Garlic Rice Recipe: ಚಿತ್ರನ್ನ ತಿಂದು ಬೇಜಾರಾಗಿದ್ರೆ ಬೆಳ್ಳುಳ್ಳಿ ರೈಸ್ ಮಾಡಿ....
ವಾರವಿಡೀ ವೆರಾಯಿಟಿ ಅಡುಗೆ ಮಾಡುವುದು ಒಂದು ಸವಾಲಿನ ಕೆಲಸ. ಮನೆಯ ಪ್ರತಿಯೊಬ್ಬ ಸದಸ್ಯರಿಗೂ ಇಷ್ಟವಾಗುವಂತೆ ರುಚಿಯಾಗಿ ಕಲರ್ಫುಲ್ ಆಗಿ ಅಡುಗೆ ಮಾಡಿ ಬಡಿಸುವುದು ಅಷ್ಟು ಸುಲಭವಲ್ಲ. ಹೀಗೆ ನಿತ್ಯ ಒಂದೊಂದು ಬಗೆಯ ಅಡುಗೆ ಏನ್ ಮಾಡೋದು ಅಂತ ಯೋಚನೆ ಬರದೇ ಇರಲು ನೀವು ನಿಮ್ಮ ತಲೆಗೆ ಸ್ವಲ್ಪ ಕೆಲಸ ಕೊಡಬೇಕು. ಅದೇನೆಂದರೆ ಮನೆಯಲ್ಲಿ ನಿತ್ಯ ಮಾಡುವ ಅಡುಗೆಯಲ್ಲೇ ವಿಭಿನ್ನ ರುಚಿ ಬರಿಸುವುದು ಹೇಗೆ ಅನ್ನೋದನ್ನ ತಿಳಿಯಬೇಕು.
ಹೌದು... ನಿತ್ಯ ಮಾಡುವ ಅಡುಗೆಯಲ್ಲಿ ಕೊಂಚ ವಿಭಿನ್ನ ರೀತಿಯಲ್ಲಿ ಅಡುಗೆ ಮಾಡುವುದು ಹೇಗೆ ಅನ್ನೋದನ್ನು ನಿಮಗೆ ತಿಳಿದರೆ ನಿಮ್ಮ ಶ್ರಮ ಕಡಿಮೆಯಾಗಿ ಮನೆಯ ಸದಸ್ಯರಿಗೆ ಬಗೆ ಬಗೆ ರುಚಿಯ ಅಡುಗೆ ಮಾಡಿ ಬಡಿಸಬಹುದು. ಹಾಗಾದರೆ ನಿತ್ಯ ನಾವು ತಯಾರಿಸುವ ಅಡುಗೆಯಲ್ಲೇ ಬಗೆ ಬಗೆಯ ಅಡುಗೆ ಮಾಡುವುದು ಹೇಗೆ ಅನ್ನೋದನ್ನು ತಿಳಿಯೋಣ.

ಸಾಮಾನ್ಯವಾಗಿ ನಾವು ಚಿತ್ರವನ್ನು ಮಾಡುತ್ತೇವೆ. ಇದನ್ನು ಬೆಳ್ಳುಳ್ಳಿ ಚಿತ್ರನ್ನ, ಕರಿಬೇವು ಚಿತ್ರನ್ನ ಹಾಗೂ ಮೆಂತೆ ಸೊಪ್ಪು ಚಿತ್ರನ್ನವಾಗಿ ತಯಾರು ಮಾಡಬಹುದು. ಇದನ್ನು ಮಾಡುವ ವಿಧಾನ ಕೂಡ ತುಂಬಾ ಸುಲಭವಾಗಿದೆ. ಹಾಗಾದರೆ ಇದನ್ನು ತಯಾರಿಸಲು ಬೇಕಾಗುವ ಪದಾರ್ಥಗಳ ಬಗ್ಗೆ ತಿಳಿಯೋಣ.
ಬೆಳ್ಳುಳ್ಳಿ ಚಿತ್ರನ್ನ ಮಾಡಲು ಬೇಕಾಗುವ ಪದಾರ್ಥಗಳು:-
*ಅನ್ನ ಒಂದು ಕಪ್
*ಬೆಳ್ಳುಳ್ಳಿ ಹತ್ತು ಎಸಳು (ಕರಿಬೇವು ಚಿತ್ರನ್ನ ಮಾಡುವಾಗ ಬೆಳ್ಳುಳ್ಳಿ ಬದಲು ಕರಿಬೇವು ಬಳಸಿ/ ಇದೇ ರೀತಿ ಮೆಂತೆ ಸೊಪ್ಪು ಬಳಸಿ ಮೆಂತೆ ಸೊಪ್ಪು ಚಿತ್ರನ್ನ ಮಾಡಬಹುದು. ಮಾಡುವ ವಿಧಾನ ಒಂದೇ ರೀಯಿಯಾಗಿರುತ್ತದೆ)
*ಹಸಿ ಮೆಣಸಿನಕಾಯಿ ನಾಲ್ಕು (ಸಣ್ಣಕೆ ಕಟ್ ಮಾಡಿದ)
*ಜೀರಿಗೆ-ಸಾಸಿವೆ ಸ್ವಲ್ಪ
*ಮೆಣಸುಕಾಳು ಮೂರು
*ಚೆಕ್ಕೆ ಸ್ವಲ್ಪ
*ಶೆಂಗಾ ಹತ್ತು ಕಾಳು
*ನಿಂಬೆ ಹಣ್ಣು ಒಂದು
*ಈರುಳ್ಳಿ ಒಂದು (ಸಣ್ಣಕೆ ಕಟ್ ಮಾಡಿದ)
*ಎಣ್ಣೆ ನಾಲ್ಕು ಟೀಸ್ಪೂನ್
*ಕೊಬ್ಬರಿ ಸೊಪ್ಪು ಸ್ವಲ್ಲ
* ಉಪ್ಪು (ರುಚಿಗೆ ತಕ್ಕಷ್ಟು)
* ಅರಿಶಿಣ ಚಿಟಿಕೆ
ತಯಾರಿಸುವ ವಿಧಾನ:-
* ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಬಿಸಿ ಆದ ಮೇಲೆ ಬೆಳ್ಳುಳ್ಳಿ ಹಾಕಿ ಕೆಂಪಗಾಗುವವರೆಗೂ ಹುರಿಯಿರಿ. ಬಳಿಕ ಅದನ್ನು ತೆಗೆದುಬಿಡಿ. (ನಿಮಗೆ ಬೇಕಾದಲ್ಲಿ ಹಾಗೇ ಬಿಡಬಹುದು)
* ಈ ಎಣ್ಣೆಗೆ ಜೀರಿಗೆ-ಸಾಸಿವೆ ಹಾಕಿ, ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ಫ್ರೈ ಮಾಡಿ.
* ಬಳಿಕ ಈರುಳ್ಳಿ ಹಾಕಿ ಫ್ರೈ ಮಾಡಿ. ಮಧ್ಯಮ ಉರಿಯಲ್ಲಿ ಈರುಳ್ಳಿ ಫ್ರೈ ಮಾಡಿ. ಬಳಿಕ ಇದಕ್ಕೆ ಕಾಳುಮೆಣಸು, ಚಕ್ಕೆ, ಹುರಿದ ಶೆಂಗಾ ಹಾಕಿ ಚೆನ್ನಾಗಿ ಕಲಸಿ.
* ಬಳಿಕ ಇದಕ್ಕೆ ಅರಿಶಿಣ, ಉಪ್ಪು ಹಾಕಿ ಕಲಸಿ ಅನ್ನವನ್ನು ಹಾಕಿ. ನಂತರ ನಿಂಬೆ ಹಣ್ಣಿನ ರಸವನ್ನು ಬೆರಸಿ ಕಲಸಿ.
* ನಂತರ ಸಣ್ಣ ಉರಿಯಲ್ಲಿ ಪಾತ್ರೆಯನ್ನು ಮುಚ್ಚಿ ಮೂರು ನಿಮಿಷ ಬಿಡಿ.
* ಬಳಿಕ ಕೊತ್ತೊಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿದರೆ ಬೆಳ್ಳುಳ್ಳಿ ರೈಸ್ ಸವಿಯಲು ಸಿದ್ದ.
-
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications