ಅಕ್ಟೋಬರ್ ನಂತರ ಐಟಿ ವಲಯದ ಕಚೇರಿಗಳು ಪುನರಾರಂಭ: ಸಾವಿರಾರು ಉದ್ಯೋಗ ಸೃಷ್ಟಿ ಸಾಧ್ಯತೆ
ನವದೆಹಲಿ, ಸೆಪ್ಟೆಂಬರ್ 30: ಕಳೆದ ವರ್ಷ ದೇಶದಲ್ಲಿ ಕೋವಿಡ್ ಪ್ರಕರಣಗಳು ವರದಿಯಾದ ನಂತರ ಬಹಳ ಸಂಕಷ್ಟದ ಪರಿಸ್ಥಿತಿ ಎದುರಾಗಿತ್ತು. ಲಾಕ್ಡೌನ್ನಿಂದಾಗಿ ಐಟಿ ವಲಯದ ಕಚೇರಿಗಳನ್ನು ಮುಚ್ಚಲಾಗಿತ್ತು, ಇದರಿಂದ ಅನೇಕ ಜನ ಉದ್ಯೋಗ ಕಳೆದುಕೊಂಡರು.
ಇದೀಗ ದೇಶದ ಕೋವಿಡ್ ಪರಿಸ್ಥಿತಿ ಕ್ರಮೇಣ ಬದಲಾಗುತ್ತಿದ್ದು, ಕಡಿಮೆ ಪ್ರಕರಣಗಳು ದಾಖಲಾಗುತ್ತಿವೆ ಮತ್ತು ಹೆಚ್ಚಿನ ಜನರಿಗೆ ಲಸಿಕೆ ನೀಡಲಾಗುತ್ತಿದೆ. ರಾಷ್ಟ್ರ ರಾಜಧಾನಿ ನವದೆಹಲಿ ಸುತ್ತಮುತ್ತಲೂ ನೂರಾರು ಎಂಎನ್ಸಿ ಕಂಪನಿಗಳು, ಕೆಪಿಒಗಳು ಮತ್ತು ಬಿಪಿಒ ಕಚೇರಿಗಳು ಮರು ಪ್ರಾರಂಭ ಮಾಡಲು ಸಿದ್ಧತೆ ನಡೆಸಿವೆ. ಕಂಪೆನಿಗಳು ಕೋವಿಡ್ ಮುಂಚಿನಂತೆ ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುವುದರಿಂದ ಆರ್ಥಿಕತೆಯು ಸುಧಾರಿಸುವ ಸಾಧ್ಯತೆಯಿದೆ.
ದೆಹಲಿ, ನೋಯ್ಡಾ ಮತ್ತು ಗುರುಗ್ರಾಮದಲ್ಲಿನ ಕಾರ್ಪೊರೇಟ್ ಉದ್ಯಮವು ಲಾಕ್ಡೌನ್ ಸಮಯದಲ್ಲಿ ಸಂಬಳ ಕಡಿತ ಮತ್ತು ಕೆಲಸದಿಂದ ವಜಾಗೊಳಿಸುವಿಕೆಯಂತಹ ಕಠಿಣ ಸಮಯವನ್ನು ಎದುರಿಸಿತ್ತು. ನ್ಯಾಷನಲ್ ಅಸೋಸಿಯೇಷನ್ ಆಫ್ ಸಾಫ್ಟ್ ವೇರ್ ಅಂಡ್ ಸರ್ವಿಸ್ ಕಂಪನಿಗಳ (ನಾಸ್ಕಾಮ್) ಮಾಹಿತಿಯ ಪ್ರಕಾರ, ನವದೆಹಲಿಯ ಎನ್ಸಿಆರ್ನಲ್ಲಿ ಬಿಪಿಒ ಮತ್ತು ಐಟಿ ವಲಯದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಉದ್ಯೋಗದಲ್ಲಿದ್ದಾರೆ.

ಅಕ್ಟೋಬರ್ ನಂತರ, ಎನ್ಸಿಆರ್ನಾದ್ಯಂತ ದೊಡ್ಡ ಉದ್ಯೋಗ ಒದಗಿಸುವ ಉದ್ಯಮ ಪ್ರಕ್ರಿಯೆ ಹೊರಗುತ್ತಿಗೆ (ಬಿಪಿಒ), ಜ್ಞಾನ ಪ್ರಕ್ರಿಯೆ ಹೊರಗುತ್ತಿಗೆ (ಕೆಪಿಒ) ಮತ್ತು ಬಹುರಾಷ್ಟ್ರೀಯ ಕಂಪನಿಗಳು (ಎಂಎನ್ಸಿ) ಸೇರಿದಂತೆ ಹಲವು ಕಾರ್ಪೊರೇಟ್ ಕಚೇರಿಗಳು ಮತ್ತೆ ತೆರೆಯುತ್ತಿವೆ.
ಕ್ಯಾಬ್ ಮಾಲೀಕರು, ಕ್ಯಾಬ್ ಚಾಲಕರು, ಬಸ್ ಮಾಲೀಕರು, ಬಸ್ ಚಾಲಕರು, ಕ್ಯಾಟರಿಂಗ್, ಹೌಸ್ಕೀಪಿಂಗ್ ಮತ್ತು ಇತರ ಹಲವು ಸಿಬ್ಬಂದಿ ಸೇರಿ ಒಂದು ಲಕ್ಷ ಉದ್ಯೋಗಿಗಳು ಮುಂದಿನ ಎರಡು ಮೂರು ತಿಂಗಳಲ್ಲಿ ಮತ್ತೆ ಮರಳುವ ಸಾಧ್ಯತೆಯಿದೆ.
"ಉದ್ಯಮವು ಮತ್ತೆ ತೆರೆಯಲು ಸಿದ್ಧವಾಗಿದೆ. ಕಚೇರಿ ಸ್ಥಳಗಳು ಹಂತ ಹಂತವಾಗಿ ಪುನರಾರಂಭಗೊಳ್ಳುತ್ತಿವೆ. ಅಕ್ಟೋಬರ್ನಿಂದ ಕಚೇರಿ ಸಿಬ್ಬಂದಿಯಲ್ಲಿ ಶೇ.10ರಿಂದ 20ರಷ್ಟು ಹೆಚ್ಚಳ ಕಂಡುಬರುತ್ತದೆ. ಇದು ಮುಂದಿನ ಎರಡು- ಮೂರು ತಿಂಗಳಲ್ಲಿ ಕ್ರಮೇಣ 50-60 ಪ್ರತಿಶತಕ್ಕೆ ಏರುತ್ತದೆ. ಕಾರ್ಪೊರೇಟ್ ವಲಯದ ಕಚೇರಿ ಕಟ್ಟಡದಲ್ಲಿ ಕೆಲಸ ಮಾಡುವ ಒಬ್ಬ ಕಾರ್ಪೊರೇಟ್ ಉದ್ಯೋಗಿ ಐದು ಸಹಾಯಕ ಸಿಬ್ಬಂದಿ ಉದ್ಯೋಗಗಳನ್ನು ಸೃಷ್ಟಿಸುತ್ತಾರೆ,'' ಎಂದು ಕಾರ್ಪೊರೇಟ್ ಗೌರವಗಳು ಮತ್ತು ಗ್ಲೋಬಲ್ ಅಸೋಸಿಯೇಷನ್ ಫಾರ್ ಕಾರ್ಪೊರೇಟ್ ಸರ್ವೀಸಸ್ (ಜಿಎಸಿಎಸ್) ನ ಸ್ಥಾಪಕ ಸದಸ್ಯ ಸಮೀರ್ ಸಕ್ಸೇನಾ ಹೇಳುತ್ತಾರೆ.

"ಬಿಪಿಒಗಳು, ಕೆಪಿಒಗಳು ಮತ್ತು ಎಂಎನ್ಸಿಗಳಲ್ಲಿ ಕೆಲಸ ಮಾಡಿದ ಒಂದು ಲಕ್ಷಕ್ಕೂ ಹೆಚ್ಚು ಕ್ಯಾಬ್ ಚಾಲಕರು ಲಾಕ್ಡೌನ್ನಿಂದ ಕೆಲಸವಿಲ್ಲದೆ ಇದ್ದರು. ಅನೇಕರು ತಮ್ಮ ಊರುಗಳಿಗೆ ತೆರಳಿದ್ದರು. ಈಗ ಅವರನ್ನು ಕ್ರಮೇಣವಾಗಿ ನೇಮಕ ಮಾಡಿಕೊಳ್ಳುವ ಸಮಯವಾಗಿದೆ. ಅದೇ ರೀತಿ ಒಂದು ಲಕ್ಷಕ್ಕೂ ಹೆಚ್ಚು ಗೃಹರಕ್ಷಕ ಸಿಬ್ಬಂದಿ ರಾಷ್ಟ್ರೀಯ ರಾಜಧಾನಿ ಪ್ರದೇಶದಾದ್ಯಂತ ಕಾರ್ಪೊರೇಟ್ ಕಚೇರಿಗಳಲ್ಲಿ ಉದ್ಯೋಗದಲ್ಲಿದ್ದರು, ಅವರು ಮತ್ತೆ ಮರಳುತ್ತಾರೆ,'' ಎಂದು ಸಕ್ಸೇನಾ ಹೇಳಿದರು.
ಕಾರ್ಪೊರೇಟ್ ಕಚೇರಿಗಳು ಹೊಸ ಸಾಮಾನ್ಯ ಥರ್ಮಲ್ ಸ್ಕ್ರೀನಿಂಗ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ ಮತ್ತು ಮಾಸ್ಕ್ಗಳ ಬಳಕೆಯನ್ನು ಕಚೇರಿ ಆವರಣದಲ್ಲಿ ಅಳವಡಿಸಿಕೊಳ್ಳುತ್ತಿವೆ. ಬ್ಯಾಂಕಿಂಗ್ ಮತ್ತು ಹಣಕಾಸು ವಲಯಗಳು ಸರದಿ ಪಾಳಿಯಲ್ಲಿ ಸುಮಾರು 100 ಪ್ರತಿಶತದಷ್ಟು ಕಾರ್ಯನಿರ್ವಹಿಸುತ್ತವೆ. ಆದರೆ ಉಳಿದ ವಲಯಗಳು ಸಹ ಮುಂದಿನ ತಿಂಗಳಿನಿಂದ ಮತ್ತೆ ತೆರೆಯುವ ಸಾಧ್ಯತೆಯಿದೆ.
"ಸಹಾಯಕ ಸಿಬ್ಬಂದಿಯನ್ನು ಹೊರತುಪಡಿಸಿ, ಆಹಾರದ ವ್ಯಾಪಾರವು ಪ್ರವರ್ಧಮಾನಕ್ಕೆ ಬರಲಿದೆ. ಪ್ರತಿ ಕಾರ್ಪೊರೇಟ್ ಕಚೇರಿಯು ಕನಿಷ್ಠ ಒಂದು ಕೆಫೆಟೇರಿಯಾವನ್ನು ಹೊಂದಿದೆ. ಉದ್ಯೋಗಿಗಳು ಕಚೇರಿಗೆ ಬರಲು ಪ್ರಾರಂಭಿಸಿದರೆ, ಆಹಾರದ ಉದ್ಯಮವೂ ಸಾಮಾನ್ಯ ಸ್ಥಿತಿಗೆ ಮರಳುತ್ತದೆ,'' ಎಂದು ಉನ್ನತ ಕಾರ್ಪೊರೇಟ್ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಮತ್ತು ಜಿಎಸಿಎಸ್ ಸದಸ್ಯ ಅಜಿತ್ ಪಾಂಡೆ ಹೇಳಿದರು.
ಐಟಿ ಉದ್ಯಮವು ದೇಶದ ಒಟ್ಟು ಜಿಡಿಪಿಯ ಸುಮಾರು 8 ಪ್ರತಿಶತದಷ್ಟಿದೆ. ಮುಂಬೈ, ಹೈದರಾಬಾದ್, ಚೆನ್ನೈ, ಬೆಂಗಳೂರು ಮತ್ತು ದೆಹಲಿ- ಎನ್ಸಿಆರ್ ಸೇರಿದಂತೆ ಕೇವಲ ಐದು ನಗರಗಳಲ್ಲಿ ಬಿಪಿಒ ಮತ್ತು ಐಟಿ ಉದ್ಯಮಗಳು ಕಾರ್ಯನಿರ್ವಹಿಸುತ್ತಿವೆ.
ಟಾಪ್ ಬ್ಯಾಂಕಿಂಗ್ ಸಂಸ್ಥೆಯ ರಿಯಲ್ ಎಸ್ಟೇಟ್ ಮುಖ್ಯಸ್ಥ ಕ್ಯಾಪ್ಟನ್ ರಾಜೇಶ್ ಶರ್ಮಾ ಮಾತನಾಡಿ, ""ಅನ್ಲಾಕ್ ಒಂದೇ ರಾತ್ರಿಯಲ್ಲಿ ಆಗುವುದಿಲ್ಲ. ಕೋವಿಡ್ ಸಾಂಕ್ರಾಮಿಕ ರೋಗ ಇನ್ನೂ ಮುಗಿದಿಲ್ಲವಾದ್ದರಿಂದ ಶೇ.50ರಷ್ಟು ಉದ್ಯೋಗಿಗಳಿಗೆ ಕಚೇರಿ ಸ್ಥಳಾವಕಾಶ ಕಲ್ಪಿಸಲು ಸುಮಾರು ಒಂದು ತಿಂಗಳು ಅಥವಾ ಎರಡು ಸಮಯ ತೆಗೆದುಕೊಳ್ಳುತ್ತದೆ. ಆದಾಗ್ಯೂ, ಇದು ತ್ವರಿತ ಗತಿಯಲ್ಲಿ ಆರ್ಥಿಕತೆಯ ಪುನರುಜ್ಜೀವನಕ್ಕೆ ಕಾರಣವಾಗುತ್ತದೆ,'' ಎಂದು ತಿಳಿಸಿದರು.
ರಿಯಲ್ ಎಸ್ಟೇಟ್, ಸಾರಿಗೆ, ಅಡುಗೆ, ಲಾಂಡ್ರಿ ಜೊತೆಗೆ ಹೊಸ ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆಯಿದೆ ಮತ್ತು ಅಂತಹ ಇತರ ಹಲವು ವ್ಯವಹಾರಗಳು ಅನ್ಲಾಕ್ 2.0ನಿಂದ ನೇರವಾಗಿ ಪ್ರಯೋಜನ ಪಡೆಯುತ್ತವೆ.
ಕಾರ್ಪೊರೇಟ್ ಸಂಸ್ಥೆಯೊಂದಿಗಿನ ಹಿರಿಯ ಸಹವರ್ತಿ ರಾಹುಲ್ ಲಾಲ್, "ಲಾಕ್ಡೌನ್ ಹೇರಿದಾಗ ಮತ್ತು ಒಂದು ಕಚೇರಿ ಕಟ್ಟಡವನ್ನು ಮುಚ್ಚಿದಾಗ ಭದ್ರತೆ, ರಿಯಲ್ ಎಸ್ಟೇಟ್, ಅಡುಗೆ ಮತ್ತು ಇತರ ಉದ್ಯಮಗಳ ಮೇಲೆ ಪರಿಣಾಮವನ್ನು ಬೀರಿತು. ಈಗ ಅದು ಮತ್ತೆ ತೆರೆಯಲು ಆರಂಭಿಸಿದ್ದರಿಂದ ಪರಿಣಾಮವು ಹಿಮ್ಮುಖವಾಗಿ ಕೆಲಸ ಮಾಡುತ್ತದೆ ಮತ್ತು ಅನೇಕ ಉದ್ಯೋಗಗಳು ಸೃಷ್ಟಿಯಾಗುತ್ತವೆ,'' ಎಂದು ಅಭಿಪ್ರಾಯಿಸಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications