ಪ್ರತಿವಾರ ಖರೀದಿ ಬೇಡ: ಮನೆಯಲ್ಲೇ ತಾಜಾ ಕೊತ್ತಂಬರಿ ಬೆಳೆಸುವ ಸುಲಭ ವಿಧಾನ ಇಲ್ಲಿದೆ
ಅಡುಗೆಯ ಅವಿಭಾಜ್ಯವಾದ ಕೊತ್ತಂಬರಿ ಈಗ ಮನೆಯಲ್ಲೇ ಸುಲಭವಾಗಿ ಬೆಳೆಸಬಹುದಾದ ಸಸ್ಯವಾಗಿ ಗಮನ ಸೆಳೆಯುತ್ತಿದೆ. ಲೂಧಿಯಾನಾದ ತೋಟಗಾರ್ತಿ ಮೋನಾ ಚೋಪ್ರಾ ಅವರು ಮಾರುಕಟ್ಟೆಯಿಂದ ತಂದ ಕೊತ್ತಂಬರಿ ಕಡ್ಡಿಯ ಬೇರುಗಳನ್ನು ಬಳಸಿ ಹೊಸ ಬೆಳೆ ಬೆಳೆಯುವ ಸರಳ ವಿಧಾನವನ್ನು ಪರಿಚಯಿಸಿದ್ದಾರೆ. ಸಾಮಾನ್ಯವಾಗಿ ನಾವು ಕಸವೆಂದು ಚೆಲ್ಲುವ ಬೇರುಗಳಿಂದ ನಾವು ಹೊಸ ಬೆಳೆಯನ್ನು ಬೇಳೆಯಬಹುದು ಎಂದು ಅವರು ಹೇಳಿದ್ದಾರೆ.
ಮನೆಯಲ್ಲಿ ನಾವು ಮಾಡುವ ಅಡುಗೆ ಬೇಳೆ, ಅವಲಕ್ಕಿ, ಉಪ್ಪಿಟ್ಟು ಅಥವಾ ಚಟ್ನಿ ಯಾವುದಾದರೂ ಇರಲಿ, ಕೊತ್ತಂಬರಿ ಇಲ್ಲದೆ ರುಚಿ ಪೂರ್ಣ ಆಗುವುದಿಲ್ಲ. ಆದರೆ ಮೋನಾ ಅವರ ಮನೆಯಲ್ಲಿ ಈ ಕೊತ್ತಂಬರಿಯನ್ನು ಮತ್ತೆ ಮತ್ತೆ ಖರೀದಿಸುವ ಅಗತ್ಯವೇ ಇಲ್ಲ. ಏಕೆಂದರೆ ಅವರು ಈಗಾಗಲೇ ಇರುವ ಕೊತ್ತಂಬರಿ ಕಡ್ಡಿಗಳಿಂದಲೇ ಮತ್ತೆ ಬೆಳೆಯನ್ನು ಬೆಳೆಯುತ್ತಿದ್ದಾರೆ.

ಇಂತಹ ಸಮಯದಲ್ಲಿ ಮನೆಯಲ್ಲೇ ಯಾವುದೇ ಕೃತಕ ಗೊಬ್ಬರಗಳ ಬಳಕೆಯಿಲ್ಲದೆ, ತಾಜಾ ಮತ್ತು ಸಂಪೂರ್ಣ ರಾಸಾಯನಿಕ ಮುಕ್ತ ಕೊತ್ತಂಬರಿಯನ್ನು ಸುಲಭವಾಗಿ ಬೆಳೆಯುವುದು ಹೇಗೆ ಎಂಬ ಪ್ರಶ್ನೆ ಅನೇಕ ಗೃಹಿಣಿಯರಲ್ಲಿ ಮೂಡುವುದು ಸಹಜ. ಸಾಮಾನ್ಯವಾಗಿ ನಾವೆಲ್ಲರೂ ಮಾರುಕಟ್ಟೆಯಿಂದ ತಂದ ಕೊತ್ತಂಬರಿ ಸೊಪ್ಪನ್ನು ಬಳಸಿದ ನಂತರ ಅದರ ಬೇರು ಭಾಗವನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ, ಪಂಜಾಬಿನ ಲೂಧಿಯಾನಾದ ಗೃಹಿಣಿ ಮೋನಾ ಚೋಪ್ರಾ ಅವರು ಈ ತ್ಯಾಜ್ಯದಿಂದಲೇ ಅದ್ಭುತವಾಗಿ ಹೊಸ ಬೆಳೆಯನ್ನು ಬೆಳೆಯುವ ಸರಳ ವಿಧಾನವನ್ನು ಯಶಸ್ವಿಯಾಗಿ ಪರಿಚಯಿಸಿದ್ದಾರೆ.
ಸಣ್ಣ ಕುಂಡದಿಂದಲೇ ಬೆಳೆಯ ಸಾಧ್ಯತೆ
ಕೊತ್ತಂಬರಿ ಬೆಳೆಯಲು ದೊಡ್ಡ ಜಾಗದ ಅಗತ್ಯವಿಲ್ಲ. 15 ರಿಂದ 20 ಸೆಂ.ಮೀ ಆಳದ ಕುಂಡಲಿ ಇದ್ದರೆ ಸಾಕು ಎಂದು ಮೋನಾ ಸಲಹೆ ನೀಡುತ್ತಾರೆ. ಮಣ್ಣು ಸಡಿಲವಾಗಿದ್ದು, ಕಾಂಪೋಸ್ಟ್ ಅಥವಾ ವರ್ಮಿ ಕಾಂಪೋಸ್ಟ್ ಸೇರಿಸಿದರೆ ಬೆಳವಣಿಗೆ ಉತ್ತಮವಾಗುತ್ತದೆ. ನೀರು ನಿಲ್ಲದಂತೆ ಕುಂಡದಲ್ಲಿ ಒಂದು ಚಿಕ್ಕದಾದ ರಂಧ್ರದ ವ್ಯವಸ್ಥೆ ಇದ್ದರೆ ಸಾಕು ಎಂದು ಅವರು ಹೇಳುತ್ತಾರೆ.
ಬೀಜ ಹಾಗೂ ಬೇರು ಎರಡರಿಂದಲೂ ಬೆಳೆಯುವ ವಿಧಾನ
ಸಾಮಾನ್ಯವಾಗಿ ಕೊತ್ತಂಬರಿ ಬೀಜದಿಂದ ಬೆಳೆಯಬಹುದು. ಆದರೆ ಮೋನಾ ಅವರು ಬೇರುಗಳ ಮೂಲಕ ವೇಗವಾಗಿ ಬೆಳೆಯುವ ವಿಧಾನವನ್ನು ಹೆಚ್ಚು ಅಳವಡಿಸಿಕೊಂಡಿದ್ದಾರೆ. ಬೇರುಗಳನ್ನು ಮಣ್ಣಿನಲ್ಲಿ ನೆಟ್ಟರೆ 4 ರಿಂದ 5 ದಿನಗಳಲ್ಲೇ ಹೊಸ ಚಿಗುರುಗಳು ಕಾಣಿಸಿಕೊಳ್ಳುತ್ತವೆ ಎಂದು ಅವರು ತಿಳಿಸಿದ್ದಾರೆ.
ಸೂರ್ಯನ ಕಿರಣ ಮತ್ತು ನೀರಿನ ಸಮತೋಲನ ಮುಖ್ಯ
ಕೊತ್ತಂಬರಿಗೆ ದಿನಕ್ಕೆ 4 ರಿಂದ 6 ಗಂಟೆಗಳ ಸೂರ್ಯನ ಕಿರಣದ ಅಗತ್ಯವಿದೆ. ಆದರೆ ಅತಿಯಾದ ಬಿಸಿಲಿನಿಂದ ರಕ್ಷಿಸುವುದು ಸಹ ಮುಖ್ಯ. ನೀರು ಹೆಚ್ಚು ಹಾಕಿದರೆ ಬೇರುಗಳು ಹಾನಿಯಾಗಬಹುದು, ಆದ್ದರಿಂದ ಮಣ್ಣು ತೇವವಾಗಿರಬೇಕು ಆದರೆ ನೀರಿನಲ್ಲಿ ಮುಳುಗಬಾರದು ಎಂದು ತೋಟಗಾರ್ತಿ ಸಲಹೆ ನೀಡುತ್ತಾರೆ.
ನಿಯಮಿತ ಕೊಯ್ಲು ಆರೋಗ್ಯಕರ ಬೆಳೆಗೆ ಸಹಾಯಕ
ಎಲೆಗಳನ್ನು ನಿಯಮಿತವಾಗಿ ಕತ್ತರಿಸುವುದು ಹೊಸ ಚಿಗುರುಗಳು ಹೆಚ್ಚಾಗಿ ಬೆಳೆಯಲು ಸಹಾಯ ಮಾಡುತ್ತದೆ. ಸಂಪೂರ್ಣ ಸಸ್ಯವನ್ನು ಕಿತ್ತು ಹಾಕುವ ಬದಲು ಹೊರಗಿನ ಎಲೆಗಳನ್ನು ಮಾತ್ರ ಬಳಸುವುದು ಉತ್ತಮ ಎಂದು ಅವರು ಹೇಳುತ್ತಾರೆ.
ಮೋನಾ ಅವರ ಈ ಸರಳ ವಿಧಾನವು ಮನೆ ತೋಟಗಾರಿಕೆಯಲ್ಲಿ ಹೊಸ ಆಸಕ್ತಿ ಹುಟ್ಟಿಸುತ್ತಿದ್ದು, ಸಾಮಾನ್ಯವಾಗಿ ನಾವು ಕಸವೆಂದು ಎಸೆಯುವ ಬೇರುಗಳೇ ಹೊಸ ಬೆಳೆಯ ಮೂಲವಾಗಬಹುದು ಎಂಬ ಸಂದೇಶವನ್ನು ನೀಡುತ್ತಿದ್ದಾರೆ. ಕಡಿಮೆ ಜಾಗದಲ್ಲಿ, ಸರಿಯಾದ ಮಣ್ಣು ಮತ್ತು ಸ್ವಲ್ಪ ಕಾಳಜಿಯಿಂದ ಮನೆಯಲ್ಲೇ ತಾಜಾ ಕೊತ್ತಂಬರಿ ಬೆಳೆಯುವುದು ಈಗ ಎಲ್ಲರಿಗೂ ಸಾಧ್ಯವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ನಿರುಪಯುಕ್ತ ಕಸವೆಂದು ನಿರ್ಲಕ್ಷಿಸಿ ಬಿಸಾಡುವ ವಸ್ತುಗಳಿಂದಲೇ ಹೊಸದೊಂದು ಸೊಗಸಾದ ಕೃಷಿ ಸೃಷ್ಟಿ ಮಾಡಬಹುದು ಎಂಬ ಸರಳ ಜೀವನಪಾಠವನ್ನು ಈ ಬೇರು ಹಸಿರಿನ ತಂತ್ರ ನಮ್ಮೆಲ್ಲರಿಗೂ ತಿಳಿಸಿಕೊಡುತ್ತದೆ. ಸಣ್ಣ ಕುಂಡ, ಹಳೆಯ ಬೇರುಗಳು ಹಾಗೂ ಸರಿಯಾದ ಕಾಳಜಿ ಇದ್ದರೆ ಯಾರು ಬೇಕಾದರೂ ತಮ್ಮ ಮನೆಯಲ್ಲೇ ಹಸಿರು ಕ್ರಾಂತಿ ಮಾಡಬಹುದು. ಈ ವಿಶಿಷ್ಟ ಮನೆ ತೋಟಗಾರಿಕೆ ಪ್ರವೃತ್ತಿಯು ಇಂದಿನ ದಿನಗಳಲ್ಲಿ ಪ್ರತಿಯೊಂದು ಅಡುಗೆಮನೆಗೆ ಬೇಕಾದ ಉತ್ತಮ ಆರೋಗ್ಯ ಮತ್ತು ಪರಿಸರ ಕಾಳಜಿಗೆ ಸೂಕ್ತ ಪರಿಹಾರವಾಗಿದೆ.














Click it and Unblock the Notifications