AI ಬಳಕೆಯಿಂದ ಭಾರತೀಯರಿಗೆ ಲಾಭ: ಐಟಿ ಕಾರ್ಯದರ್ಶಿ ಎಸ್.ಕೃಷ್ಣನ್ ಗುಡ್ನ್ಯೂಸ್
ಎಐ ಕೃತಕ ಬುದ್ಧಿಮತ್ತೆ (Artificial Intelligence)ಯಿಂದ ಭಾರತದಲ್ಲಿ ಲಕ್ಷಾಂತರ ಜನ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎನ್ನುವ ಆತಂಕದ ನಡುವೆಯೇ ಉದ್ಯೋಗಿಗಳು ಹಾಗೂ ಈಗ ಉದ್ಯೋಗ ಹುಡುಕುತ್ತಿರುವವರು ನಿಟ್ಟುಸಿರು ಬಿಡುವಂತಹ ಸುದ್ದಿಯೊಂದು ಬಂದಿದೆ. ಇದು ಭಾರತದ ಉದ್ಯೋಗ ಕ್ಷೇತ್ರದ ಮೇಲೆಯೂ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ. ಏನಿದು ಎನ್ನುವ ವಿವರ ಈ ಲೇಖನದಲ್ಲಿ ನೋಡೋಣ.
2025ನೇ ಸಾಲಿನಲ್ಲಿ ವಿಶ್ವದಾದ್ಯಂತ ಹೆಚ್ಚು ಚರ್ಚೆಯಾದ ವಿಷಯಗಳಲ್ಲಿ ಎಐ ಸಹ ಒಂದಾಗಿದೆ. ಎಐನಿಂದ ಜನ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎನ್ನುವ ವಿಷಯವು 2025ರಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಆದರೆ, ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಭಾರತವು ಎಐನಿಂದ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ವಿರಳವಾಗಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ (ಐಟಿ) ಕಾರ್ಯದರ್ಶಿ ಎಸ್ ಕೃಷ್ಣನ್ ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಎಐನಿಂದ ಭಾರತದಲ್ಲಿ ಹೆಚ್ಚು ಜನ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಕಡಿಮೆ ಇದೆ. ವಿದೇಶಗಳಲ್ಲಿ ಹೆಚ್ಚು ಜನ ಉದ್ಯೋಗದ ಸಣ್ಣ ಭಾಗವಾಗಿದ್ದಾರೆ ಮತ್ತು ಹೆಚ್ಚಾಗಿ STEM-ಚಾಲಿತ ವಲಯಗಳಲ್ಲಿ ಕೇಂದ್ರೀಕೃತ ವಾಗಿರುತ್ತವೆ. ಈ ರಚನಾತ್ಮಕ ವ್ಯತ್ಯಾಸವು ವ್ಯಾಪಕವಾದ ಉದ್ಯೋಗ ನಷ್ಟಗಳನ್ನು ಅನುಭವಿಸುವ ಬದಲು ಭಾರತವು AI ಯಿಂದ ಪ್ರಯೋಜನ ಪಡೆಯುವ ಸ್ಥಾನದಲ್ಲಿದೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ಉದ್ಯೋಗ ಕಳೆದುಕೊಳ್ಳುವುದಕ್ಕಿಂತಲೂ ಉದ್ಯೋಗ ಸೃಷ್ಟಿಗೆ ಭಾರತದಲ್ಲಿ ಎಐ ನೆರವಾಗಲಿದೆ ಎಂದು ಹೇಳಲಾಗಿದೆ.
ಭಾರತದಲ್ಲಿನ ಉದ್ಯೋಗಗಳು ಹಾಗೂ ಭಾರತೀಯರ ಉದ್ಯೋಗ ಸ್ಕಿಲ್ ವಿದೇಶದಲ್ಲಿನ ಉದ್ಯೋಗ ಹಾಗೂ ಉದ್ಯೋಗಿಗಳಿಗೆ ಹೋಲಿಕೆ ಮಾಡಿದರೆ ಭಿನ್ನವಾಗಿದೆ. ಅಲ್ಲದೇ ಎಐ ಭಾರತದ ಮೇಲೆ ಭಿನ್ನ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ. ಭಾರತದ ಉದ್ಯೋಗ ಕ್ಷೇತ್ರಗಳು ಹೆಚ್ಚು ವೈವಿಧ್ಯಮಯವಾಗಿದೆ. ಭಾರತದಲ್ಲಿ ಹೆಚ್ಚು ವಿಜ್ಞಾನ, ತಂತ್ರಜ್ಞಾನ ಹಾಗೂ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಬಳಕೆಯಲ್ಲಿದೆ.
ಇದು ಎಐ ತಂತ್ರಜ್ಞಾನ ವಿಕಸನಗೊಳ್ಳುತ್ತಿದ್ದಂತೆ ಕಾರ್ಮಿಕರಿಗೆ ಹೆಚ್ಚು ಸುಲಭವಾಗಿ ಹೊಂದಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇತರ ಉದ್ಯೋಗಗಳಿಗೆ ಹೋಲಿಸಿದರೆ ವೈಟ್-ಕಾಲರ್ (ಉನ್ನತ ಹುದ್ದೆಗಳಲ್ಲಿ ಇರುವವರು / ಉದ್ಯೋಗಿಗಳು) ಉದ್ಯೋಗಗಳ ಸಂಖ್ಯೆ ಪಶ್ಚಿಮಕ್ಕಿಂತ ಕಡಿಮೆ ಇರುವ ಭಾರತದಲ್ಲಿ, ತಂತ್ರಜ್ಞಾನ ಆಧಾರಿತ ಉದ್ಯೋಗಗಳಿಗೆ ಈ ಅಪಾಯವು ಇತರ ಸ್ಥಳಗಳಂತೆ ಗಂಭೀರವಾಗಿದೆ ಎಂದು ನಾನು ಭಾವಿಸುವುದಿಲ್ಲ. ಅಲ್ಲದೆ, ನಮ್ಮ ಹೆಚ್ಚಿನ ಉದ್ಯೋಗಗಳು STEM ಜಾಗದಲ್ಲಿವೆ ಮತ್ತು ನಮಗೆ ಅವಕಾಶವಿದೆ ಎಂದು ಅವರು ಹೇಳಿದ್ದಾರೆ.
ಎಐನಿಂದ ಲಾಭವಾಗಲಿದೆ
ಭೌತಿಕ ಕೆಲಸವನ್ನು ಹೆಚ್ಚಾಗಿ ಯಂತ್ರಗಳೊಂದಿಗೆ ಬದಲಾಯಿಸಿದ ಹಿಂದಿನ ಕೈಗಾರಿಕಾ ಕ್ರಾಂತಿಗಳಿಗಿಂತ ಭಿನ್ನವಾಗಿ, ಜ್ಞಾನ ಆಧಾರಿತ ಮತ್ತು ಅರಿವಿನ ಕಾರ್ಮಿಕರ ಮೇಲೆ ನೇರವಾಗಿ ಪರಿಣಾಮ ಬೀರುವ ಮೊದಲ ಪ್ರಮುಖ ತಂತ್ರಜ್ಞಾನ ಎಂದರೆ ಅದು ಎಐ ಆಗಿದೆ. ಆದಾಗ್ಯೂ ಎಐನಿಂದ ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತವಾಗಲಿದೆ ಎನ್ನುವುದನ್ನು ಅವರು ತಳ್ಳಿ ಹಾಕಿದ್ದಾರೆ.
ನಾವು ವೈಯಕ್ತಿಕವಾಗಿ ಆ ಹಂತವನ್ನು ಅಷ್ಟು ಆತುರದಿಂದ ತಲುಪುತ್ತೇವೆ ಎಂದು ನಾನು ವೈಯಕ್ತಿಕವಾಗಿ ಅನಿಸುವುದಿಲ್ಲ. ಎಐನಿಂದ ಇನ್ನಷ್ಟು ಪ್ರಗತಿ ಮತ್ತು ಅಭಿವೃದ್ಧಿ ಆಗಲಿದೆ. ಹೊಸ ತಂತ್ರಜ್ಞಾನವು ಸಹಕಾರಿ ಆಗಲಿದೆ ಎಂದು ಎಸ್ ಕೃಷ್ಣನ್ ಅವರು ತಿಳಿಸಿದ್ದಾರೆ.
ಮನುಷ್ಯರ ಅವಶ್ಯಕತೆ ಇರುತ್ತದೆ
ಇನ್ನು ಎಐ ಅಭಿವೃದ್ಧಿಯಾದರೂ ಎಐ ಮೇಲ್ವಿಚಾರಣೆಗೆ ಮನುಷ್ಯರ ಅವಶ್ಯಕತೆ ಇರಲಿದೆ. ಎಐ ತಂತ್ರಜ್ಞಾನದಿಂದ ಪ್ರಗತಿ ಹಾಗೂ ಕೆಲಸಗಳು ಬೇಗ ಆದರೂ ಸಹ ಅದನ್ನು ಪರಿಶೀಲನೆ ಮಾಡಿ ಅಂತಿಮ ಮಾಡುವುದಕ್ಕೆ ಮನುಷ್ಯರ ಅವಶ್ಯಕತೆ ಅತ್ಯವಶ್ಯಕ ಎಂದು ಹೇಳಿದ್ದಾರೆ.
-
ಒಂದೇ ವರ್ಷದಲ್ಲಿ 800 ಕೋಟಿ ರೂ ಮೌಲ್ಯದ ಕಂಪನಿ ಕಟ್ಟಿದ 23ರ ಹರೆಯದ ಅಂಜಲಿ ಸರ್ದಾನಾ -
Vrial News: ಕೆಲಸದಿಂದ ತೆಗೆದ ಬಳಿಕ ಪುಕ್ಕಟೆ ಸಹಾಯ ಕೇಳಿದ ಮಾಜಿ ಬಾಸ್: ನೌಕರ ಕೊಟ್ಟ ಉತ್ತರ ವೈರಲ್ -
Today Horoscope Mar 3: ಹುಣ್ಣಿಮೆಯ ದಿನ ಚಂದ್ರಗ್ರಹಣ, ಈ ರಾಶಿಯವರ ಆರೋಗ್ಯದಲ್ಲಿ ಏರುಪೇರು -
Property: ಖಾತಾ ಎಂದರೇನು, ಇ, ಬಿ - ಎ ಖಾತಾಗಳ ವ್ಯತ್ಯಾಸ, ಆಸ್ತಿದಾರರಿಗೆ ಹೇಗೆ ಲಾಭ ಇಲ್ಲಿದೆ ಸಂಪೂರ್ಣ ವಿವರ -
National Highway: ರಾಷ್ಟ್ರೀಯ ಹೆದ್ದಾರಿ-373 ಕಾಮಗಾರಿ ಎಲ್ಲಿಗೆ ಬಂತು? -
ಬೆಂಗಳೂರು ಆಡಳಿತ ಬಿಬಿಎಂಪಿಯಿಂದ ಜಿಬಿಎಗೆ: 5 ಪಾಲಿಕೆಗಳ ರಚನೆ, ಹೊಸ ಪ್ರದೇಶಗಳ ಸೇರ್ಪಡೆಯಿಂದ ರಿಯಲ್ ಎಸ್ಟೇಟ್ಗೆ ಬಂಪರ್ -
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆ ಸಂಭ್ರಮ: 'ಸಂಗೀತ' ರಾತ್ರಿಯ ನೆನಪುಗಳನ್ನು ಹಂಚಿಕೊಂಡ ನಟಿ -
RCB: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐದು ಪಂದ್ಯಗಳ ಆಯೋಜನೆಗೆ ಆರ್ಸಿಬಿ ಒಪ್ಪಿಗೆ -
Dharavi Slum: ಏಷ್ಯಾದ ದೊಡ್ಡ ಕೊಳಗೇರಿ ಧಾರಾವಿಯಲ್ಲಿ ಬಡತನವೂ ಬಂಡವಾಳ, ಧಾರಾವಿ ಸಂಪೂರ್ಣ ವಿವರ ಇಲ್ಲಿದೆ -
ದುಬೈಯಿಂದ ತಾಯ್ನಾಡಿಗೆ ಮರಳಿದ ಕನ್ನಡಿಗರು: ಪಿ.ವಿ ಸಿಂಧು, ಭೋಜೇಗೌಡ ಸೇರಿದಂತೆ ಹಲವರು ಬೆಂಗಳೂರಿಗೆ ವಾಪಾಸ್ -
ಇರಾನ್-ಇಸ್ರೇಲ್ ಸಂಘರ್ಷ: ಕತಾರ್ನಲ್ಲಿ LNG ಉತ್ಪಾದನೆ ಸ್ಥಗಿತ: ಗಗನಕ್ಕೇರಿದ ತೈಲ ಮತ್ತು ಅನಿಲ ಬೆಲೆ -
Fuel Price: ತೀವ್ರಗೊಂಡ ಯುದ್ಧದ ಕಿಚ್ಚು, ಕಚ್ಚಾ ತೈಲ ದರ ಏರಿಕೆಯಾದರೂ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರ












Click it and Unblock the Notifications