Harive Soppina Chutney Recipe: ಹರಿವೆ ಸೊಪ್ಪಿನ ಸಾಂಬಾರ್ ತಿಂದು ಬೇಜಾರ್ ಆಗಿದ್ರೆ ಒಮ್ಮೆ ಚಟ್ನಿ ಟ್ರೈ ಮಾಡಿ
ಪೋಷಕಾಂಶಗಳ ಖನಿಜವಾಗಿರುವ ಸೋಪ್ಪು ಎಲ್ಲರಿಗೂ ಇಷ್ಟವಾಗುತ್ತದೆ. ದೇಹಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳನ್ನು ನೀಡುವ ಸೊಪ್ಪನ್ನು ಹಲವು ವಿಧಗಳಲ್ಲಿ ಬಳಸಬಹುದು. ದಿನ ಸೋಪ್ಪನ್ನು ಒಂದಲ್ಲ ಒಂದು ರೀತಿಯಲ್ಲಿ ಆಹಾರದಲ್ಲಿ ಬಳಸಿದರೇ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸೋಪನ್ನು ಸಾಂಬಾರ್, ಪಲ್ಯ ಆಗಿ ಹೆಚ್ಚು ಬಳಕೆ ಮಾಡಲಾಗುತ್ತದೆ.
ಹರಿವೆ ಸೊಪ್ಪಿನ ಸಾಂಬಾರ್, ಪಲ್ಯ ತಿಂದು ಬೇಜಾರ್ ಆಗಿದ್ದರೆ ಒಮ್ಮೆ ಈ ಚಟ್ನಿ ಟ್ರೈ ಮಾಡಿ ನೋಡಿ. ಈ ಲೇಖನದಲ್ಲಿ ಚಟ್ನಿ ಅಥವಾ ಹರಿವೆ ಸೊಪ್ಪಿನ ಬಜ್ಜಿಯನ್ನು ಮಾಡುವ ವಿಧಾನವನ್ನು ವಿವರಿಸಲಾಗಿದೆ. ಈ ರುಚಿಕರವಾದ ಹರಿವೆ ಸೊಪ್ಪಿನ ಚಟ್ನಿ ಮಾಡುವುದು ತುಂಬಾ ಸುಲಭ ಮತ್ತು ಕೆಲವೆ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಸೊಪ್ಪು, ಸಾಸಿವೆ, ಕೆಂಪು ಮೆಣಸಿನಕಾಯಿ, ಹುಣಸೆಹಣ್ಣು, ಬೆಲ್ಲ, ಉಪ್ಪು ಬಳಸಿ ತಯಾರಿಸಲಾಗುತ್ತದೆ. ಇದನ್ನು ಅನ್ನ, ರೊಟ್ಟಿ, ದೋಸೆ ಅಥವಾ ಚಪಾತಿಯೊಂದಿಗೆ ಬಡಿಸಬಹುದು.

ಹರಿವೆ ಸೊಪ್ಪಿನ ಚಟ್ನಿ ಮಾಡಲು ಬೇಕಾದ ಪದಾರ್ಥಗಳು
* 1 ಕಟ್ಟು ಹರಿವೆ ಸೊಪ್ಪು
* ಅರ್ಧ ಟೀಸ್ಪೂನ್ ಸಾಸಿವೆ ಕಾಳುಗಳು
* 2 ಅಥವಾ 4 ಕೆಂಪು ಮೆಣಸಿನಕಾಯಿಗಳು
* ಕಾಲು ಕಪ್ ತುರಿದ ತೆಂಗಿನಕಾಯಿ
* ಸಣ್ಣ ನಿಂಬೆಹಣ್ಣು ಗಾತ್ರದ ಹುಣಸೆಹಣ್ಣು
* ಒಂದು ಚಮಚ ಬೆಲ್ಲ
* ಒಂದು ಚಮಚ ಅಡುಗೆ ಎಣ್ಣೆ
* ರುಚಿಗೆ ತಕ್ಕಂತೆ ಉಪ್ಪು

ಒಗ್ಗರಣೆಗೆ ಬೇಕಾದ ಪದಾರ್ಥಗಳು:
* 2 ಚಮಚ ಎಣ್ಣೆ ಅಥವಾ ತುಪ್ಪ
* ಅರ್ಧ ಟೀಸ್ಪೂನ್ ಸಾಸಿವೆ ಕಾಳುಗಳು
* ಅರ್ಧ ಚಮಚ ಜೀರಿಗೆ
* ಚಿಟಿಕೆ ಅರಿಶಿನ
* ಚಿಟಿಕೆ ಇಂಗು
ಹರಿವೆ ಸೊಪ್ಪಿನ ಚಟ್ನಿ ಮಾಡುವ ವಿಧಾನಗಳು
ಹರಿವೆ ಸೊಪ್ಪುನ್ನು ಸ್ವಚ್ಛಗೊಳಿಸಿ ಮತ್ತು ಸಣ್ಣದಾಗಿ ಕತ್ತರಿಸಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಸಾಸಿವೆ ಮತ್ತು ಕೆಂಪು ಮೆಣಸಿನಕಾಯಿಯನ್ನು ಫ್ರೈ ಮಾಡಿ. ಕತ್ತರಿಸಿದ ಎಲೆಗಳನ್ನು ಸೇರಿಸಿ ಮತ್ತು ಮಧ್ಯಮ ಉರಿಯಲ್ಲಿ ಫ್ರೈ ಮಾಡಿ, ಉಪ್ಪು ಸೇರಿಸಿ ಮತ್ತು ಮೃದುವಾಗುವವರೆಗೆ ಬಾಡಿಸಿಕೊಳ್ಳಿ.
ಬಳಿಕ ಮಿಶ್ರಣವನ್ನು ಮಿಕ್ಸಿ ಜಾರ್ಗೆ ಹಾಕಿ, ತೆಂಗಿನಕಾಯಿಗೆ ಸೇರಿಸಿ. ಜೊತೆಗೆ ಬೆಲ್ಲ ಮತ್ತು ಹುಣಸೆಹಣ್ಣು ಹಾಕಿಕೊಳ್ಳಿ ರುಬ್ಬಲು ಬೇಕಾದಷ್ಟು ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಿ. ಬಳಿಕ ಎಣ್ಣೆ ಅಥವಾ ತುಪ್ಪ, ಸಾಸಿವೆ ಮತ್ತು ಜೀರಿಗೆ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಅರಿಶಿನ ಮತ್ತು ಇಂಗು ಸೇರಿಸಿ. ರುಬ್ಬಿದ ಪೇಸ್ಟ್ ಮತ್ತು ಅಗತ್ಯವಿರುವ ನೀರನ್ನು ಹಾಕಿ ಮಿಕ್ಸ್ ಮಾಡಿ. ಬಳಿಕ ಸ್ಟವ್ ಅಫ್ ಮಾಡಿ. ಇದನ್ನು ಅನ್ನ, ದೋಸೆ, ಚಪಾತಿಯಿಂದಿಗೆ ಬಡಿಸಿ.
-
ಬೇಸಿಗೆಯ ಸಂಜೀವಿನಿ ಈ ನಿಂಬೆ ಹಣ್ಣು: ಆರೋಗ್ಯದ ದೃಷ್ಟಿಯಿಂದ ಪ್ರಯೋಜನಗಳು ಅಪಾರ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ












Click it and Unblock the Notifications