ದುರ್ಗಾ ಪೂಜೆಗೆ ನೀವು ಆಯ್ಕೆ ಮಾಡುವ ಸೀರೆ ಹೀಗಿರಲಿ: ಅದನ್ನು ತೊಡುವ ವಿಧಾನವನ್ನು ಹಂತ ಹಂತವಾಗಿ ತಿಳಿಯಿರಿ..!
ಸೀರೆ ಉಡುವುದು ಭಾರತೀಯ ಸಂಪ್ರದಾಯ. ಹಬ್ಬಗಳಲ್ಲಿ ಸೀರೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಬಹುತೇಕ ಎಲ್ಲಾ ಮಹಿಳೆಯರು ಹಬ್ಬ ಆಚರಣೆಗಳಲ್ಲಿ ಸೀರೆಯನ್ನು ತೊಟ್ಟು ಸಂಭ್ರಮಿಸುತ್ತಾರೆ. ಅಕ್ಟೋಬರ್ ತಿಂಗಳು ಬರುವ ಸಾಲು ಸಾಲು ಹಬ್ಬಗಳಲ್ಲಿ ದುರ್ಗಾದೇವಿ ಪೂಜೆಯೂ ಒಂದಾಗಿದ್ದು, ಈ ದಿನ ಸೀರೆಯನ್ನು ತೊಡುವುದು ಕೆಲ ಮಹಿಳೆಯರಿಗೆ ಸವಾಲಿನ ಕೆಲಸ.
ಯಾಕೆಂದರೆ ಈ ದಿನ ಯಾವ ಸೀರೆ ಮತ್ತು ಹೇಗೆ ಉಡಬೇಕು ಎನ್ನುವ ಆಲೋಚನೆಯಲ್ಲಿ ಬಹುತೇಕ ಮಹಿಳೆಯರು ಇರುತ್ತಾರೆ. ಪ್ರತಿ ಹಬ್ಬಗಳಲ್ಲಿ ಉಡುವಂತೆ ದುರ್ಗಾ ಪೂಜೆಯಲ್ಲಿ ಸೀರೆ ಉಡಲು ಮನಸ್ಸಾಗದೇ ಇರುವವರು ನಾವು ನೀಡುವ ಕೆಲ ಟಿಪ್ಸ್ ಅನ್ನು ಅನುಸರಿಸಬಹುದು. ಈ ಮೂಲಕ ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು.

ಐದು ದಿನಗಳ ಅವಧಿಯ ದುರ್ಗಾಪೂಜಾ ಹಬ್ಬವನ್ನು ಪಂಡಲ್ಗಳಿಗೆ ಭೇಟಿ ನೀಡುವ ಮೂಲಕ ಮಹಿಳೆಯರು ಆಚರಿಸುತ್ತಾರೆ. ಗಣೇಶನಂತೆ ದುರ್ಗಾದೇವಿಯ ಮೂರ್ತಿಯನ್ನಿಟ್ಟು ಈ ಸಮಯದಲ್ಲಿ ಪೂಜೆ ಮಾಡಲಾಗುತ್ತದೆ. ಈ ವೇಳೆ ಅನೇಕ ಕಾರ್ಯಕ್ರಮಗಳು ನಡೆಯುತ್ತವೆ. ವಿಶೇಷವಾಗಿ ಈ ಸಂದರ್ಭದಲ್ಲಿ ಮಹಿಳೆಯರು ಕೆಂಪು ಮತ್ತು ಬಿಳಿ ಬಣ್ಣ ಮಿಶ್ರಿತ ಸೀರೆಯನ್ನು ಧರಿಸುತ್ತಾರೆ. ಹಲವೆಡೆ ಈ ಬಣ್ಣದ ಸೀರೆ ಉಡುವ ಸಂಪ್ರದಾಯವಿದೆ. ಬೆಂಗಾಲಿ ಸಮುದಾಯದಲ್ಲಿ ಬಿಳಿ-ಕೆಂಪು ಬಣ್ಣದ ಸೀರೆಯನ್ನು ತೊಡುವುದು ವಿಶೇಷ. ಹಾಗಾದರೆ ಈ ಬೆಂಗಾಲಿ ಸೀರೆಯನ್ನು ಧರಿಸುವುದು ಹೇಗೆ ಅನ್ನೋದನ್ನು ಹಂತ ಹಂತವಾಗಿ ನೋಡೋಣ.
ಹಂತ 1 - ಸೀರೆ ಮತ್ತು ಆಭರಣಗಳ ಆಯ್ಕೆ
ನೀವು ಡ್ರೆಸ್ಸಿಂಗ್ ಪ್ರಾರಂಭಿಸುವ ಮೊದಲು ನಿಮ್ಮೊಂದಿಗೆ ಅಗತ್ಯವಿರುವ ಎಲ್ಲಾ ವಸ್ತುಗಳನ್ನು ಇರುವುದನ್ನು ಖಚಿತಪಡಿಸಿಕೊಳ್ಳಿ. ಇದು ಕೆಂಪು ಮತ್ತು ಬಿಳಿ ಕೋಲ್ಕತ್ತಾದ ಕಾಟನ್ ಸೀರೆ ಅಥವಾ ಲಾಲ್ ಪಾರ್ ಸೀರೆ ತೊಡಲು ನೀವು ಸಿದ್ಧತೆ ಮಾಡಿಕೊಳ್ಳಬೇಕು. ಇದಕ್ಕೆ ಮ್ಯಾಚಿಂಗ್ ಬ್ಲೌಸ್, ಸೇಫ್ಟಿ ಪಿನ್ಗಳು, ಸಾಂಪ್ರದಾಯಿಕ ಆಭರಣಗಳು ಮತ್ತು ಸೀರೆ ತೊಡುವುದನ್ನು ಪೂರ್ಣಗೊಳಿಸಲು ಬೇಕಾದ ಅಲಂಕಾರಿಕ ಪಿನ್ಗಳನ್ನು ಇಟ್ಟುಕೊಳ್ಳಿ.
ಹಂತ 2 - ಮ್ಯಾಚಿಂಗ್ ಬ್ಲೌಸ್
ಬೆಂಗಾಲಿ ನೋಟವನ್ನು ತೋರಿಸಲು ಮೊದಲ ಹೆಜ್ಜೆ ಮ್ಯಾಚಿಂಗ್ ಬ್ಲೌಸ್ ಅಥವಾ ಚೋಲಿ ಧರಿಸುವುದು. ಕೆಂಪು-ಬಿಳಿ ಬೆಂಗಾಲಿ ಸೀರೆಗೆ ಆಫ್ಬೀಟ್ ನೋಟವನ್ನು ಸೇರಿಸುವ ಕಾಂಟ್ರಾಸ್ಟ್ ಬ್ಲೌಸ್ ಅನ್ನು ನೀವು ಆರಿಸಿಕೊಳ್ಳಬಹುದು. ನೀವು ಬ್ಲೌಸ್ಗೆ ಸರಳವಾದ ಪ್ರಕಾರದ ನೋಟವನ್ನು ಬಯಸಿದರೆ ಬ್ಲೌಸ್ ಯಾವುದೇ ಡಿಸೈನ್ ಇಲ್ಲದೆಯೂ ತೊಡಬಹುದು. ಇನ್ನೂ ಸೀರೆ ಸರಳವಾಗಿದ್ದು ಬ್ಲೌಸ್ ಡಿಸೈನ್ ಇರಬೇಕು ಅಂತಾದರೆ ಬ್ಲೌಸ್ಗೆ ಲೇಸ್, ಕಸೂತಿ, ಮಿರರ್ ವರ್ಕ್ ಅಥವಾ ಗೋಟಾ ಪ್ಯಾಟಿ ವರ್ಕ್ನಂತಹ ಕೆಲ ವರ್ಕ್ ಮಾಡಿಸಬಹುದು.
ಹಂತ 3 - ಸೀರೆ ಉಡುವುದು
ಬ್ಲೌಸ್ ಹಾಕಿದ ನಂತರ ನೀವು ಬಂಗಾಳಿ ರೀತಿಯಲ್ಲಿ ಸೀರೆಯನ್ನು ಉಡುವುದು ಮುಖ್ಯ. ಸೊಂಟದ ಸುತ್ತಲೂ ಸೀರೆಯನ್ನು ಎರಡು ಬಾರಿ ಸುತ್ತಿಕೊಳ್ಳಿ. ಹೆಚ್ಚುವರಿ ಸೀರೆ ಉಳಿದರೆ ಅದನ್ನು ಸರಿಯಾಗಿ ಸಿಕ್ಕಿಸಿಕೊಳ್ಳಿ. ಸಾಮಾನ್ಯವಾಗಿ ಸೀರೆ ಉಡುವ ವಿಧಾನವನ್ನೇ ಅನುಸರಿಸಿ.
ಸೀರೆಯನ್ನು ಸರಿಯಾದ ರೀತಿಯಲ್ಲಿ ಧರಿಸಿರುವಿರಾ ಎಂದು ಪರೀಕ್ಷಿಸಲು ಕನ್ನಡಿಯ ಮುಂದೆ ಸೀರೆಯನ್ನು ಅಲಂಕರಿಸಿ.
ಹಂತ 4 - ಸೀರೆಯ ನೆರಿಗೆಗಳನ್ನು ಮಾಡಿ
ಸೀರೆ ಉಡುವುದರಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಚಾರ ಅಂದರೆ ನೆರಿಗೆಗಳನ್ನು ಸರಿಯಾಗಿ ಇರಿಸುವುದು. ನಿಮ್ಮ ದೇಹದ ಉದ್ದಕ್ಕೂ ಅಂದರೆ ಸೊಂಟದಿಂದ ನೆಲದವರೆಗೂ ನೆರಿಗೆಗಳು ಇರಬೇಕು. ಇದು ನೆಲಕ್ಕೆ ತಾಗುವಂತಿದ್ದರೆ ಇನ್ನೂ ಸುಂದರವಾಗಿ ಕಾಣಿಸುತ್ತದೆ. ಜೊತೆಗೆ ನೆರಿಗೆಯನ್ನು ಅಲಂಕೃತ ಪಿನ್ಗಳಿಂದ ಅಲಂಕರಿಸಿ. ಕ್ಲೀನ್ ಪ್ಲೀಟ್ಗಳನ್ನು ರಚಿಸುವುದು ಅಚ್ಚುಕಟ್ಟಾದ ನೋಟವನ್ನು ನೀಡುತ್ತದೆ. ಜೊತೆಗೆ ಇದು ಸರಿಯಾದ ಆಕಾರವನ್ನು ನೀಡುತ್ತದೆ.
ಹಂತ 5 - ಸೀರೆ ಪಲ್ಲು ಹಾಕಿಕೊಳ್ಳುವುದು
ಸೀರೆಯಲ್ಲಿ ನೆರಿಗೆಯೊಂದಿಗೆ ಪಲ್ಲು ಕೂಡ ತುಂಬಾ ಮುಖ್ಯ. ಇದು ಕೂಡ ಅಚ್ಚುಕ್ಕಟ್ಟಾಗಿ ಇರಬೇಕು. ನಿಮ್ಮ ಎಡ ಅಥವಾ ಬಲ ಭುಜದ ಮೇಲೆ ಪಲ್ಲು ಹಾಕಿಕೊಳ್ಳಬಹುದು. ಅದನ್ನು ಸುರಕ್ಷತಾ ಪಿನ್ನಿಂದ ಸುರಕ್ಷಿತಗೊಳಿಸಬೇಕು. ಸಾಮಾನ್ಯವಾಗಿ ಪಲ್ಲುವಿನ ಹಿಂಬದಿಯ ತುದಿಯನ್ನು ಮುಂಭಾಗಕ್ಕೆ ತೆಗೆದುಕೊಂಡು ಪಿನ್ ಮಾಡಿ. ಇದು ನೋಡಲು ಆಕರ್ಷಕವಾಗಿ ಕಾಣಿಸುತ್ತದೆ. ಜೊತೆಗೆ ಇದು ಬಂಗಾಳಿ ಸೀರೆಯ ಲುಕ್ ನೀಡುತ್ತದೆ.
ಹಂತ 6 - ಮೇಕಪ್ ಆಸಕ್ತಿಕರವಾಗಿರಲಿ
ಕೆನ್ನೆಯ ಮೇಲೆ ಹೊಳಪಿನ ಮೇಕ್ಅಪ್ ಈ ಸೀರೆಗೆ ಆಕರ್ಷಕವಾಗಿ ಕಾಣಿಸುತ್ತದೆ. ಐಲೈನರ್ನಿಂದ ಕಣ್ಣು ರೆಪ್ಪೆಗಳನ್ನು ಅಲಂಕರಿಸಿ. ಸೀರೆಯ ಕೆಂಪು ಬಣ್ಣಕ್ಕೆ ಪೂರಕವಾಗಿ ನಿಮ್ಮ ತುಟಿಗಳಿಗೆ ಗಾಢವಾದ ಕೆಂಪು, ಕಂದು ಬಣ್ಣದ ಲಿಪ್ಸ್ಟಿಕ್ ಹಚ್ಚಿ. ದೊಡ್ಡ ಕೆಂಪು ಬಿಂದಿಯನ್ನು ಹಚ್ಚಿ. ಕೂದಲನ್ನು ನಯವಾದ ಬನ್ನಲ್ಲಿ ಕಟ್ಟಿಕೊಳ್ಳಿ ಮತ್ತು ಅದನ್ನು ತಾಜಾ ಹೂವುಗಳಿಂದ ಅಲಂಕರಿಸಿ. ನಿಮ್ಮ ಆದ್ಯತೆಗೆ ಅನುಗುಣವಾಗಿ ನೀವು ಕೂದಲನ್ನು ನಯವಾದ ಪೋನಿಟೇಲ್ನಲ್ಲಿ ಕಟ್ಟಬಹುದು ಅಥವಾ ಅದನ್ನು ಫ್ರೀ ಆಗಿ ಕೂಡ ಬಿಡಬಹುದು.
ಹಂತ 7 - ಆಭರಣಗಳನ್ನು ತೊಡುವುದು
ನೀವು ಸೀರೆಯನ್ನು ಉಡುವುದನ್ನು ಪೂರ್ಣಗೊಳಿಸಿದ ನಂತರ, ಕೆಲವು ಆಕರ್ಷಕ ಆಭರಣ ಹಾಕಿಕೊಳ್ಳಬೇಕು. ಇದು ಬಂಗಾಳಿ ನೋಟವನ್ನು ಎದ್ದುಕಾಣಿಸುವಂತಿರಬೇಕು. ನೀವು ಚಿಕ್ಕದಾದ ಅಥವಾ ಉದ್ದವಾದ ನೆಕ್ಪೀಸ್, ಜುಮ್ಕಾ, ಬಳೆಗಳು ಮತ್ತು ಬೆರಳಿನ ಉಂಗುರವನ್ನು ಒಳಗೊಂಡಂತೆ ಸಾಂಪ್ರದಾಯಿಕ ಚಿನ್ನದ ಆಭರಣಗಳನ್ನು ಹಾಕಿಕೊಳ್ಳಲು ಆಯ್ಕೆ ಮಾಡಬಹುದು. ಇಲ್ಲವಾದಲ್ಲಿ ಬೋಹೊ-ಶೈಲಿಯ ದಪ್ಪನೆಯ ನೆಕ್ಲೇಸ್ಗಳು, ದೊಡ್ಡದಾದ ಕಿವಿಯೋಲೆಗಳು, ಉಂಗುರಗಳೊಂದಿಗೆ ಸೀರೆ ನೋಟವನ್ನು ಆಕರ್ಷಿಸಬಹುದು.
ಹೀಗೆ ದುರ್ಗಾ ಪೂಜೆಗೆ ನೀವು ಬಂಗಾಲಿ ಸಂಪ್ರದಾಯದ ಸೀರೆಯನ್ನುಟ್ಟು ಈ ಬಾರಿ ಹಬ್ಬ ಆಚರಿಸಬಹುದು. ಇದು ನೋಡಲು ತುಂಬಾ ಸುಂದರ ಹಾಗೂ ಆಕರ್ಷಕವಾಗಿ ಕಾಣಿಸುತ್ತದೆ. ನಿಮ್ಮ ಅಂದವನ್ನು ಹೆಚ್ಚಿಸುತ್ತದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications