Ragi vegetable dosa recipe: ಆರೋಗ್ಯಕರ ಮತ್ತು ರುಚಿಕರ ರಾಗಿ ತರಕಾರಿ ದೋಸೆ ಮಾಡುವುದು ಹೇಗೆ?
ಆರೋಗ್ಯಕರ ಧಾನ್ಯಗಳ ಸಾಲಿನಲ್ಲಿ ರಾಗಿಗೆ ಮೊದಲ ಪ್ರಾಮುಕ್ಯತೆಯಿದೆ. ರಾಗಿ ಮುದ್ದೆ, ರಾಗಿ ದೋಸೆ, ರಾಗಿ ಚಪಾತಿ, ರಾಗಿ ಉಪ್ಪಿಟ್ಟು, ರಾಗಿ ಹಾಲುಬಾಲಿ ಸೇರಿದಂತೆ ಹಲವು ರೀತಿಯಲ್ಲಿ ಅದನ್ನು ಬಳಸಲಾಗುತ್ತದೆ. ರಾಗಿ ಜೊತೆಗೆ ತರಕಾರಿ ಸೇರಿದರೆ ರುಚಿ ಮತ್ತು ಆರೋಗ್ಯದ ಪ್ರಯೋಜನಗಳು ಮತ್ತಷ್ಟು ಹೆಚ್ಚಲಿವೆ.
ಹೀಗಾಗಿಯೇ ಇಂದು ಸುಲಭವಾಗಿ ಆರೋಗ್ಯಕರ ರಾಗಿ ತರಕಾರಿ ದೋಸೆ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಿಕೊಡಲಿದ್ದೇವೆ. ರಾಗಿ ಹಿಟ್ಟು, ಗೋಧಿ ಹಿಟ್ಟು, ರವೆ, ತರಕಾರಿಗಳು, ಜೀರಿಗೆ ಮತ್ತು ಉಪ್ಪು ಸೇರಿಸಿ ಕೆಲವೇ ಪದಾರ್ಥಗಳನ್ನು ಬಳಸಿ ತಯಾರಿಸಲಾದ ರಾಗಿ ದೋಸೆ ಚಟ್ ಪಟ್ ಎಂದು ತಯಾರಾಗಲಿದೆ. ದೋಸೆಗೆ ಹಿಟ್ಟು ನೆನೆಸದೆ, ರುಬ್ಬದೆ ರಾಗಿ ದೋಸೆ ಆರಾಮಾವಾಗಿ ಮಾಡುವ ರೆಸಿಪಿಯಾಗಿದೆ.

ರಾಗಿ ತರಕಾರಿ ದೋಸೆ ಮಾಡಲು ಬೇಕಾಗುವ ಪದಾರ್ಥಗಳು
1. 1 ಕಪ್ ರಾಗಿ ಹಿಟ್ಟು
2. 2 ಟೀಸ್ಪೂನ್ ಗೋಧಿ ಹಿಟ್ಟು
3. 2 ಚಮಚ ರವೆ
4. ಚಿಕ್ಕ ಗಾತ್ರದ ಶುಂಠಿ
5. ಸ್ವಲ್ಪ ಕರಿಬೇವಿನ ಎಲೆಗಳು
6. 2 ಚಮಚ ಮೆಂತ್ಯೆ ಸೊಪ್ಪು
7. 2 ಚಮಚ ಕೊತ್ತಂಬರಿ ಸೊಪ್ಪು
8. 1 ಮಧ್ಯಮ ಗಾತ್ರದ ಈರುಳ್ಳಿ
9. 1/2 ಕ್ಯಾಪ್ಸಿಕಂ
10. 1/2 ಕ್ಯಾರೆಟ್
11. 1/2 ಟೀಸ್ಪೂನ್ ಜೀರಿಗೆ ಬೀಜಗಳು
12. ನಿಮ್ಮ ರುಚಿಗೆ ತಕ್ಕಂತೆ ಉಪ್ಪು

ರಾಗಿ ತರಕಾರಿ ದೋಸೆ ಮಾಡುವ ವಿಧಾನ
ರಾಗಿ ಹಿಟ್ಟು, ಗೋಧಿ ಹಿಟ್ಟು ಮತ್ತು ರವೆ ತೆಗೆದುಕೊಳ್ಳಿ. ಕತ್ತರಿಸಿದ ಶುಂಠಿ, ಕರಿಬೇವಿನ ಸೊಪ್ಪು, ಮೆಂತ್ಯೆ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. ನಿಮ್ಮ ಆಯ್ಕೆಯ ಯಾವುದೇ ಸೊಪ್ಪನ್ನು ನೀವು ಬಳಸಬಹುದು. ಈ ಮಿಶ್ರಣಕ್ಕೆ ಕತ್ತರಿಸಿದ ಈರುಳ್ಳಿ, ಕ್ಯಾಪ್ಸಿಕಂ ಮತ್ತು ತುರಿದ ಕ್ಯಾರೆಟ್ ಸೇರಿಸಿ. ಇಲ್ಲಿಯೂ ನಿಮ್ಮ ಆಯ್ಕೆಯ ಯಾವುದೇ ತರಕಾರಿಗಳನ್ನು ನೀವು ಸೇರಿಸಬಹುದು.
ಇದಕ್ಕೆ 2 ಕಪ್ ನೀರು ಸೇರಿಸಿ ಗಂಟಿಲ್ಲದಂತೆ ಮಿಶ್ರಣ ತಯಾರಿಸಿ. ಸ್ವಲ್ಪ ಜೀರಿಗೆ ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. ಪ್ಯಾನ್ ಅನ್ನು ಬಿಸಿ ಮಾಡಿ, ತೆಳುವಾದ ದೋಸೆಗಳನ್ನು ಮಾಡಲು ಹಿಟ್ಟನ್ನು ಸುರಿಯಿರಿ. ಮುಚ್ಚಳವನ್ನು ಮುಚ್ಚಿ ಮತ್ತು ಕೆಲವು ಸೆಕೆಂಡುಗಳ ಕಾಲ ಬೇಯಿಸಿ. ಬಳಿಕ ದೋಸೆ ಮೇಲೆ ತುಪ್ಪ ಅಥವಾ ಎಣ್ಣೆ ಸವರಿ. ಮಧ್ಯಮ ಉರಿಯಲ್ಲಿ ಸ್ವಲ್ಪ ಸಮಯ ಬೇಯಿಸಿದರೆ ಬಿಸಿ ಬಿಸಿ ರಾಗಿ ತರಕಾರಿ ದೋಸೆ ಸವಿಯಲು ಸಿದ್ಧ. ಇದನ್ನು ತೆಂಗಿನಕಾಯಿ ಚಟ್ನಿ ಅಥವಾ ಹಾಗೆಯೇ ತಿನ್ನಬಹುದು.
-
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
Vastu Tips for Kitchen: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಇವು ಇರಬಾರದು.. ಒಮ್ಮೆ ನೋಡಿ! -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ












Click it and Unblock the Notifications