ಯಾವ್ದಾದ್ರೂ ಡ್ರೆಸ್ ಹಾಕ್ಕೊಂಬಾ ನನಗೇನು!
ಹಳ್ಳಿ ಮೇಷ್ಟ್ರು ಹಡಪದ್ ಹಾಜರಿ ತೆಗೆದುಕೊಳ್ಳುತ್ತಿರುತ್ತಾರೆ. ಮೂಗಿನ ತುದಿಗೆ ಇಳಿಸಿಕೊಂಡಿದ್ದ ಕನ್ನಡಕದ ಮೇಲಿನಿಂದ ಒಬ್ಬೊಬ್ಬರನ್ನೇ ಹೆಸರು ಹಿಡಿದು ಕರೆದು ಹಾಜರಿ ಬುಕ್ಕಿನಲ್ಲಿ ಟಿಕ್ ಮಾಡುತ್ತಿರುತ್ತಾರೆ. ಆಡ್ ಗರ್ಲ್ ಔಟ್ ಆಗಿ ಕಮಲ ಕಡೆ ಬೆಂಚಿನಲ್ಲಿ ಕುಳಿತಿರುತ್ತಾಳೆ. ಎದ್ದು ನಿಲ್ಲುವಂತೆ ಬೆರಳಿನಿಂದ ಸೂಚಿಸುತ್ತಾರೆ.
"ಏನೇ ಕಮಲ, ಯಾಕಿವತ್ತು ಡ್ರೆಸ್ ಹಾಕಿಕೊಂಡು ಬಂದಿಲ್ಲ? ಏನು ಹುಟ್ಟುಹಬ್ಬಾನಾ?" ಎಂದು ಬಿರುಗಣ್ಣು ಬಿಟ್ಟು ಕನ್ನಡಕವನ್ನು ಕಣ್ಣಿಗೇರಿಸಿ ಕೇಳಿದರು.
ಅವರು ಕೇಳಿದ ಪ್ರಶ್ನೆಗೆ ಕಮಲ ಮಾತ್ರವಲ್ಲ ಒಂಬತ್ತನೇ ತರಗತಿಯ ಎಲ್ಲ ವಿದ್ಯಾರ್ಥಿಗಳು ಕಕ್ಕಾಬಿಕ್ಕಿಯಾಗಿದ್ದರು. ಒಂದಿಬ್ಬರಿಗೆ ನಗು ಉಕ್ಕಿ ಬಂದರೂ, ಹೂಸನ್ನು ಗಟ್ಟಿಯಾಗಿ ತಡೆಹಿಡಿದುಕೊಂಡ ಹಾಗೆ ನಗುವನ್ನೂ ಬಾಯಿಗೆ ಕೈಯಿಟ್ಟುಕೊಂಡು ತಡೆಹಿಡಿದಿದ್ದರು.
ನಂತರ ಸಾವರಿಸಿಕೊಂಡ ಕಮಲ, "ಯಾಕ್ಸಾ ನಾನೇನು ಬೆತ್ತಲಾಗಿ ಕಾಣ್ತಿದ್ದೀನಾ?" ಎಂದು ದಿಟ್ಟವಾಗಿ ಕೇಳಿದರು. ಈಗ ಕಕ್ಕಾಬಿಕ್ಕಿಯಾಗುವ ಸರದಿ ಮೇಷ್ಟ್ರದಾಗಿತ್ತು.
ಅವರೂ ಸಾವರಿಸಿಕೊಂಡು, "ಮಮಮ.... ಬಬಬ.... ನಾನು ಕೇಳಿದ್ದು ಯುನಿಫಾರ್ಮ್ ಯಾಕೆ ಹಾಕಿಕೊಂಡು ಬಂದಿಲ್ಲಾ ಅಂತ. ಹೋಗಿ ಎಲ್ಲಾದ್ರೂ ಪ್ರಿನ್ಸಿಪಾಲಿಗೆ ಹೇಳೀಯಾ ಮತ್ತೆ! ಯಾವ್ದಾದ್ರೂ ಡ್ರೆಸ್ ಹಾಕ್ಕೊಂಬಾ ನನಗೇನು!"
***
ಮೇಷ್ಟ್ರು ಮಂಕಣ್ಣನವರು ತಾವು ಪಾಠ ಮಾಡುತ್ತಿದ್ದ ಮೂರನೇ ತರಗತಿ ಮಕ್ಕಳಿಗೆ ನೀರಿನ ಬಗ್ಗೆ ಎರಡು ವಾಕ್ಯಗಳಲ್ಲಿ ಬರೆಯಲು ಹೇಳಿದರು. ಮಕ್ಕಳು ತಮ್ಮ ಭಾಷೆಯಲ್ಲಿ ಏನೆಲ್ಲಾ ಬರೆದಿದ್ದರು. ಊಟ ಆದ ಮೇಲೆ ನೀರು ಕುಡಿತೀವಿ. ನೀರನ್ನು ಅಡುಗೆ ಮಾಡಲು ಬಳಸುತ್ತಾರೆ. ನೀರನ್ನು ಕಾರು ತೊಳೆಯಲು ಬಳಸುತ್ತಾರೆ. ನೀರು ಕುಡಿದರೆ ಬಾಯಾರಿಕೆ ಆಗಲ್ಲ... ಇತ್ಯಾದಿ ಇತ್ಯಾದಿ.
ಆದರೆ, ತುಂಟ ತುಷಾರ್ ಬರೆದ ಸಾಲುಗಳು ಹೀಗಿದ್ದವು. "ನೀರು ಸ್ವಚ್ಛವಾಗಿರುತ್ತದೆ, ತೊಳೆದುಕೊಂಡಾಗ ಹೊಲಸಾಗುತ್ತದೆ!"
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications