ಸಾಂತನಿಗೆ ಬುದ್ಧಿ ಇಲ್ಲ ..ಇದು ಕಪ್ಪೆಗೂ ಗೊತ್ತು!
ಕಪ್ಪೆ : ನಿನಗೆ ಬುದ್ದಿ ಇಲ್ಲ
ಸಾಂತ : ಇದೆ
ಕಪ್ಪೆ : ಇಲ್ಲ ಚೂರೂ ಇಲ್ಲ
ಸಾಂತ : ಇದೆ ಇದೇ....
ನಿನಗೆ ಬುದ್ದಿ ಸ್ವಲ್ಪನೂ ಇಲ್ಲ ಎಂದು ಘೋಷಿಸಿ ಕಪ್ಪೆ ಬಾವಿಗೆ ಹಾರಿತು..
ಸಾಂತ : ಭಗವಾನ್. ಇಷ್ಟಕ್ಕೆಲ್ಲ ಯಾರ್ಯಾರು ಆತ್ಮಹತ್ಯೆ ಮಾಡ್ಕೊತಾರಾ?
***
65 ಮೈಲಿ ವೇಗಮಿತಿ ಅಂತ ಇತ್ತು. ಆದರೆ ಸಾಂತ 85 ಮೈಲಿ ವೇಗದಲ್ಲಿ ಗಾಡಿ ಓಡಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ.ಅವನನ್ನು ಕೋರ್ಟಿಗೆ ಎಳೆಯಲಾಗಿತ್ತು.
ನ್ಯಾಯಾಧೀಶ : ಏನ್ ಬೇಕು ನಿನಗೆ 30 ದಿವಸನಾ? 3000 ಡಾಲರಾ?
ಸಾಂತಾ : ದುಡ್ಡೇ ತೊಗೊಳೊದು ವಾಸಿ ಅಂತ ಕಾಣಿಸತ್ತೆ, ಸರ್.
***
ಸಂತಾ :ನಮ್ಮ ತಂದೆ ಧೈರ್ಯವಂತಿಕೆಗೆ ಹೆಸರಾಗಿದ್ದರು. ಒಂದ್ಸಲ ಅವರು ಸಿಂಹದ ಬೋನಿನೊಳಗೆ ಹೋಗಿದ್ದರು.
ಬಂತಾ :ಅಬ್ಬಾ ! ಅವರು ಹೊರಗೆ ಬಂದಾಗ ಜೋರು ಚಪ್ಪಾಳೆ ಗಿಟ್ಟಿಸಿರಬೇಕು. ಅಲ್ವಾ ಸಾಂತಾ?
ಸಂತಾ : ಅವರು ಹೊರಗೆ ಬಂದ್ರು ಅಂತ ನಾನು ಹೇಳಲೇ ಇಲ್ಲಾ!.












Click it and Unblock the Notifications