Thili Saaru Recipe: ಸವಿದರೆ ಮತ್ತೆ..ಮತ್ತೆ ಸವಿಯಬೇಕೆನಿಸುವ ತಿಳಿ ಸಾರು ಕ್ಷಣದಲ್ಲೇ ತಯಾರಿಸಿ
ದಕ್ಷಿಣ ಭಾರತ ಜನರ ಮೆಚ್ಚಿನ ಆಹಾರಗಳಲ್ಲಿ ರಸಂ ಕೂಡ ಒಂದು. ಅದರಲ್ಲೂ ತಿಳಿ ಸಾರು ಅಂದರೆ ಬೇಳೆ ರಸಂ ಹೆಸರು ಕೇಳಿದರೆ ಸಾಕು ಎಂತವರ ಬಾಯಲ್ಲಾದರೂ ನೀರು ಬರುತ್ತದೆ. ಬಿಸಿ ಬಿಸಿಯಾದ, ಹುಳಿ,ಖಾರ ಸೇರಿದ ರುಚಿಯಾದ ರಸಂ ಸವಿಯುತ್ತಿದ್ದರೆ ತಿಂದವರಿಗೆ ಆ ಕ್ಷಣವೇ ಸ್ವರ್ಗದ ಅನುಭವವಾಗುತ್ತದೆ.
ತಿಳಿ ಸಾರು ತಯಾರಿಸಲು ಸುಲಭ ಹಾಗೂ ಸವಿಯಲು ರುಚಿ. ಹೀಗಾಗಿ ಅನೇಕ ಮನೆಯ ಪ್ರತಿ ನಿತ್ಯದ ಅಡುಗೆಯಲ್ಲಿ ತಿಳಿ ಸಾರು ಖಾಯಂ ಪದಾರ್ಥ. ಆದರೆ ತಿಂದಷ್ಟೂ ತಿಳಿ ಸಾರು ಬೇಸರವೆನಿಸುವುದಿಲ್ಲ. ಒಮ್ಮೊಮ್ಮೆ ಬಿಸಿಯಲ್ಲಿ ಹೊಗೆಯಾಡುವಾಗಲೇ ತಿಳಿ ಸಾರನ್ನು ಲೋಟಕ್ಕಿಳಿಸಿ ಸವಿದರೆ ವಾವ್ ಎನಿಸುತ್ತದೆ. ಇಂತಹ ತಿಳಿ ಸಾರು ಅಥವಾ ಬೇಳೆ ರಸಂ ತಯಾರಿಸುವ ಸುಲಭ ವಿಧಾನ ಇಲ್ಲಿದೆ.

ತಿಳಿ ಸಾರು ತಯಾರಿಸಲು ಬೇಕಾಗುವ ಸಾಮಾಗ್ರಿಗಳು
ಬೇಳೆ-1/2 ಕಪ್
ಅರಿಶಿನ ಪುಡಿ-ದೊಡ್ಡ ಚಿಟಿಕೆ
ಹುಣಸೆಹಣ್ಣು-ನಿಮ್ಮ ರುಚಿಗೆ ತಕ್ಕಂತೆ
ಬೆಲ್ಲ-ನಿಮ್ಮ ರುಚಿಗೆ ತಕ್ಕಂತೆ
ಉಪ್ಪು- ರುಚಿಗೆ ತಕ್ಕಂತೆ'
ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು- ಒಂದು ಚಮಚ
ಕೆಲವು ಕರಿಬೇವಿನ ಎಲೆಗಳು
ಅಡುಗೆ ಎಣ್ಣೆ-1 ಚಮಚ
ನೀರು- 4-5 ಕಪ್
ತಿಳಿ ಸಾರು ಪುಡಿಗೆ ಬೇಕಾಗುವ ಸಾಮಾಗ್ರಿಗಳು
ಕೆಂಪು ಮೆಣಸಿನಕಾಯಿ-5-6
ಕೊತ್ತಂಬರಿ-2 ಚಮಚ
ಜೀರಿಗೆ-1/2 ಚಮಚ
ಸಾಸಿವೆ-1/4 ಚಮಚ
ಮೆಂತ್ಯ-10-12 ಬೀಜಗಳು
ಅಡುಗೆ ಎಣ್ಣೆ-1/2 ಚಮಚ

ತಿಳಿ ಸಾರು ಮಾಡುವ ವಿಧಾನ
ಮೊದಲು ಬೇಳೆಯನ್ನು ಚೆನ್ನಾಗಿ ತೊಳೆದು ಒಂದು ಕಪ್ ನೀರು, ಅರಿಶಿನ ಮತ್ತು ಕೆಲವು ಹನಿ ಎಣ್ಣೆಯನ್ನು ಸೇರಿಸಿ ಬೇಯಿಸಿಕೊಳ್ಳಿ. ಬಳಿಕ ಬೆಂದ ಬೇಳೆಯನ್ನು ಮ್ಯಾಶ್ ಮಾಡಿಕೊಂಡು ಮತ್ತೆ ನೀರು ಸೇರಿಸಿ ಕುದಿಸಿ. ಮತ್ತೊಂದು ಕಡೆಯಲ್ಲಿ ಪ್ಯಾನ್ ಅನ್ನು ಬಿಸಿ ಮಾಡಿ ಕೆಂಪು ಮೆಣಸಿನಕಾಯಿಗಳು, ಕೊತ್ತಂಬರಿ ಕಾಳುಗಳು, ಜೀರಿಗೆ, ಸಾಸಿವೆ, ಮೆಂತ್ಯ ಕಾಳುಗಳು ಮತ್ತು 1/2 ಟೀಸ್ಪೂನ್ ಎಣ್ಣೆಯನ್ನು ಸೇರಿಸಿ ಹುರಿದುಕೊಳ್ಳಿ. ತಣ್ಣಗಾಗುವವರೆಗೆ ಕಾದು ಈ ಮಿಶ್ರಣವನ್ನು ನುಣ್ಣಗೆ ಪುಡಿ ಮಾಡಿ.ಇತ್ತ ಬೇಳೆ ಮಿಶ್ರಣಕ್ಕೆ ಬೆಲ್ಲ, ಹುಣಸೆಹಣ್ಣು ಹಾಗೂ ಅಗತ್ಯವಿದ್ದರೆ ನೀರು ಸೇರಿಸಿ ಚೆನ್ನಾಗಿ ಕುದಿಸಿಕೊಳ್ಳಿ. ಬಳಿಕ ಸಿದ್ಧಪಡಿಸಿದ ಮಸಾಲೆ ಪುಡಿಯನ್ನು ಸೇರಿಸಿ ಕುದಿಸಿ ಒಗ್ಗರಣೆ ನೀಡಿದರೆ ರುಚಿರುಚಿಯಾದ ತಿಳಿಸಾರು ಸವಿಯಲು ಸಿದ್ಧ.
-
ಸರ್ಕಾರಿ ಆಸ್ಪತ್ರೆಗಳಲ್ಲಿ ನಾಳೆ OPD ಸೇವೆ ಬಂದ್? ವೈದ್ಯರ ರಾಜ್ಯವ್ಯಾಪಿ ಪ್ರತಿಭಟನೆ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ












Click it and Unblock the Notifications