ಮೊಡವೆಗಳ ಮೇಲೆ ಕೈಯ್ಯಾಡಿಸುವುದನ್ನು ಬಿಟ್ಟು ಬಿಡಿ: ಯಾಕೆ ಗೊತ್ತಾ..?
ಮೊಡವೆಗಳು ಮುಖಕ್ಕೆ ಆಗಾಗ್ಗೆ ಕಿರಿಕಿರಿ ಮಾಡುತ್ತಲೇ ಇರುತ್ತವೆ. ಅದರಲ್ಲೂ ಹರೆಯದಲ್ಲಿ ಇದರ ಹಾವಳಿಯಂತು ತುಸು ಹೆಚ್ಚಾಗಿರುತ್ತದೆ. ಹೀಗಾಗಿ ಮೊಡವೆಗಳ ಬಗ್ಗೆ ಅರಿತುಕೊಂಡು ಅದನ್ನು ಕೆರೆದು, ಚಿವುಟಿ ಮುಖದ ಅಂದವನ್ನು ಹಾಳು ಮಾಡಿಕೊಳ್ಳುವ ಬದಲು ಅದನ್ನು ಔಷಧೋಪಚಾರ ಮತ್ತು ಒಂದಷ್ಟು ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಮೊಡವೆಗಳ ಮೇಲೆ ಕೈಯ್ಯಾಡಿಸುವುದನ್ನು ಬಿಡುವುದು ಬಹುಮುಖ್ಯವಾಗಿದೆ.
ಬಹಳಷ್ಟು ಜನರು ಆಗಾಗ್ಗೆ ಮುಖದ ಮೇಲಿರುವ ಮೊಡವೆಗಳನ್ನು ಚಿವುಟುತಿರುತ್ತಾರೆ. ಇಲ್ಲವೆ ಉಗುರಿನಿಂದ ಕೆರೆಯುತ್ತಿರುತ್ತಾರೆ. ಒಟ್ಟಿನಲ್ಲಿ ಹೆಚ್ಚಿನವರ ಕೈ ಮೊಡವೆಗಳ ಮೇಲೆಯೇ ಇರುತ್ತದೆ. ಇದು ಒಳ್ಳೆಯ ಅಭ್ಯಾಸವಲ್ಲ. ಮೊಡವೆಗಳನ್ನು ಚಿವುಟದೆ ಅದರ ಪಾಡಿಗೆ ಬಿಡಬೇಕಾಗುತ್ತದೆ ಆದರೆ ಹೆಚ್ಚಿನವರು ಅದನ್ನು ಮುಟ್ಟುತ್ತಲೇ ಇರುತ್ತಾರೆ. ಹಾಗೆ ಮಾಡಿದರೆ ಅದು ಕೆಲವೊಮ್ಮೆ ಅಭ್ಯಾಸವಾಗಿ ಬಿಡುತ್ತದೆ. ಕೆಲಸವಿಲ್ಲದೆ ಬಿಡುವು ಇದ್ದಾಗಲೆಲ್ಲ ಅದರತ್ತಲೇ ನಮ್ಮ ಗಮನಹೋಗುತ್ತದೆ. ಇದನ್ನು ತಪ್ಪಿಸಬೇಕಾಗುತ್ತದೆ.

ಆಗಾಗ್ಗೆ ಮೊಡವೆಗಳನ್ನು ಉಗುರಿನಿಂದ ಕೆರೆಯುವುದು, ಚಿವುಟುವುದು, ಹಿಸುಕುವುದು ಹೀಗೆ ಮಾಡುವುದರಿಂದ ಅದು ಉಲ್ಭಣಗೊಂಡು ಕಲೆಯಾಗಿ ಮುಖದ ಮೇಲೆ ಉಳಿಯುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಮೊಡವೆಗಳ ಮೇಲೆ ಕೈಯ್ಯಾಡಿಸುವ ಅಭ್ಯಾಸವನ್ನು ತ್ಯಜಿಸಿದಷ್ಟು ಒಳ್ಳೆಯದು. ಸಾಮಾನ್ಯವಾಗಿ ಹದಿಹರೆಯದಲ್ಲಿ ಮೊಡವೆಗಳ ಹಾವಳಿ ಜಾಸ್ತಿ. ಈ ಮೊಡವೆಗಳು ಕೂಡ ಮನುಷ್ಯನ ದೇಹ ಮತ್ತು ಆತನಲ್ಲಿ ಉತ್ಪತ್ತಿಯಾಗುವ ಹಾರ್ಮೋನ್ ಹೀಗೆ ಎಲ್ಲವನ್ನು ಅವಲಂಭಿಸಿರುತ್ತದೆ. ಕೆಲವರಲ್ಲಿ ಚಿಕ್ಕದಾಗಿ ಹರಡಿಕೊಂಡಿದ್ದರೆ ಮತ್ತೆ ಕೆಲವರಲ್ಲಿ ಕುರುವಿನಂತೆ ದಪ್ಪದಾಗಿಯೂ ಮೂಡುತ್ತದೆ.
ಮೊಡವೆಗಳು ಮೂಡುವುದು ಏಕೆ?
ಹದಿಹರೆಯದವರ ಶರೀರದಲ್ಲಿ ಟೆಸ್ಪೊಸ್ಟಿರೋನ್ ಎಂಬ ಹಾರ್ಮೋನ್ ಹೆಚ್ಚಾಗಿ ಜಿಡ್ಡಿನಾಂಶವೂ ಉತ್ಪತ್ತಿಯಾಗುತ್ತದೆ. ಇದರಿಂದ ಚರ್ಮದ ಬ್ಯಾಕ್ಟೀರಿಯಾ ಹೆಚ್ಚಾಗಿ ಮುಖದ ಮೇಲೆ ಮೊಡವೆಗಳು ಮೂಡುತ್ತವೆ. ಇನ್ನು ಸತ್ತ ಚರ್ಮದ ಜೀವಕೋಶಗಳು ಕೂದಲಿನ ರಂಧ್ರವನ್ನು ಆವರಿಸಿ ಅಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗುವುದರಿಂದಲೂ ಮೊಡವೆಗಳು ಉದ್ಭವವಾಗಲು ಕಾರಣವಾಗುತ್ತವೆ. ಈ ಮೊಡವೆಗಳು ಕಪ್ಪು, ಬಿಳಿ ಶಿರ ಮತ್ತು ಕೆಂಪು ಕಲೆಗಳನ್ನು ಹೊಂದಿರುತ್ತವೆ. ಈ ಕಪ್ಪು ಮತ್ತು ಬಿಳಿಶಿರಗಳು ಮೂಡಲು ಕೂಡ ಕಾರಣವಿದೆ.
ಅದೇನೆಂದರೆ ಕೆಲವೊಮ್ಮೆ ಕೂದಲಿನ ಕೋಶಿಕಗಳು (ಫಾಲಿಕಲ್ಸ್) ಮುಚ್ಚಿಕೊಂಡು ಬಿಡುವುದರಿಂದಾಗಿ ದೇಹದ ಜಿಡ್ಡು ಚರ್ಮದ ಹೊರಮೈಗೆ ಬರಲಾಗದ ಕಾರಣದಿಂದಾಗಿ ಅಲ್ಲಿಯೇ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಆಗ ಕಪ್ಪು ಶಿರ ಮತ್ತು ಬಿಳಿಶಿರದ ಮೊಡವೆಗಳು ಹೊರಬರುತ್ತವೆ. ಇದನ್ನು ಮೈಕ್ರೋಕಡೆಮನ್ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಅಂದದ ಮುಖಕ್ಕೆ ಮೊಡವೆಗಳು ಕಪ್ಪು ಚುಕ್ಕೆಯಂತೆ ಕಾಣುತ್ತವೆ. ಇದರಿಂದ ಕೆಲವರು ಗಾಬರಿಗೊಳ್ಳುತ್ತಾರೆ.

ಮೊಡವೆಯನ್ನು ಅದರ ಪಾಡಿಗೆ ಬಿಟ್ಟುಬಿಡಿ
ಅಯ್ಯೋ ಹಾಳಾದ ಮೊಡವೆ ಬಂತಲ್ಲ ಎಂದು ಗೊಣಗುತ್ತಾರೆ. ತಮಗೆ ತೋಚಿದ ಕ್ರೀಮ್ ಗಳನ್ನೆಲ್ಲ ಬಳಸಿ ಅದು ಬರದಂತೆ ಮಾಡುವ ಪ್ರಯತ್ನ ಮಾಡುತ್ತಾರೆ. ಇಷ್ಟಕ್ಕೂ ಹದಿಹರೆಯದಲ್ಲಿ ಮೊಡವೆಗಳು ಬರುವುದು ಸಾಮಾನ್ಯ. ಅದಕ್ಕಾಗಿ ತಲೆಕೆಡಿಸಿಕೊಳ್ಳುವುದು ಬೇಕಾಗಿಲ್ಲ. ಆದರೆ ಮುಖದಲ್ಲಿ ಮೂಡಿದ ಮೊಡವೆಯನ್ನು ಚಿವುಟುವುದು, ಕೆರೆಯುವುದು ಹೀಗೆ ಮಾಡುವುದು ಒಳ್ಳೆಯದಲ್ಲ. ಅದನ್ನು ಅದರ ಪಾಡಿಗೆ ಬಿಟ್ಟು ಅದರ ತೀವ್ರತೆಯನ್ನು ನೋಡಿಕೊಂಡು ಚರ್ಮ ವೈದ್ಯರನ್ನು ಸಂಪರ್ಕಿಸಿ ಅವರ ಶಿಫಾರಸ್ಸಿನಂತೆ ಔಷಧೋಪಚಾರ ಮಾಡಬೇಕು.
ಕೆಲವೊಮ್ಮೆ ಸ್ವಚ್ಛತೆಯಿಲ್ಲದಾಗಲೂ ಮೊಡವೆಗಳು ಬರುವುದುಂಟು ಹೀಗಾಗಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮುಖವನ್ನು ಚೆನ್ನಾಗಿ ಆಗಾಗ್ಗೆ ತೊಳೆದು ಜಿಡ್ಡಿನಾಂಶ ಮುಖದಲ್ಲಿರದಂತೆ ನೋಡಿಕೊಳ್ಳಬೇಕು. ಕನಿಷ್ಟ ದಿನಕ್ಕೆ ಮೂರು ಬಾರಿಯಾದರೂ ಶುದ್ಧ ನೀರಿನಿಂದ ಮುಖವನ್ನು ತೊಳೆಯಬೇಕು. ಒಂದು ವೇಳೆ ವೈದ್ಯರಿಂದ ಔಷಧಿ ಪಡೆದಿದ್ದೇ ಆದರೆ ಅವರು ನೀಡಿದ ಸಲಹೆಗಳನ್ನು ತಪ್ಪದೆ ಅನುಸರಿಸಬೇಕು.
ಆಹಾರ ಕ್ರಮದಲ್ಲಿ ಎಚ್ಚರಿಕೆ ಇರಲಿ
ಈಗಾಗಲೇ ಆಧುನಿಕತೆ ತಂತ್ರಜ್ಞಾನಗಳು ಬಂದಿರುವುದರಿಂದ ಅವುಗಳನ್ನು ವಾಸಿಮಾಡುತ್ತಾರೆ. ಆಹಾರ ಸೇವನೆಗೂ ಮೊಡವೆಗಳು ಮೂಡುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಾರೆಯಾದರೂ ಕೊಬ್ಬಿನಾಂಶವಿರುವ ಪದಾರ್ಥ, ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಚಾಕೋಲೆಟ್ಗಳ ಅತಿಯಾದ ಸೇವನೆ ಒಳ್ಳೆಯದಲ್ಲ. ಇದು ಮೊಡವೆ ಮೂಡಲು ಸಹಾಯ ಮಾಡುತ್ತವೆ ಎನ್ನಲಾಗುತ್ತಿದೆ.
ಸಾಮಾನ್ಯವಾಗಿ ಎಲ್ಲರೂ ಹದಿಹರೆಯದಲ್ಲಿ ಮೊಡವೆಗಳ ಸಮಸ್ಯೆಯನ್ನು ಎದುರಿಸಿರುತ್ತಾರೆ. ಆದರೆ ಅದನ್ನೇ ಗಂಭೀರವಾಗಿ ಪರಿಗಣಿಸಿ ಹೌಹಾರಬೇಕಾಗಿಯೇನು ಇಲ್ಲ. ಅದು ಸೋಂಕು ರೋಗವಲ್ಲ. ಅದನ್ನು ಒಂದಷ್ಟು ಔಷಧಿ ಉಪಚಾರ, ಸ್ವಚ್ಛತೆಯನ್ನು ಅಳವಡಿಸಿಕೊಳ್ಳುವ ಮೂಲಕ ದೇಹ ಮತ್ತು ಮುಖದ ಬಗ್ಗೆ ಕಾಳಜಿ ವಹಿಸಿದ್ದೇ ಆದರೆ ಮೊಡವೆ ಮುಖದ ಮೇಲೆ ಬಾರದಂತೆ ನೋಡಿಕೊಳ್ಳುವುದು ಕಷ್ಟವೇನಲ್ಲ.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು












Click it and Unblock the Notifications