Ellu Mithai Recipe: ಮಕ್ಕಳು ಇಷ್ಟಪಟ್ಟು ತಿನ್ನುವ ಸಖತ್ ಟೇಸ್ಟಿ ಎಳ್ಳು ಮಿಠಾಯಿ...
ಇವತ್ತು ಸಂಕ್ರಾಂತಿ ಹಬ್ಬ. ಮನೆಯಲ್ಲಿ ಎಲ್ಲಾ ಮಹಿಳೆಯರು ಹಬ್ಬ ಆಚರಣೆ ಮಾಡೋದ್ರಲ್ಲಿ ಫುಲ್ ಬ್ಯೂಸಿ. ಬೆಳಿಗ್ಗೆಯಿಂದ ಸಿಹಿ ಪೊಂಗಲ್, ಖಾರದ ಪೊಂಗಲ್, ಎಳ್ಳು ಉಂಡೆ, ಹೋಳಿಗೆ, ಎಳ್ಳು ಬೆಲ್ಲ ಸಿದ್ಧಪಡಿಸಿ ಪೂಜೆಗೆ ಇಟ್ಟು, ನೆರೆಹೊರೆಯವರಿಗೆ ಹಂಚಿ ಊಟ ಮಾಡಲು ಈಗ ಕುಳಿತಿರಬೇಕು ಅಲ್ವಾ? ಈ ನಡುವೆ ಮನೆಯಲ್ಲಿ ಮಕ್ಕಳು ತಮಗೆ ಬೇರೆ ತಿಂಡಿ ಬೇಕು ಅಂತಾ ಹಠ ಮಾಡ್ತಾಯಿದ್ದಾರಾ? ಹಾಗಾದ್ರೆ ಫಟಾ ಫಟ್ ಅಂತ ಎಳ್ಳು ಮಿಠಾಯಿ ಮಾಡಿ. ಮಕ್ಕಳು ಇಷ್ಟಪಟ್ಟು ತಿಂತಾರೆ ಸಖತ್ ಟೇಸ್ಟಿ ಕೂಡ ಇರುತ್ತೆ...
ಎಳ್ಳು ಉಂಡೆ, ಎಳ್ಳು ಹೋಳಿಗೆ ಮಾಡುವ ಪ್ರತೀ ಮಹಿಳೆಯರಿಗೆ ಎಳ್ಳು ಮಿಠಾಯಿ ತಯಾರಿಸುವುದು ಕಷ್ಟವೇನು ಅಲ್ಲ. ಇದನ್ನು ತಯಾರಿಸುವುದು ತುಂಬಾ ಸುಲಭ ಹಾಗೆನೇ ತಿನ್ನಲು ಕೂಡ ಸಖತ್ ಟೇಸ್ಟಿ ಇರುತ್ತದೆ. ಹಾಗಾದರೆ ತಡ ಮಾಡುವುದು ಬೇಡ ಎಳ್ಳು ಮಿಠಾಯಿ ತಯಾರಿಸುವುದು ಹೇಗೆ ಅನ್ನೋದನ್ನು ತಿಳಿಯೋಣ.

ಬೇಕಾಗುವ ಪದಾರ್ಥಗಳು:
* ಬಿಳಿ ಎಳ್ಳು ಒಂದು ಕಪ್
* ಬೆಲ್ಲ ಅರ್ಧ ಕಪ್
*ಎಣ್ಣೆ ಸ್ವಲ್ಪ
* ತುಪ್ಪ ಎರಡು ಟೇಬಲ್ ಸ್ಪೂನ್
* ಶೆಂಗಾ 6 ಟೇಬಲ್ ಸ್ಪೂನ್
ಎಳ್ಳು ಮಿಠಾಯಿ ತಯಾರಿಸುವ ವಿಧಾನ:
* ಒಂದು ಬಾಣಲೆಗೆ ಬೆಲ್ಲ ಹಾಕಿ ಒಂದು ಟೇಬಲ್ ಸ್ಪೂನ್ ನೀರು ಹಾಕಿ ಚೆನ್ನಾಗಿ ಕದಡಿ ಪಾಕ ಮಾಡಿಕೊಳ್ಳಿ. ಈ ಪಾಕ್ ನೀರಾಗಿರಬಾರದು ಜೊತೆಗೆ ತಳ ಹಿಡಿಯದಂತೆ ನೋಡಿಕೊಳ್ಳಿ. ಸಣ್ಣ ಉರಿಯಲ್ಲಿ ತಳ ಹಿಡಿಯದಂತೆ ಕದಡುತ್ತಿರಿ.
* ಒಂದು ಪಾತ್ರೆ ಒಲೆಯನ್ನು ಮೇಲಿಟ್ಟು ಬಿಳಿ ಎಳ್ಳನ್ನು ಕೆಂಪಾಗುವವರೆಗೆ ಹುರಿದುಕೊಳ್ಳಿ. ಇದನ್ನು ಪಕ್ಕಕ್ಕೆ ತೆಗೆದಿಟ್ಟು ತಣ್ಣಗಾಗಲು ಬಿಡಿ
* ಶೆಂಗಾ ಕೂಡ ಹುರಿದುಕೊಳ್ಳಿ. ನಂತರ ಇದನ್ನು ತಣ್ಣಗಾಗಲು ಬಿಡಿ
* ಒಂದು ಮಿಕ್ಸಿ ಜಾರ್ನಲ್ಲಿ ಶೆಂಗಾವನ್ನು ಸಣ್ಣಕೆ ರುಬ್ಬಿಕೊಳ್ಳಿ. ಒಂದು ಪಾತ್ರೆಗೆ ಹಾಕಿ.
* ಪಾಕ ಸಿದ್ಧವಾದ ಬಳಿಕ ರುಬ್ಬಿದ ಶೆಂಗಾ ಪುಡಿಯನ್ನು ಹಾಕಿ ಚಿನ್ನಾಗಿ ಕಲಸಿ, ಇದಕ್ಕೆ ಸ್ವಲ್ಪ ತುಪ್ಪ ಹಾಕಿ.
* ನಂತರ ಎಳ್ಳನ್ನು ಸ್ವಲ್ಪ ಸ್ವಲ್ಪ ಹಾಕಿ ಹೆಚ್ಚಾಗದಂತೆ ನೋಡಿಕೊಂಡು ಚೆನ್ನಾಗಿ ಕಲಸಿ
* ಈ ಮಿಶ್ರಣವನ್ನು ಒಂದು ಪಾತ್ರೆಗೆ ಎಣ್ಣೆ ಹಚ್ಚಿ, ಆ ಪಾತ್ರೆಗೆ ಹಾಕಿ ಬಿಸಿಯಿರುವಾಗಲೆ ಕೈಗೆ ಎಣ್ಣೆ ಹಚ್ಚಿಕೊಂಡು ಚೆನ್ನಾಗಿ ಹಿಗ್ಗಿಸಲು ಪ್ರಯತ್ನಿಸಿ.
* ಹೀಗೆ ಹಿಗ್ಗಿಸಿ ಮಿಶ್ರಣ ಮಾಡುವುದರಿಂದ ಮಿಠಾಯಿಯ ಬಣ್ಣ ಬದಲಾಗುತ್ತದೆ. ಜೊತೆಗೆ ಇದರ ರುಚಿ ಕೂಡ ಹೆಚ್ಚಾಗುತ್ತದೆ
* ಬಳಿಕ ಇದನ್ನು ನೀವು ಪೆನ್ಸಿಲ್ ಅಥವಾ ಮುಟ್ಟೆ ಅಥವಾ ಗುಂಡಾಕಾರದಲ್ಲಿ ಮಾಡಿಕೊಳ್ಳಬಹುದು. ತ್ರಿಕೋನ ಆಕಾರದಲ್ಲೂ ಕಟ್ ಮಾಡಬಹುದು. (ಆಟಿಕೆ ಆಕಾರದಲ್ಲೂ ಮಾಡಿಕೊಳ್ಳಬಹುದು)
* ಹೀಗೆ ಮಾಡಿದರೆ ಮಕ್ಕಳಿಗೆ ಇಷ್ಟವಾಗುವ ರುಚಿ ರುಚಿಯಾದ ಎಳ್ಳು ಮಿಠಾಯಿ ರೆಡಿ.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್












Click it and Unblock the Notifications