Lotus Seeds Recipe: ಸುಲಭವಾಗಿ, ಆರೋಗ್ಯಕರ ಕಮಲದ ಬೀಜಗಳ ಪಾಯಸ ಮಾಡುವುದು ಹೇಗೆ?
ಕಮಲದ ಬೀಜ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ನಮ್ಮ ದೇಹಕ್ಕೆ ಬೇಕಾದ ರೋಗ ನಿರೋಧಕ ಶಕ್ತಿಯನ್ನು ನೀಡುವಲ್ಲಿ ಹೆಚ್ಚಿನ ಪಾತ್ರ ವಹಿಸುತ್ತದೆ. ಇತ್ತೀಚೆಗೆ ಕಮಲದ ಬೀಜಗಳ ಸ್ನ್ಯಾಕ್ಸ್ ಎಲ್ಲಾ ಕಡೆ ಸಿಗುತ್ತದೆ. ಮಖಾನ ಬೀಜಗಳನ್ನು ಆರೋಗ್ಯದ ದೃಷ್ಠಿಯಿಂದ ಹೆಚ್ಚು ಜನರು ಬಳಸುವುದನ್ನು ಅಳವಡಿಸಿಕೊಂಡಿದ್ದಾರೆ.
ಈ ಬರಹದಲ್ಲಿ ಕಮಲದ ಬೀಜದ ಪಾಯಸ (ಮಖಾನ ಖೀರ್) ಮಾಡುವುದು ಹೇಗೆ ಎಂಬುದನ್ನು ಹಂತ ಹಂತವಾಗಿ ವಿವರಿಸಲಾಗಿದೆ. ಈ ಸಿಹಿ ತಿಂಡಿಯನ್ನು ಕಮಲದ ಬೀಜಗಳು, ಹಾಲು ಮತ್ತು ಸಕ್ಕರೆಯನ್ನು ಬಳಸಿ ತಯಾರಿಸಲಾಗುತ್ತದೆ. ಮಖಾನಾ ಖೀರು ತುಂಬಾ ಟೇಸ್ಟಿ, ಆರೋಗ್ಯಕರ ಮತ್ತು ತಯಾರಿಸಲು ಕೂಡ ತುಂಬಾ ಸುಲಭ.

ಕಮಲದ ಬೀಜಗಳು ರೋಗ ನಿರೋಧಕ ಗುಣಗಳನ್ನು ಹೊಂದಿದೆ. ಇದು ದೇಹವನ್ನು ಅನೇಕ ರೋಗಗಳಿಂದ ಸುರಕ್ಷಿತವಾಗಿರಿಸುವಲ್ಲಿ ಬಹಳ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ನೋವನ್ನು ನಿವಾರಿಸಲು, ತೂಕವನ್ನು ನಿರ್ವಹಿಸಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯಕವಾಗಿವೆ.
ಮಖಾನ ಖಿನ್ನತೆ ಮತ್ತು ಆತಂಕವನ್ನು ಕಡಿಮೆ ಮಾಡಲು ಅವುಗಳನ್ನು ಬಳಸಬಹುದು. ಲೋಟಸ್ ಬೀಜಗಳನ್ನು ಸೂಕ್ಷ್ಮಜೀವಿಯ ಸೋಂಕುಗಳು, ಕ್ಯಾನ್ಸರ್ ಕಾಯಿಲೆಗಳ ಚಿಕಿತ್ಸೆಯಲ್ಲಿಯೂ ಬಳಸಬಹುದು. ಹೆಚ್ಚುವರಿಯಾಗಿ, ಲಿವರ್ ಮತ್ತು ಹೃದಯವನ್ನು ರಕ್ಷಿಸಲು ಕಮಲದ ಬೀಜಗಳನ್ನು ಬಳಸಲಾಗುತ್ತದೆ. ಆರೋಗ್ಯದ ಕಣಜವಾಗಿರುವ ಈ ಕಮಲದ ಬೀಜಗಳನ್ನು ಬಳಸಿ ಪಾಯಸ ತಯಾರಿಸಲಾಗುತ್ತದೆ. ಕೇವಲ 3 ಮುಖ್ಯ ಪದಾರ್ಥಗಳನ್ನು ಬಳಸಿ ಇದನ್ನು ಸುಲಭವಾಗಿ ತಯಾರಿಸಬಹುದು.

ಮಖಾನ ಖೀರ್ ಮಾಡಲು ಬೇಕಾದ ಪದಾರ್ಥಗಳು
1. 1 ಕಪ್ ಕಮಲದ ಬೀಜ ಅಥವಾ ಮಖಾನ ಬೀಜಗಳು
2. 2 ಕಪ್ ಅಥವಾ ಅರ್ಧ ಲೀಟರ್ ಹಾಲು
3. ನಿಮ್ಮ ಸಿಹಿಗೆ ತಕ್ಕಂತೆ ಸಕ್ಕರೆ
4. ಒಂದು ಅಥವಾ ಎರಡು ಟೇಬಲ್ ಸ್ಪೂನ್ ತುಪ್ಪ
5. ಐದರಿಂದ ಆರು ಗೋಡಂಬಿ
6. ಸ್ವಲ್ಪ ಒಣದ್ರಾಕ್ಷಿ
7. ಬೇಕಿದ್ದರೆ ಕೇಸರಿಯ ಕೆಲವು ಎಳೆಗಳು
8. ಸುವಾಸನೆಗೆ ಏಲಕ್ಕಿ
ಮಖಾನ ಖೀರ್ ತಯಾರಿಸುವ ವಿಧಾನ
ಮಖಾನ್ ಖೀರ್ ತಯಾರಿಸಲು, ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಗೋಡಂಬಿ ಮತ್ತು ಒಣದ್ರಾಕ್ಷಿಗಳನ್ನು ಫ್ರೈ ಮಾಡಿ. ಅವನ್ನು ತೆಗೆದ ನಂತರ ಅದೇ ಬಾಣಲೆಯಲ್ಲಿ ಕಮಲದ ಬೀಜಗಳನ್ನು ಮಧ್ಯಮ ಉರಿಯಲ್ಲಿ ಗರಿಗರಿಯಾಗುವವರೆಗೆ ಹುರಿಯಿರಿ. ಹುರಿದ ಕಮಲದ ಬೀಜಗಳನ್ನು ಅರ್ಧ ಪುಡಿಮಾಡಿ, ಉಳಿದವುಗಳಲ್ಲಿ ಕಾಲ ಭಾಗವನ್ನು ಪಕ್ಕಕ್ಕೆ ಇರಿಸಿ. ಮುಂದೆ ಒಂದು ಪಾತ್ರೆಯಲ್ಲಿ ಹಾಲನ್ನು ಕುದಿಸಿ.
ಹಾಲು ಉಕ್ಕು ಬಂದ ಬಳಿಕ ಹುರಿದ ಕಮಲದ ಬೀಜಗಳನ್ನು ಸೇರಿಸಿ ಮತ್ತು ಕುದಿಸುವುದನ್ನು ಮುಂದುವರಿಸಿ. ಇದಕ್ಕೆ ಸಕ್ಕರೆ ಸೇರಿಸಿ. ಪುಡಿ ಮಾಡಿದ ಕಮಲದ ಬೀಜಗಳನ್ನು ಸೇರಿಸಿ, ಮಿಶ್ರಣವನ್ನು ಮಾಡಿ, ಕೇಸರಿ ದಳಗಳನ್ನು ಸೇರಿಸಿ ಕುದಿಸಲು ಆರಂಭಿಸಿ. ಬಳಿಕ ಇದಕ್ಕೆ ಹುರಿದ ಗೋಡಂಬಿ ಮತ್ತು ಒಣದ್ರಾಕ್ಷಿ ಸೇರಿಸಿ. ಕೊನೆಯಲ್ಲಿ ಏಲಕ್ಕಿ ಪುಡಿಯನ್ನು ಸೇರಿಸಿ. ಸ್ಟವ್ ಆಫ್ ಮಾಡಿ. ಈಗ ಕಮಲದ ಬೀಜದ ಪಾಯಸ ಸವಿಯಲು ಸಿದ್ಧ.
-
ನಿಮ್ಮ ಮನೆ ದಿಕ್ಕು ಸರಿಯೇ? ರಾಶಿ ಪ್ರಕಾರ ವಾಸ್ತು ಸೂಚನೆಗಳು ಇಲ್ಲಿವೆ -
Buttermilk Summer Benefits: ಪ್ರತಿದಿನ ಮಜ್ಜಿಗೆ ಕುಡಿಯುವವರು ತಪ್ಪದೇ ತಿಳಿದುಕೊಳ್ಳಬೇಕಾದ ವಿಷಯಗಳು -
ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಕರಿದ ತಿಂಡಿ, ಟೀ-ಕಾಫಿ ಬ್ಯಾನ್: ಸಿರಿಧಾನ್ಯಗಳಿಗೆ ಆದ್ಯತೆ ನೀಡುವಂತೆ ಆರೋಗ್ಯ ಇಲಾಖೆ ಸೂಚನೆ -
Summer Heat Alert: ಮಕ್ಕಳ ಆರೋಗ್ಯ ಕಾಪಾಡಲು ಪೋಷಕರಿಗೆ 7 ಮುಖ್ಯ ಸಲಹೆಗಳು -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್












Click it and Unblock the Notifications