Greed: ದುರಾಸೆಯ ಬೆನ್ನೇರಿ ಹೊರಟವರಿಗೆ ನೆಮ್ಮದಿ ಮರೀಚಿಕೆ..!
ಇವತ್ತು ನಮ್ಮ ನಡುವೆ ಇರುವ ಅದೆಷ್ಟೋ ಮಂದಿ ದುರಾಸೆಯ ಫಲದಿಂದಾಗಿ ಎಲ್ಲವೂ ಇದ್ದರೂ ನೆಮ್ಮದಿಯಾಗಿ ಅದನ್ನು ಅನುಭವಿಸಲಾರದ ಸ್ಥಿತಿಗೆ ತಲುಪಿದ್ದಾರೆ. ಹೀಗಾಗಿ ಅವರು ಎಲ್ಲಿದ್ದರೂ ನೆಮ್ಮದಿಯಾಗಿ ಇರದೆ ಸದಾ ಒತ್ತಡ.. ಆತಂಕದಲ್ಲಿ ದಿನ ಕಳೆಯುವಂತಾಗಿದೆ. ಹೀಗಾಗಿ ನೆಮ್ಮದಿ ಎನ್ನುವುದು ಬಹಳಷ್ಟು ಜನರಿಗೆ ಮರೀಚಿಕೆಯಾಗಿದೆ. ಇಲ್ಲಿ ನಾವೆಲ್ಲರೂ ನೆಮ್ಮದಿಯಾಗಿರಬೇಕು, ಖುಷಿಯಾಗಿರಬೇಕೆಂದೇ ಬಯಸುತ್ತೇವೆ ಮತ್ತು ಅದಕ್ಕಾಗಿ ದಿನನಿತ್ಯ ದುಡಿಯುತ್ತೇವೆ. ಆದರೆ ನೆಮ್ಮದಿಯೇ ಇಲ್ಲದೆ ಹೋದರೆ ಏನಿದ್ದು ಏನು ಪ್ರಯೋಜನ?
ನಾವೀಗ ಹಣದ ಬೆನ್ನತ್ತಿದ್ದೇವೆ. ಇದ್ದುದರಲ್ಲೇ ನೆಮ್ಮದಿಯಿಂದ ಬದುಕುವ, ಹಾಸಿಗೆಯಿದ್ದಷ್ಟೇ ಕಾಲು ಚಾಚುವ ಹಳೆಯ ಶೈಲಿಯ ಬದುಕಿಗೆ ಹೊಂದಿಕೊಂಡು ಬದುಕಲು ನಾವು ತಯಾರಿಲ್ಲದ ಕಾರಣ, ನಮಗೆ ಉಪಯೋಗವಾಗದಿದ್ದರೂ ಅದು ನಮಗೆ ಬೇಕೆಂಬ ದುರಾಸೆ. ಅದನ್ನು ಸಾಲ ಮಾಡಿಯಾದರೂ ಕೊಂಡುಕೊಳ್ಳಲೇ ಬೇಕು.

ಬರುವ ಆದಾಯದಲ್ಲಿ ಅದಕ್ಕೊಂದು ಪಾಲು.. ನಮ್ಮ ಆಸೆಗಳು ಹೆಚ್ಚಾದಷ್ಟೂ ದಿನನಿತ್ಯ ಹಣ ಬರುವ ಮೂಲವನ್ನು ಅರಸುತ್ತಾ ಹೋಗುತ್ತೇವೆ. ಸಂಪಾದಿಸುವುದೇ ಬದುಕು. ಇದಕ್ಕಾಗಿ ಈಗ ನಾವು ನಿದ್ದೆ, ಆಹಾರ, ಸಂಬಂಧ ಎಲ್ಲವನ್ನೂ ತ್ಯಜಿಸಲು ಸಿದ್ಧರಾಗಿದ್ದೇವೆ. ಅದರಾಚೆಗೆ ಕೆಲವರು ಅಡ್ಡಮಾರ್ಗವನ್ನು ಹಿಡಿದು ಭಯದಲ್ಲಿಯೇ ಬದುಕುತ್ತಾರೆ.
ನಮ್ಮ ಮನಸ್ಸು ಯಾವಾಗ ಗೊಂದಲಕ್ಕೀಡಾಗುತ್ತದೆಯೋ ಅದರ ಪ್ರಭಾವ ಶರೀರದ ಮೇಲಾಗುತ್ತದೆ. ಹೊರ ಪ್ರಪಂಚಕ್ಕೆ ನಾವು ವಿಚಿತ್ರವಾಗಿ ಕಾಣುತ್ತೇವೆ. ಮಕ್ಕಳ, ಹೆಂಡತಿ, ಸಹದ್ಯೋಗಿಗಳ ಮೇಲೆ ಸಿಡುಕುತ್ತೇವೆ. ಅನಾವಶ್ಯಕ ಕೋಪ ಮಾಡಿಕೊಳ್ಳುತ್ತೇವೆ. ನಾವ್ಯಾಕೆ ಹೀಗೆ ಮಾಡಿಕೊಳ್ಳುತ್ತೇವೆ ಎಂಬುವುದು ನಮಗೆ ತಿಳಿಯುವುದಿಲ್ಲ. ಇದ್ದಕ್ಕಿದ್ದಾಗೆ ಉದ್ರೇಕಗೊಳ್ಳುವುದು, ಅಸಹನೆ ಪಡುತ್ತೇವೆ. ಇದು ಹೆಚ್ಚುತ್ತಾ ಹೋದಂತೆ ಕೃತಕ ಸುಖಕ್ಕೆ ತೆರೆದುಕೊಂಡು ಕುಡಿತ ಸೇರಿದಂತೆ ಇನ್ನಿತರ ದುಶ್ಚಟಕ್ಕೆ ಬಲಿಯಾಗುತ್ತೇವೆ.

ಒತ್ತಡದಲ್ಲಿಯೇ ಕಳೆದುಹೋಗುವ ಬದುಕು
ಕೆಲವೊಮ್ಮೆ ಎಲ್ಲ ವಿಚಾರಗಳನ್ನು ತಲೆಯಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲ. ಮೆದುಳಿನಲ್ಲಿ ಶೇಖರಣೆಯಾಗುವ ಅಸಂಖ್ಯ ವಿಷಯಗಳನ್ನು ಮೆದುಳು ಹೊರ ಹಾಕಲು ಯತ್ನಿಸುತ್ತದೆ. ಮರೆವು ಎನ್ನುವುದು ಒಂದು ರೀತಿಯ ಮೆದುಳಿನ ಡಿಫೆನ್ಸಿವ್ ಮೆಕಾನಿಸಮ್ನಂತೆ. ಇಲ್ಲಿ ಮರೆವು ಚಿಕ್ಕ ಚಿಕ್ಕ ವಿಷಯಗಳಿಗಾಗಿಯೇ.. ಪುಸ್ತಕ ಒಂದೆಡೆಯಿಟ್ಟು ಮತ್ತೊಂದೆಡೆ ಹುಡುಕುವುದು, ಕೀ ಬಿಟ್ಟು ಆಫೀಸಿಗೆ ತೆರಳುವುದು ಮತ್ತೆ ಹುಡುಕುವುದು ಹೀಗೆ ಏನಾದರೊಂದು ನಡೆಯುತ್ತಲೇ ಇರುತ್ತದೆ. ಈ ಸಂದರ್ಭ ಆತಂಕ, ಕೋಪ, ಭಯ, ಕಳವಳ ಹೀಗೆ ಎಲ್ಲವೂ ಒಮ್ಮೆಗೆ ಉಂಟಾಗುತ್ತದೆ.
ಆಹಾರ ಸೇವಿಸುವುದನ್ನು ಮರೆಯುತ್ತೇವೆ. ಸಮಯಕ್ಕೆ ಸರಿಯಾಗಿ ಹೊಟ್ಟೆ ಆಹಾರವನ್ನು ಹಸಿವಿನ ಮೂಲಕ ನೆನಪಿಸಿದರೂ ಕೆಲಸದ ಒತ್ತಡದಲ್ಲಿ ಅದನ್ನು ಮತ್ತೆ ಮಾಡಿದರಾಯಿತೆಂದು ಮುಂದೂಡುತ್ತೇವೆ. ನಿದ್ದೆ ಕಡಿಮೆ ಮಾಡುವುದರಿಂದಲೂ ಕ್ರಿಯಾಶೀಲತೆ ಕಡಿಮೆಯಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸದಾ ಒತ್ತಡದಲ್ಲಿರುವುದರಿಂದ ಎಂಟು ಗಂಟೆ ನಿದ್ದೆ ಮಾಡಿದರೂ ನಿದ್ದೆ ಸಾಕಾಗಿಲ್ಲವೆಂದುಕೊಳ್ಳುತ್ತೇವೆ. ಸುಸ್ತು ಕಾಡುತ್ತದೆ. ಇದಕ್ಕೆ ಕಾರಣ ನಿದ್ದೆಯಲ್ಲೂ ನಮ್ಮ ಮೆದುಳು ಟೆನ್ಷನ್ಗೆ ಒಳಗಾಗಿರುತ್ತದೆ. ಅದಕ್ಕೆ ರಾತ್ರಿ ನಿದ್ದೆ ಮಾಡಿದರೂ ಹಗಲು ನಿದ್ದೆ ಮಾಡಬೇಕೆನಿಸುತ್ತದೆ. ಒತ್ತಡದಿಂದ ಮುಕ್ತವಾಗಿ ಒಂದಷ್ಟು ರಿಲ್ಯಾಕ್ಸ್ ಬಯಸುವವರು ತಜ್ಞರು ಹೇಳಿರುವ ಕೆಲವು ಸಲಹೆಗಳನ್ನು ಪಾಲಿಸಬಹುದು.
ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಅಗತ್ಯ
ಸಾಮಾನ್ಯವಾಗಿ ಒತ್ತಡ ಉಂಟು ಮಾಡುವ ಕಾರಣಗಳಲ್ಲಿ ಹೆಚ್ಚಿನವು ಜೀವನ ಶೈಲಿಗೆ ಸಂಬಂಧಿಸಿದ್ದಾಗಿದೆ. ನಾವು ಮಾಡುವ ಕೆಲಸದಲ್ಲಿ ನಮಗೆ ಆನಂದ ಸಿಗುತ್ತಿದೆಯೇ ಎಂದು ಯೋಚಿಸಬೇಕು. ಏಕೆಂದರೆ ಕೆಲವೊಮ್ಮೆ ಇಷ್ಟವಿಲ್ಲದಿದ್ದರೂ ಅನಿವಾರ್ಯ ಪರಿಸ್ಥಿತಿಯಿಂದ ಮಾಡಲೇ ಬೇಕಾಗುತ್ತದೆ. ಮೊದಲು ನಾವು ಮಾಡುವ ಕೆಲಸವನ್ನು ಪ್ರೀತಿಸಬೇಕು. ಇದರಿಂದ ಮಾಡುವ ಕೆಲಸದಲ್ಲಿ ಸ್ವಲ್ಪ ಆನಂದ ಸಿಕ್ಕಿದರೂ ಅದು ಸಾಕಷ್ಟು ಒತ್ತಡವನ್ನು ಕಡಿಮೆ ಮಾಡುತ್ತದೆ. ನಮಗೆಂದೇ ಒಂದಷ್ಟು ಸಮಯವನ್ನು ಕಾಯ್ದಿರಿಸಿಕೊಳೋಣ. ಆ ಸಂದರ್ಭದಲ್ಲಿ ಕೆಲಸದ ಬಗ್ಗೆ ಯೋಚಿಸೋಣ ಆಗ ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಲು ಏನಾದರೊಂದು ಪರಿಹಾರ ಸಿಕ್ಕೇ ಸಿಗುತ್ತದೆ.
ಕೆಲವು ಸಮಸ್ಯೆಗಳಿಗೆ ಗೆಳೆಯ ಗೆಳತಿಯರೊಂದಿಗೆ ಹೇಳಿಕೊಳ್ಳುವ ಮೂಲಕ ಅವರಿಂದಲೂ ಸಲಹೆ ಪಡೆಯಬಹುದು. ಚರ್ಚಿಸುವಾಗ, ಮಾತನಾಡುವಾಗ ತೀರಾ ಖಾಸಗಿ ವಿಚಾರಗಳು ನಮ್ಮ ಬಳಿಯೇ ಇರಲಿ. ಕೆಲವೊಮ್ಮೆ ಬೇರೆಯವರೊಂದಿಗೆ ಬೆರೆತು ಒಂದಷ್ಟು ಆನಂದವಾಗಿದ್ದರೆ ಮನಸ್ಸು ಉಲ್ಲಾಸದಿಂದ ಕೂಡಿ ಒತ್ತಡ ಕಡಿಮೆಯಾಗುತ್ತದೆ. ಮಾತನಾಡುವಾಗ ಎಚ್ಚರವಿರಬೇಕು ಮತ್ತೊಬ್ಬರ ಬಗ್ಗೆ ಏನೇನೋ ಮಾತನಾಡಿ ಮನನೋಯಿಸುವ ಅಥವಾ ವಿವಾದಕ್ಕೆ ಗುರಿಯಾಗದಂತೆ ನೋಡಿಕೊಳ್ಳುವ ಜಾಣ್ಮೆ ನಮ್ಮಲಿರಬೇಕು. ಎಲ್ಲರೊಂದಿಗೆ ಹೊಂದಿಕೊಂಡು ಬೆರೆಯುವ ಮನೋಭಾವ ಬೆಳೆಸಿಕೊಳ್ಳಬೇಕು. ಗಾಳಿ ಸುದ್ದಿಯನ್ನು ನಿಜವೆಂಬಂತೆ ಮಾತನಾಡುವುದನ್ನು ಬಿಟ್ಟು ಬಿಡಬೇಕು.
ನೆಮ್ಮದಿಯನ್ನು ನಾವೇ ಹುಡಕಿಕೊಳ್ಳಬೇಕು
ದುಡಿಮೆಯ ನಡುವೆಯೂ ಒಂದು ದಿನ ವಿಶ್ರಾಂತಿಗೆ ಮೀಸಲಿರಲಿ. ಮನಸ್ಸಿಗೆ ಸಂತೋಷ ನೀಡುವ ಇತರರಿಗೂ ಉಪಯೋಗವಾಗುವ ಹವ್ಯಾಸ ಬೆಳೆಸಿಕೊಳ್ಳೋಣ. ಸಾಹಿತ್ಯ, ಕ್ರೀಡೆ ಮೊದಲಾದವುಗಳತ್ತ ಆಸಕ್ತಿ ವಹಿಸೋಣ. ಕೆಲವು ಬಾರಿ ಮಲಗಿದರೂ ನಿದ್ದೆ ಬರಲ್ಲ. ನಿದ್ದೆಗೆ ಮುನ್ನ ಸ್ನಾನ ಮಾಡಿ ನಂತರ ಮಲಗಿದರೆ ಮೈಮನಸ್ಸು ಹಗುರವಾಗಿ ನಿದ್ದೆ ಬರುತ್ತದೆ. ಅವತ್ತಿನ ಕೆಲಸವನ್ನು ಅವತ್ತೆ ಮಾಡಿದರೆ ಒಳ್ಳೆಯದು. ಮುಂದೂಡಿದರೆ ಎಲ್ಲವನ್ನೂ ಒಟ್ಟಿಗೆ ಮುಗಿಸಬೇಕಾದ ಅನಿವಾರ್ಯತೆಯಿಂದ ಒತ್ತಡ ಹೆಚ್ಚಾಗುತ್ತದೆ. ಯಾವುದೇ ಕೆಲಸ ಮಾಡಬೇಕಾದರೂ ಅದಕ್ಕೊಂದು ಪೂರ್ವಭಾವಿ ಸಿದ್ಧತೆಯಿದ್ದು ಅವರಂತೆ ಮಾಡಿದರೆ ಒಳ್ಳೆಯಾಗುತ್ತದೆ. ಒಂದೇ ಕಡೆ ಕುಳಿತು ಟಿವಿ ನೋಡುವುದನ್ನು ಕಡಿಮೆ ಮಾಡಿ. ಬದಲಿಗೆ ಪುಸ್ತಕ, ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಂಡರೆ ಉತ್ತಮ.
ಮೋಜು ಮಸ್ತಿ, ಪಾರ್ಟಿಗಳಿಂದ ದೂರವಿದ್ದರೆ ಉತ್ತಮ. ಮದ್ಯ, ಧೂಮಪಾನ, ತಂಬಾಕು ಸೇವನೆಯಂತಹ ದುಶ್ಚಟಗಳು ತಕ್ಷಣಕ್ಕೆ ರಿಲ್ಯಾಕ್ಸ್ ನೀಡಿದರೂ ಅವುಗಳಿಂದ ದೂರವಿದ್ದು ಉತ್ತಮ ಆರೋಗ್ಯದತ್ತ ಗಮನಹರಿಸಬೇಕು. ಆಗ ಮಾತ್ರ ಆರೋಗ್ಯವಂತ ಬದುಕು ಕಂಡುಕೊಳ್ಳಲು ಸಾಧ್ಯ. ನೆನಪಿರಲಿ ನಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಬೇರೊಬ್ಬರ ಮೇಲೆ ಹೇರುವ ಯತ್ನ ಮಾಡುವುದು ಆರೋಗ್ಯಕಾರಿ ಅಲ್ಲ. ನಿಜ ಹೇಳಬೇಕೆಂದರೆ ನೆಮ್ಮದಿ ಬೇರೆಲ್ಲೂ ಇಲ್ಲದೆ ನಮ್ಮಲ್ಲೇ ಇರುವುದರಿಂದ ಅದನ್ನು ನಾವೇ ಕಂಡು ಕೊಳ್ಳಬೇಕಾಗಿದೆ.
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications