AI ಬಳಕೆಯಿಂದ ಭಾರತೀಯರಿಗೆ ಲಾಭ: ಐಟಿ ಕಾರ್ಯದರ್ಶಿ ಎಸ್.ಕೃಷ್ಣನ್ ಗುಡ್ನ್ಯೂಸ್
ಎಐ ಕೃತಕ ಬುದ್ಧಿಮತ್ತೆ (Artificial Intelligence)ಯಿಂದ ಭಾರತದಲ್ಲಿ ಲಕ್ಷಾಂತರ ಜನ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎನ್ನುವ ಆತಂಕದ ನಡುವೆಯೇ ಉದ್ಯೋಗಿಗಳು ಹಾಗೂ ಈಗ ಉದ್ಯೋಗ ಹುಡುಕುತ್ತಿರುವವರು ನಿಟ್ಟುಸಿರು ಬಿಡುವಂತಹ ಸುದ್ದಿಯೊಂದು ಬಂದಿದೆ. ಇದು ಭಾರತದ ಉದ್ಯೋಗ ಕ್ಷೇತ್ರದ ಮೇಲೆಯೂ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ. ಏನಿದು ಎನ್ನುವ ವಿವರ ಈ ಲೇಖನದಲ್ಲಿ ನೋಡೋಣ.
2025ನೇ ಸಾಲಿನಲ್ಲಿ ವಿಶ್ವದಾದ್ಯಂತ ಹೆಚ್ಚು ಚರ್ಚೆಯಾದ ವಿಷಯಗಳಲ್ಲಿ ಎಐ ಸಹ ಒಂದಾಗಿದೆ. ಎಐನಿಂದ ಜನ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎನ್ನುವ ವಿಷಯವು 2025ರಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಆದರೆ, ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಭಾರತವು ಎಐನಿಂದ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ವಿರಳವಾಗಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ (ಐಟಿ) ಕಾರ್ಯದರ್ಶಿ ಎಸ್ ಕೃಷ್ಣನ್ ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಎಐನಿಂದ ಭಾರತದಲ್ಲಿ ಹೆಚ್ಚು ಜನ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಕಡಿಮೆ ಇದೆ. ವಿದೇಶಗಳಲ್ಲಿ ಹೆಚ್ಚು ಜನ ಉದ್ಯೋಗದ ಸಣ್ಣ ಭಾಗವಾಗಿದ್ದಾರೆ ಮತ್ತು ಹೆಚ್ಚಾಗಿ STEM-ಚಾಲಿತ ವಲಯಗಳಲ್ಲಿ ಕೇಂದ್ರೀಕೃತ ವಾಗಿರುತ್ತವೆ. ಈ ರಚನಾತ್ಮಕ ವ್ಯತ್ಯಾಸವು ವ್ಯಾಪಕವಾದ ಉದ್ಯೋಗ ನಷ್ಟಗಳನ್ನು ಅನುಭವಿಸುವ ಬದಲು ಭಾರತವು AI ಯಿಂದ ಪ್ರಯೋಜನ ಪಡೆಯುವ ಸ್ಥಾನದಲ್ಲಿದೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ಉದ್ಯೋಗ ಕಳೆದುಕೊಳ್ಳುವುದಕ್ಕಿಂತಲೂ ಉದ್ಯೋಗ ಸೃಷ್ಟಿಗೆ ಭಾರತದಲ್ಲಿ ಎಐ ನೆರವಾಗಲಿದೆ ಎಂದು ಹೇಳಲಾಗಿದೆ.
ಭಾರತದಲ್ಲಿನ ಉದ್ಯೋಗಗಳು ಹಾಗೂ ಭಾರತೀಯರ ಉದ್ಯೋಗ ಸ್ಕಿಲ್ ವಿದೇಶದಲ್ಲಿನ ಉದ್ಯೋಗ ಹಾಗೂ ಉದ್ಯೋಗಿಗಳಿಗೆ ಹೋಲಿಕೆ ಮಾಡಿದರೆ ಭಿನ್ನವಾಗಿದೆ. ಅಲ್ಲದೇ ಎಐ ಭಾರತದ ಮೇಲೆ ಭಿನ್ನ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ. ಭಾರತದ ಉದ್ಯೋಗ ಕ್ಷೇತ್ರಗಳು ಹೆಚ್ಚು ವೈವಿಧ್ಯಮಯವಾಗಿದೆ. ಭಾರತದಲ್ಲಿ ಹೆಚ್ಚು ವಿಜ್ಞಾನ, ತಂತ್ರಜ್ಞಾನ ಹಾಗೂ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಬಳಕೆಯಲ್ಲಿದೆ.
ಇದು ಎಐ ತಂತ್ರಜ್ಞಾನ ವಿಕಸನಗೊಳ್ಳುತ್ತಿದ್ದಂತೆ ಕಾರ್ಮಿಕರಿಗೆ ಹೆಚ್ಚು ಸುಲಭವಾಗಿ ಹೊಂದಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇತರ ಉದ್ಯೋಗಗಳಿಗೆ ಹೋಲಿಸಿದರೆ ವೈಟ್-ಕಾಲರ್ (ಉನ್ನತ ಹುದ್ದೆಗಳಲ್ಲಿ ಇರುವವರು / ಉದ್ಯೋಗಿಗಳು) ಉದ್ಯೋಗಗಳ ಸಂಖ್ಯೆ ಪಶ್ಚಿಮಕ್ಕಿಂತ ಕಡಿಮೆ ಇರುವ ಭಾರತದಲ್ಲಿ, ತಂತ್ರಜ್ಞಾನ ಆಧಾರಿತ ಉದ್ಯೋಗಗಳಿಗೆ ಈ ಅಪಾಯವು ಇತರ ಸ್ಥಳಗಳಂತೆ ಗಂಭೀರವಾಗಿದೆ ಎಂದು ನಾನು ಭಾವಿಸುವುದಿಲ್ಲ. ಅಲ್ಲದೆ, ನಮ್ಮ ಹೆಚ್ಚಿನ ಉದ್ಯೋಗಗಳು STEM ಜಾಗದಲ್ಲಿವೆ ಮತ್ತು ನಮಗೆ ಅವಕಾಶವಿದೆ ಎಂದು ಅವರು ಹೇಳಿದ್ದಾರೆ.
ಎಐನಿಂದ ಲಾಭವಾಗಲಿದೆ
ಭೌತಿಕ ಕೆಲಸವನ್ನು ಹೆಚ್ಚಾಗಿ ಯಂತ್ರಗಳೊಂದಿಗೆ ಬದಲಾಯಿಸಿದ ಹಿಂದಿನ ಕೈಗಾರಿಕಾ ಕ್ರಾಂತಿಗಳಿಗಿಂತ ಭಿನ್ನವಾಗಿ, ಜ್ಞಾನ ಆಧಾರಿತ ಮತ್ತು ಅರಿವಿನ ಕಾರ್ಮಿಕರ ಮೇಲೆ ನೇರವಾಗಿ ಪರಿಣಾಮ ಬೀರುವ ಮೊದಲ ಪ್ರಮುಖ ತಂತ್ರಜ್ಞಾನ ಎಂದರೆ ಅದು ಎಐ ಆಗಿದೆ. ಆದಾಗ್ಯೂ ಎಐನಿಂದ ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತವಾಗಲಿದೆ ಎನ್ನುವುದನ್ನು ಅವರು ತಳ್ಳಿ ಹಾಕಿದ್ದಾರೆ.
ನಾವು ವೈಯಕ್ತಿಕವಾಗಿ ಆ ಹಂತವನ್ನು ಅಷ್ಟು ಆತುರದಿಂದ ತಲುಪುತ್ತೇವೆ ಎಂದು ನಾನು ವೈಯಕ್ತಿಕವಾಗಿ ಅನಿಸುವುದಿಲ್ಲ. ಎಐನಿಂದ ಇನ್ನಷ್ಟು ಪ್ರಗತಿ ಮತ್ತು ಅಭಿವೃದ್ಧಿ ಆಗಲಿದೆ. ಹೊಸ ತಂತ್ರಜ್ಞಾನವು ಸಹಕಾರಿ ಆಗಲಿದೆ ಎಂದು ಎಸ್ ಕೃಷ್ಣನ್ ಅವರು ತಿಳಿಸಿದ್ದಾರೆ.
ಮನುಷ್ಯರ ಅವಶ್ಯಕತೆ ಇರುತ್ತದೆ
ಇನ್ನು ಎಐ ಅಭಿವೃದ್ಧಿಯಾದರೂ ಎಐ ಮೇಲ್ವಿಚಾರಣೆಗೆ ಮನುಷ್ಯರ ಅವಶ್ಯಕತೆ ಇರಲಿದೆ. ಎಐ ತಂತ್ರಜ್ಞಾನದಿಂದ ಪ್ರಗತಿ ಹಾಗೂ ಕೆಲಸಗಳು ಬೇಗ ಆದರೂ ಸಹ ಅದನ್ನು ಪರಿಶೀಲನೆ ಮಾಡಿ ಅಂತಿಮ ಮಾಡುವುದಕ್ಕೆ ಮನುಷ್ಯರ ಅವಶ್ಯಕತೆ ಅತ್ಯವಶ್ಯಕ ಎಂದು ಹೇಳಿದ್ದಾರೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications