Goddu khara recipe: ಮಳೆ ಶುರುವಾಯ್ತು ಚಳಿಗೆ ಖಾರ ಖಾರವಾಗಿ ಸುಲಭ ಗೊಡ್ಡು ಖಾರ ಟ್ರೈ ಮಾಡಿ
ಬೆಂಗಳೂರು, ಏಪ್ರಿಲ್. 21: ಮಳೆ ಶುರುವಾಗಿದೆ. ಈ ಚಳಿ ಚಳಿ ವಾತಾವರಣದಲ್ಲಿ ಬಾಯಿಗೆ ಖಾರ ಖಾರವಾಗಿ ಮತ್ತು ರುಚಿ ರುಚಿಯಾಗಿ ತಿನ್ನುವ ಮನಸಾದರೆ ಈ ಗೊಡ್ಡು ಖಾರ ಟ್ರೈ ಮಾಡಿ. ಹಳ್ಳಿಗಳಲ್ಲಿ ಇಂದಿಗೂ ಬಾಯಿ ಕೆಟ್ಟರೇ, ಊಟ ಮಾಡಲು ಮನಸ್ಸು ಇಲ್ಲ ಎಂದರೆ ಈ ಗೊಡ್ಡು ಖಾರ ಸಾಮಾನ್ಯವಾಗಿ ಮಾಡಲಾಗುತ್ತದೆ.
ಗೊಡ್ಡು ಖಾರ ಅತ್ಯಂತ ಜನಪ್ರಿಯ ಹಳ್ಳಿ ಶೈಲಿಯ ಕೆಂಪು ಮೆಣಸಿನಕಾಯಿ ಚಟ್ನಿಯಾಗಿದೆ. ಇದನ್ನು, ಅನ್ನ, ರೊಟ್ಟಿ ಮತ್ತು ದೊಸೆಯ ಜೊತೆಗೆ ತಿನ್ನಬಹುದು. ಒಮ್ಮೆ ತಯಾರಿಸಿದರೆ ಇದನ್ನು ಒಂದು ತಿಂಗಳು ಆರಾಮಾವಾಗಿ ಸಂಗ್ರಹಿಸಬಹುದು. ಕೆಂಪು ಮೆಣಸಿನಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ, ಜೀರಿಗೆ, ಕರಿಬೇವಿನ ಸೊಪ್ಪು, ಉಪ್ಪು ಮತ್ತು ಹುಣಸೆಹಣ್ಣುಗಳನ್ನು ಬಳಸಿ ಗೊಡ್ಡು ಖಾರವನ್ನು ತಯಾರಿಸಲಾಗುತ್ತದೆ. .

ಗೊಡ್ಡು ಖಾರಾ ತಯಾರಿಸಲು ಬೇಕಾಗುವ ಪದಾರ್ಥಗಳು
* 10 ರಿಂದ 12 ಕೆಂಪು ಮೆಣಸಿನಕಾಯಿಗಳು (ಬ್ಯಾಡಗಿ ಅಥವಾ ಗುಂಟೂರು ಮೆಣಸಿನಕಾಯಿ)
* ಒಂದು ಮಧ್ಯಮ ಗಾತ್ರದ ಬೆಳ್ಳುಳ್ಳಿ
* ಒಂದು ಟೀಸ್ಪೂನ್ ಜೀರಿಗೆ
* ಒಂದು ಟೀಸ್ಪೂನ್ ಕೊತ್ತಂಬರಿ ಕಾಳುಗಳು (ಬೇಕಾದರೆ ಹಸಿ ಕೊತ್ತಂಬರಿ ಸೊಪ್ಪು ಬಳಸಬಹುದು)
* ಕರಿಬೇವಿನ ಎಲೆಗಳು
* ಒಂದು ಸಣ್ಣ ಗಾತ್ರದ ಈರುಳ್ಳಿ (ಬೇಕಿದ್ದರೆ ಬಳಸಬಹುದು)
* ಒಂದು ಟೀಸ್ಪೂನ್ ಎಣ್ಣೆ
* ಒಂದು ನೆಲ್ಲಿಕಾಯಿ ಗಾತ್ರದ ಹುಣಸೆಹಣ್ಣು
* ಒಂದು ಚಮಚ ಉಪ್ಪು ಅಥವಾ ನಿಮ್ಮ ರುಚಿಗೆ ತಕ್ಕಂತೆ
ಗೊಡ್ಡು ಖಾರ ಅಥವಾ ಕೆಂಪು ಮೆಣಸಿನಕಾಯಿ ಚಟ್ನಿ ಮಾಡುವುದು ಹೇಗೆ
ಒಂದು ಬಾಣಲೆ ಅಥವಾ ಪ್ಯಾನ್ ಅನ್ನು ತೆಗೆದುಕೊಳ್ಳಿ. ಅದರಲ್ಲಿ ಬ್ಯಾಡಗಿ ಅಥವಾ ಗುಂಟೂರು ಕೆಂಪು ಮೆಣಸಿನಕಾಯಿ ಮತ್ತು ಎಣ್ಣೆಯನ್ನು ಹಾಕಿಕೊಳ್ಳಿ. ಮೆಣಸಿನಕಾಯಿ ಗರಿಗರಿಯಾಗುವವರೆಗೆ ಫ್ರೈ ಮಾಡಿ. ಸಿಪ್ಪೆ ಸುಲಿದ ಬೆಳ್ಳುಳ್ಳಿಯನ್ನು ಸೇರಿಸಿ, ಬೆಳ್ಳುಳ್ಳಿ ಸ್ವಲ್ಪ ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯುವುದನ್ನು ಮುಂದುವರಿಸಿ. ನಂತರ ಕೊತ್ತಂಬರಿ ಕಾಳುಗಳು, ಜೀರಿಗೆ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ. ಕರಿಬೇವಿನ ಎಲೆಗಳು ಗರಿಗರಿಯಾಗುವವರೆಗೆ ಫ್ರೈ ಮಾಡಿ. ಸ್ಟವ್ ಆಫ್ ಮಾಡಿ. ಬೇಕಿದ್ದರೇ ಈರುಳ್ಳಿಯನ್ನು ಸುಟ್ಟು ಇಟ್ಟುಕೊಳ್ಳಿ.

ಹುರಿದ ಪದಾರ್ಥಗಳು, ಸುಟ್ಟ ಈರುಳ್ಳಿ, ಉಪ್ಪು ಮತ್ತು ಹುಣಸೆಹಣ್ಣುಗಳನ್ನು ಮಿಕ್ಸಿ ಜಾರ್ನಲ್ಲಿ ತೆಗೆದುಕೊಳ್ಳಿ. ಅಗತ್ಯವಿರುವ ನೀರನ್ನು ಸೇರಿಸಿ ಪೇಸ್ಟ್ ಆಗಿ ರುಬ್ಬಿಕೊಳ್ಳಿ. ಕಾಯಿಸಿ ಆರಿಸಿದ ನೀರನ್ನು ಸೇರಿಸುವುದರಿಂದ ತುಂಬಾ ದಿನಗಳ ಕಾಲ ಇದನ್ನು ಸ್ಟೋರ್ ಮಾಡಬಹುದು. ಇದನ್ನು ಬಿಸಿ ಅನ್ನ ಅಥವಾ ರೊಟ್ಟಿಯೊಂದಿಗೆ ತುಪ್ಪದ ಜೊತೆಗೆ ಬಡಿಸಿ. ಒಂದು ತಿಂಗಳು ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಬಹುದು.
-
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ












Click it and Unblock the Notifications