು ಪ್ರಾರಂಭವಾಗುತ್ತದೆ. ಇದರಿಂದ ವ್ಯಕ್ತಿಯು ಸಾಲದಲ್ಲಿ ಮುಳುಗುತ್ತಾನೆ. ಆದ್ದರಿಂದ ನೀವು ಈ ಸಮಸ್ಯೆಗಳನ್ನು ಜಯಿಸಲು ಬಯಸಿದರೆ ಮನೆಯ ದಕ್ಷಿಣ ದಿಕ್ಕಿನಲ್ಲಿ ಖಾಲಿ ಮಡಕೆಯನ್ನು ಇಡಬೇಕು. ಇದು ನಿಮ್ಮನ್ನು ಸಾಲದಿಂದ ಮುಕ್ತಗೊಳಿಸುತ್ತದೆ ಮತ್ತು ನಿಮ್ಮ ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ.
-
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಜೆಎಎಲ್ ದಿವಾಳಿ ಪ್ರಕ್ರಿಯೆ ಬಗ್ಗೆ ವೇದಾಂತ ಆಕ್ಷೇಪ; ಅದಾನಿ ಬಿಡ್ಗೆ ಸಾಲದಾತರ ಸಮಿತಿ, ನ್ಯಾಯಮಂಡಳಿಗಳ ಬೆಂಬಲ ದಾಖಲೆಗಳಿಂದ ದೃಢ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು










Click it and Unblock the Notifications